Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಖ್ಯಾತ ನಿರ್ದೇಶಕ, ನಟ ಕೆ. ಭಾಗ್ಯರಾಜ್ ವಿಧಿವಶ: ಚಿತ್ರರಂಗದಲ್ಲಿ ಆವರಿಸಿದ ಶೋಕ!

Spread the love

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರಕಥೆಗಾರ ಕೆ. ಭಾಗ್ಯರಾಜ್ ಅವರು ‘ಶನಿವಾರ ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಭಾಗ್ಯರಾಜ್ ಅವರು ಪತ್ನಿ – ನಟಿ ಪೂರ್ಣಿಮಾ ಭಾಗ್ಯರಾಜ್, ಪುತ್ರ – ನಟ ಶಾಂತನು ಭಾಗ್ಯರಾಜ್ ಮತ್ತು ಪುತ್ರಿ ಶರಣ್ಯ ಭಾಗ್ಯರಾಜ್ ಅವರನ್ನು ಅಗಲಿದ್ದಾರೆ.
ತಮ್ಮ ನಿಧನಕ್ಕೂ ಕೆಲವೇ ದಿನಗಳ ಮೊದಲು ಅವರು ನಟಿ ಮತ್ತು ರಾಜಕಾರಣಿ ಖುಷ್ಟು ಸುಂದರ್ ಅವರ ಪುತ್ರಿಯ ಗೋವಾದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಕೊನೆಯ ದಿನಗಳವರೆಗೂ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ತಮಿಳು ಚಿತ್ರರಂಗದಲ್ಲಿ ವಿಶಿಷ್ಟ ಕಥನ ಶೈಲಿ ಮತ್ತು ಹಾಸ್ಯಮಯ ನಿರೂಪಣೆಗೆ ಹೆಸರುವಾಸಿಯಾಗಿದ್ದ ಭಾಗ್ಯರಾಜ್ ಅವರು ಹಲವು ದಶಕಗಳ ಕಾಲ ನಿರ್ದೇಶಕ, ನಟ ಮತ್ತು ಚಿತ್ರಕಥೆಗಾರರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ ಅವರು ಅನೇಕ ಹೊಸ ಕಲಾವಿದರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ್ದರು.
‘ಮುಂಡಾನೈ ಮುಡಿಚು’, ‘ಚಿನ್ನ ವೀಡು’, ‘ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್’, ‘ಸುಂದರ ಕಾಂಡಂ’ ಮತ್ತು ‘ಎಂಗ ಚಿನ್ನ ರಾಸಾ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು.
ಭಾಗ್ಯರಾಜ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ತಮಿಳು ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದು, ತಮಿಳು ಸಿನಿರಂಗವು ತನ್ನ ಪ್ರಮುಖ ಸೃಜನಶೀಲ ವ್ಯಕ್ತಿತ್ವವೊಂದನ್ನು ಕಳೆದುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *