Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಪಘಾ*ತದ ಬಳಿಕ ಅಚಲ ಪ್ರೀತಿ: ಗಾಯಗೊಂಡ ವಧುವನ್ನು ಆಸ್ಪತ್ರೆಯಲ್ಲೇ ವರಿಸಿದ ವರ

Spread the love

ಕಾನ್ಪುರ: ಹಳದಿ ಶಾಸ್ತ್ರದ ವೇಳೆ ಸಂಭವಿಸಿದ ಸ್ಫೋಟದಲ್ಲಿ ಯುವತಿ ದೇಹ ಸುಟ್ಟು ಹೋಗಿದ್ದರೂ, ವರ ಆಕೆಯೇ ಬೇಕೆಂದು ಹಠ ತೊಟ್ಟು ಮದುವೆಯಾಗಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಮದುವೆಯ ಮುನ್ನಾದಿನದ ಹಳದಿ (Haldi) ಶಾಸ್ತ್ರದ ಸಂಭ್ರಮದಲ್ಲಿದ್ದಾಗ, ದಿಢೀರನೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ವಧು ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ದೇಹ ಸುಟ್ಟುಹೋಗಿದ್ದರಿಂದ ವಧುವಿನ ಕುಟುಂಬಸ್ಥರು ಮದುವೆ ಮುರಿದುಬೀಳಬಹುದು ಎಂಬ ಆತಂಕದಲ್ಲಿದ್ದರು.
ಆದರೆ, ಕಷ್ಟದ ಸಮಯದಲ್ಲಿ ಕೈಬಿಡದ ವರ, ರೂಪಕ್ಕಿಂತ ಗುಣವೇ ಮುಖ್ಯ ಎಂದು ಆಸ್ಪತ್ರೆಯಲ್ಲೇ ಆಕೆಯ ಕೈ ಹಿಡಿದು ಮದುವೆಯಾಗಿದ್ದಾನೆ. ವರನ ನಿರ್ಧಾರ ಮತ್ತು ಧೈರ್ಯಕ್ಕೆ ದೇಶಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಈ ದಂಪತಿ ನಿಜವಾದ ಪ್ರೀತಿಗೆ ಅತ್ಯಮೂಲ್ಯ ಉದಾಹರಣೆಯಾಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *