Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇರಳದಲ್ಲಿ ಮನಕಲಕುವ ಘಟನೆ: 9 ತಿಂಗಳ ಮಗುವಿನ ಲಿವರ್ ದಾನ ಪಡೆದ ಮಗು ಇಂದು ದಂಪತಿಯ ಮಡಿಲಲ್ಲಿ!

Spread the love

ತಿರುವನಂತಪುರಂ: ಅಂದು ಕುಟುಂಬಸ್ಥರೊಂದಿಗೆ ಹೊರಟಿದ್ದ ಆ ಕಂದಮ್ಮನನ್ನು ಯಮರಾಜ ತಂದೆ, ತಾಯಿ ನೋವನ್ನೂ ಅರಿಯದೇ ತನ್ನೂರಿಗೆ ಕರೆದೊಯ್ದ. ಆದರೆ ಪೋಷಕರು ತಮಗಾದ ನೋವು ಬೇರೆಯವರಿಗೆ ಆಗದಿರಲೆಂದು ಮಗಳ ಅಂಗಾಂಗವನ್ನು ದಾನ ಮಾಡಿ, ಇಂದು ಮರುಜೀವ ಪಡೆದ ಮಗುವನ್ನು ಎತ್ತಿ ಮುದ್ದಾಡಿದ್ದಾರೆ.

ರಸ್ತೆ ಅಪಘಾತದಲ್ಲಿ ಮಗಳು ಅಲಿನ್‌ಳನ್ನು (Aalin Sherin) ಕಳೆದುಕೊಂಡಿದ್ದ ಕೇರಳ (Kerala) ದಂಪತಿ ಅರುಣ್ ಹಾಗೂ ಶೆರಿನ್ ಬೇರೆ ಮಕ್ಕಳ ಜೀವ ಉಳಿಸುವ ಸಲುವಾಗಿ ಅಂಗಾಂಗ ದಾನ ಮಾಡುವ ಮಹತ್ತರ ನಿರ್ಧಾರ ತೆಗೆದುಕೊಂಡಿದ್ದರು. 9 ತಿಂಗಳ ಮಗುವಿನಿಂದ ಯಕೃತ್ತು ದಾನ ಪಡೆದು ಮರುಜೀವ ಪಡೆದ ಮಗು ಇಂದು ಅಲಿನ್ ಪೋಷಕರ ಮಡಿಲಲ್ಲಿ ಆಟವಾಡಿದೆಅಂಗಾಂಗ ದಾನ ಮಾಡಿದ ಬಳಿಕ ಮೊದಲ ಬಾರಿಗೆ ದಾನ ಪಡೆದ ಮಗುವನ್ನು ಶೆರಿನ್ ದಂಪತಿ ಭೇಟಿ ಮಾಡಿದ್ದು, ಅಲಿನ್ ತಾಯಿ ಹಾಗೂ ಮಗುವಿನ ಭೇಟಿಯ ಭಾವನಾತ್ಮಕ ಕ್ಷಣಕ್ಕೆ ಕೇರಳದ ತಿರುವಂತನಂತಪುರಂನ ಕಿಮ್ಸ್‌ ಹೆಲ್ತ್‌ ಆಸ್ಪತ್ರೆಯಲ್ಲಿ ಸಾಕ್ಷಿಯಾಗಿದೆ. ಇತ್ತ ಅಂಗಾಂಗ ದಾನ ಮಾಡಿ ಜೀವ ಉಳಿಸಿದ್ದಕ್ಕಾಗಿ ತಮ್ಮ ಮಗುವನ್ನು ಅಲಿನ್ ತಾಯಿಯ ಮಡಿಲಲ್ಲಿಟ್ಟು ಹೆತ್ತವರು ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಮಗುವನ್ನೇ ಕಣ್ಣಾರೆ ಕಂಡಂತೆ ಶೆರಿನ್ ದಂಪತಿ ಕಣ್ಣೀರಿಟ್ಟಿದ್ದಾರೆ.ಸಾಮಾನ್ಯವಾಗಿ ಅಂಗಾಂಗ ದಾನ ಪಡೆದುಕೊಳ್ಳುವವರ ವಿವರವನ್ನು ಅಂಗಾಂಗ ದಾನ ಮಾಡಿರುವ ಕುಟುಂಬಕ್ಕೆ ಬಹಿರಂಗಪಡಿಸುವುದಿಲ್ಲ. ಆದರೆ ಮಾನವೀಯ ದೃಷ್ಟಿಯಿಂದ ಅಲಿನ್ ಹೆತ್ತವರ ಬಹುದೊಡ್ಡ ತ್ಯಾಗಕ್ಕೆ ಪ್ರತಿಯಾಗಿ ಅವರ ನೋವು ಕಡಿಮೆ ಮಾಡಲು ವೈದ್ಯರು ಹಾಗೂ ಕುಟುಂಬಸ್ಥರು ಕಂದನನ್ನು ತೋರಿಸಿದ್ದಾರೆ.ಪ್ರಪಂಚ ನೋಡುವ ಮುನ್ನವೇ ಕಣ್ಮುಚ್ಚಿದ ಕಂದಮ್ಮ – ಅಂದು ಆಗಿದ್ದೇನು?
2025ರ ಫೆ.5ರಂದು ಮಧ್ಯಾಹ್ನ ಸುಮಾರು 2:30ರ ವೇಳೆಗೆ ಅಲಿನ್ ಶೆರಿನ್ ತನ್ನ ಕುಟುಂಬದೊಂದಿಗೆ ಕೊಟ್ಟಾಯಂನಿಂದ ಎಂ.ಸಿ ರಸ್ತೆ ಮೂಲಕ ತಿರುವಲ್ಲಾಗೆ ಪ್ರಯಾಣಿಸುತ್ತಿದ್ದಳು. ಆದ್ರೆ ಆ ದಿನ ಅಲಿನ್ ಬಾಳಲ್ಲಿ ವಿಧಿ ಆಟ ಆಡಿತ್ತು.ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ಕೊಟ್ಟಾಯಂನ ಪಲ್ಲಂ ಜಂಕ್ಷನ್ ಬಳಿ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಅಲಿನ್‌ಗೆ ಗಂಭೀರ ಗಾಯವಾಗಿತ್ತು. ಆಕೆಯ ಪೋಷಕರು, ಅಜ್ಜ, ಅಜ್ಜಿ ಸಣ್ಣಪುಟ್ಟ ಗಾಯದಿಂದ ಬದುಕುಳಿದರು. ತಕ್ಷಣವೇ ಅಲಿನ್‌ಳನ್ನ ತಿರುವಲ್ಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದರು. ಬಳಿಕ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ, ಪೋಷಕರ ಸತತ ಪ್ರಯತ್ನದಿಂದಲೂ ಅಲಿನ್ ಬದುಕುಳಿಯಲಿಲ್ಲ. ಫೆಬ್ರುವರಿ 10 ರಂದು ಅಲಿನ್ ನಿಧನಳಾದಳು ಎಂದು ಅಮೃತಾ ಆಸ್ಪತ್ರೆಯ ವೈದ್ಯರು ಘೋಷಿಸಿದರು.
ಅತೀವ ದುಃಖದ ನಡುವೆಯೂ ಆಲಿನ್ ಪೋಷಕರು ಆಂಗಾಂಗ ದಾನಕ್ಕೆ ಸಮ್ಮತಿಸಿದರು. ಕಣ್ಣು, ಹೃದಯ, ಕಿಡ್ನಿ ಮತ್ತೀತರ ಉಪಯುಕ್ತ ಅಂಗಾಂಗಗಳನ್ನ ತಿರುವನಂತಪುರದ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ಅಂಗಾಂಗಗಳ ರವಾನೆಗೆ ಕೊಚ್ಚಿ ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.


Spread the love
Share:

administrator

Leave a Reply

Your email address will not be published. Required fields are marked *