ಬೆಳ್ತಂಗಡಿ: ಗುರುವಾಯನಕೆರೆ ಶಾಲೆ ಮೈದಾನದ ಬಳಿ ಮಾದಕ ದ್ರವ್ಯ ಮಾರಾಟ ಯತ್ನ – ಗಾಂಜಾ, ಎಂಡಿಎಂಎ ಜೊತೆ ಇಬ್ಬರ ಬಂಧನ!

ಬೆಳ್ತಂಗಡಿ: ಗುರುವಾಯನಕೆರೆ ಶಾಲೆ ಮೈದಾನದ ಬಳಿ ಮಾದಕ ದ್ರವ್ಯ ಮಾರಾಟ ಯತ್ನ – ಗಾಂಜಾ, ಎಂಡಿಎಂಎ ಜೊತೆ ಇಬ್ಬರ ಬಂಧನ!

ಬಂಧಿತರನ್ನು ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ತ್ವಲಹ್ ಅಲಿಯಾಸ್ ಅಜ್ಜರ್ ಅಲಿಯಾಸ್ ಅನ್ಸಾರ್ (21) ಮತ್ತು ಪಿಲಿಚಂಡಿಕಲ್ಲು ನಿವಾಸಿ ಇಬ್ರಾಹಿಂ (29) ಎಂದು ಗುರುತಿಸಲಾಗಿದೆ.ಗುಡ್ಡಗಾಡು ಮತ್ತು ಅರಣ್ಯ ಪ್ರದೇಶದಲ್ಲಿ ದ್ವಿಚಕ್ರ ವಾಹನಗಳ ಬಳಿ ನಾಲ್ವರು ವ್ಯಕ್ತಿಗಳು ನಿಂತಿರುವುದನ್ನು ಪೊಲೀಸರು ಗಮನಿಸಿದರು. ಪೊಲೀಸರು ಅವರ ಬಳಿಗೆ ಬಂದಾಗ, ಗುಂಪು ಪರಾರಿಯಾಗಲು ಪ್ರಯತ್ನಿಸಿತ್ತು. ಪೊಲೀಸರು ಬೆನ್ನಟ್ಟಿ ಅವರಲ್ಲಿ ಇಬ್ಬರನ್ನು ಹಿಡಿದ್ದಾರೆ.ಅನ್ಸಾರ್ ನಿಂದ 5,000 ರೂ. ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಇಬ್ರಾಹಿಂ ನಿಂದ 29 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಸ್ಥಳದಿಂದ ಪರಾರಿಯಾಗಿರುವ ಹಮ್ಜತ್ ಕರಾರ್ ಮತ್ತು ನೌಶಾದ್ ಗಾಗಿ ಬೆಳ್ತಂಗಡಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.