Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದೇವತೆಗಳ ಊಟ ಎಂಬ ಅರ್ಥ ಉಳ್ಳ ಬೇಕರಿ ಈಗ 2500 ಕೋಟಿಗೆ ಮಾರಾಟವಾಗುತ್ತಿರೋದೇಕೆ?

ಭಾರತದ ಜನಪ್ರಿಯ ಬೇಕರಿ ಚೈನ್ Theobroma ಇದೀಗ ಪ್ರೈವೇಟ್ ಈಕ್ವಿಟಿ ಫರ್ಮ್ ಕ್ರಿಸ್‌ಕ್ಯಾಪಿಟಲ್ (ChrysCapital) ಒಡೆತನಕ್ಕೆ ಸೇರಿದೆ. ಇಕಾನಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಚೈನ್ ಥಿಯೋಬ್ರೊಮಾ ಬೇಕರಿಯ ಶೇ.90ರಷ್ಟು ಪಾಲುದಾರಿಕೆಯನ್ನು 2,410 ಕೋಟಿ ರೂ.ಗಳಿಗೆ

ದೇಶ - ವಿದೇಶ

ಮೈಯೆಲ್ಲಾ ರಕ್ತ, ತಂದೆಯ ಪೀಡೆಗೆ ಬೇಸತ್ತು ಸಾಯಲು ಬಂದ ಏಳು ವರ್ಷದ ಬಾಲಕಿ

ಲಕ್ನೋ:  ಏಳು ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಳ್ಳಲು ಆಲೋಚಿಸಿದ್ದಳು ಎಂದರೆ ಆಕೆ ಎಷ್ಟೆಲ್ಲಾ ತೊಂದರೆಗಳನ್ನು ಎದುರಿಸಿರಬಹುದು. ಆಕೆಯ ಮೈಯಿಂದ ರಕ್ತ ತೊಟ್ಟಿಕ್ಕುತ್ತಿತ್ತು. ರೈಲ್ವೆ ಹಳಿಯಲ್ಲಿ ರೈಲು ಬರುವ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಲೇ ಇದ್ದಳು.  ಆಕೆಗಿನ್ನೂ 7 ವರ್ಷ. ಈಗಷ್ಟೇ ಪ್ರಪಂಚ ಕಾಣುತ್ತಿರುವ ಮುಗ್ದ ಜೀವ. ಆಗಲೇ ಸಾಯಲು ನಿರ್ಧರಿಸಿದ್ದಳು. ತಂದೆ ವಿಪರೀತ ಹೊಡೆದಿದ್ದ, ಇಡೀ ಮೈಯೆಲ್ಲಾ ರಕ್ತವಾಗಿತ್ತು. ಕೂಡಲೇ ಅಲ್ಲಿ ಹೋಗುತ್ತಿರುವವರು ಯಾರೋ ಆಕೆಯನ್ನು ನೋಡಿ ಓಡಿ ಹೋಗಿ ರಕ್ಷಿಸಿದ್ದಾರೆ. ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರೈಲಿಗೆ ತಲೆ ಕೊಟ್ಟು ಸಾಯೋಣವೆಂದೇ ಇಲ್ಲಿಗೆ ಬಂದಿದ್ದೇನೆ ಎಂದು ರೋಶ್ನಿ ತಿಳಿಸಿದಾಗ ಎಲ್ಲರೂ ಒಮ್ಮೆ ಬೆಚ್ಚಿಬಿದ್ದಿದ್ದಾರೆ. ಆಕೆಯ ತಂದೆ ದಿನವೂ ಚಿತ್ರಹಿಂಸೆ ಕೊಡುತ್ತಿದ್ದ, ಶಾಲೆಗೂ ಕಳುಹಿಸುತ್ತಿರಲಿಲ್ಲ, ಮನೆ ಕೆಲಸಕ್ಕೆ ಹೋಗುವಂತೆ ಒತ್ತಾಯಿಸುತ್ತಿದ್ದ.  ಮಹಡಿಯಿಂದ ಕೆಳಗೆ ತಳ್ಳಿದ್ದಾಗಿಯೂ ಆಕೆ ಅಳಲು ತೋಡಿಕೊಂಡಿದ್ದಾಳೆ. ಹಾಗಾಗಿಯೇ ಆಕೆ ಸಾಯುವ ಆಲೋಚನೆ ಮಾಡಿರುವುದಾಗಿ ತಿಳಿಸಿದ್ದಾಳೆ, ರೋಶ್ನಿಯ ತಂದೆ ಸಂತೋಷ್ ರಜಪೂತ್​ಗೆ ಈಗಾಗಲೇ ಐದು ಮಕ್ಕಳಿದ್ದು ಮತ್ತು ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ. ಅವರ ಆರ್ಥಿಕ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲದ ಕಾರಣ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೆಲ್ಲಾ ಘಟನೆ ಕೇಳಿದ ರೈತರೊಬ್ಬರು ರೋಶ್ನಿಯನ್ನು ದತ್ತು ಪಡೆಯುವ ನಿರ್ಧಾರ ಮಾಡಿದ್ದಾರೆ. ಅವರಿಗೆ ಈಗಾಗಲೇ ಒಬ್ಬ ಮಗನಿದ್ದು, ಹೆಣ್ಣು ಮಗು ಬೇಕೆಂದು ಬಯಸಿದ್ದರು. ಈಗ ಆ ಬಾಲಕಿಯನ್ನು ಶಾಲೆಗೆ ಸೇರಿಸಿದ್ದು, ಹೊಸ ಬಟ್ಟೆಗಳನ್ನು ಕೂಡ ಕೊಡಿಸಿದ್ದಾರೆ. ಈ ನಿಟ್ಟಿನಲ್ಲಿ, ಕಾನೂನು ಪ್ರಕ್ರಿಯೆ ಇಲ್ಲದೆ ನೇರ ದತ್ತು ಸ್ವೀಕಾರವನ್ನು ತಪ್ಪಿಸಬೇಕು ಎಂದು ಪೊಲೀಸರು ಹೇಳಿದ್ದಾರೆ. ಆದ್ದರಿಂದ, ಹುಡುಗಿಯನ್ನು ಈಗ ಅವಳ ತಂದೆಗೆ ಹಿಂತಿರುಗಿಸಲಾಗಿದೆ. ಈ ಘಟನೆಯು ಮಕ್ಕಳ ರಕ್ಷಣೆಯ ವಿಷಯದ ಬಗ್ಗೆ ಸಮಾಜದಲ್ಲಿ ಮತ್ತೊಮ್ಮೆ ಒಂದು ಪ್ರಮುಖ

ಕರ್ನಾಟಕ

ಈ ಎಣ್ಣೆ ಅಡುಗೆಯಲ್ಲಿ ಬಳಸಿದರೆ ಆಹಾರವೇ ಆರೋಗ್ಯಕ್ಕೆ ವಿಷ- ಸಂಶೋಧನ ಕೇಂದ್ರದಿಂದ ಎಚ್ಚರಿಕೆ

ನೀವೆಲ್ಲರೂ ಅಡುಗೆ ಮಾಡುವಾಗ ಎಣ್ಣೆಯನ್ನ ಬಳಸುತ್ತಿರಬೇಕು. ಎಣ್ಣೆ ಇಲ್ಲದೆ ತರಕಾರಿಗಳಿಗೆ ಯಾವುದೇ ಮೌಲ್ಯವಿಲ್ಲ ಮತ್ತು ಬಹುತೇಕ ಪ್ರತಿಯೊಂದು ಖಾದ್ಯಕ್ಕೂ ಎಣ್ಣೆಯ ಬಳಕೆ ಅಗತ್ಯ. ಆದರೆ ತಿಳಿಯಿರಿ ಅದರ ಬಳಕೆಯು ಸಾವಿರಾರು ಜನರ ಜೀವಗಳನ್ನ ಬಲಿ

ಕರ್ನಾಟಕ

ಜಿಎಸ್‌ಟಿ ನೋಟಿಸ್ ವಿರುದ್ಧ ಸಣ್ಣ ವ್ಯಾಪಾರಿ ಪ್ರತಿಭಟನೆ-ಗುಟ್ಕಾ, ಸಿಗರೇಟ್ ಅಂಗಡಿಗಳು ಬಂದ್

ರಾಜ್ಯದಲ್ಲಿ ಬೃಹತ್‌ ಮಟ್ಟದ್ದಲ್ಲಿ ಮತ್ತೊಂದು ಬಂದ್‌ಗೆ ಕರೆ ನೀಡಲಾಗಿದೆ. ಈ ಹಿಂದೆ ಒಂದು ದಿನ ಮಾತ್ರವೇ ಅಖಂಡ ಕರ್ನಾಟಕ ಬಂದ್‌ ನಡೆಯುತ್ತಿತ್ತು. ಆದರೆ ಈ ಬಾರಿ ಸತತ ಮೂರು ದಿನಗಳ ಕಾಲ ಬಂದ್‌ಗೆ ಕರೆ

ಅಪರಾಧ ದೇಶ - ವಿದೇಶ

ಅಶ್ಲೀಲ ಕೃತ್ಯಕ್ಕೆ ಮಹಿಳೆಯರಿಂದ ಚಪ್ಪಲಿ ಏಟು ತಿಂದ ಬಿಜೆಪಿ ನಾಯಕ -ವಿಡಿಯೋ ವೈರಲ್

ಲಖನೌ:ಉತ್ತರ ಪ್ರದೇಶದ (Uttara Pradesh) ಬಿಜೆಪಿ ನಾಯಕನೊಬ್ಬ ಪಕ್ಷದ ಮಹಿಳಾ (Viral Video) ಕಾರ್ಯಕರ್ತರಿಗೆ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಆತನಿಗೆ ಚಪ್ಪಲಿಯಿಂದ ಹೊಡೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ನಾಯಕನನ್ನು

ದೇಶ - ವಿದೇಶ

‘ಅಂದು ಸಂಜಯ್ ದತ್ ಮಾಹಿತಿ ನೀಡಿದ್ದರೆ 257 ಪ್ರಾಣ ಉಳಿಸಬಹುದಿತ್ತು’-ಉಜ್ವಲ್ ನಿಕಮ್

ಸಂಜಯ್ ದತ್ , ಬಾಲಿವುಡ್​ನ ಸ್ಟಾರ್ ನಟ. ಅದರ ಜೊತೆಗೆ ವಿವಾದಾತ್ಮಕ ನಟ ಸಹ ಹೌದು. ಮಾದಕ ವ್ಯಸನ, ಡೇಟಿಂಗ್ ಚಟ, ನಟಿಯರೊಂದಿಗೆ ಸಂಬಂಧ ಇದೆಲ್ಲದರ ಜೊತೆಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ, ಭೂಗತ ಲೋಕದವರ

ದೇಶ - ವಿದೇಶ

NLC ಇಂಡಿಯಾ-ರಷ್ಯಾ ನಡುವೆ ಆಫ್ರಿಕಾ ಲೀಥಿಯಂ -ಇನ್ನು ಚೀನಾದ ಅವಶ್ಯಕತೆ ಇಲ್ಲವೇ?

ನವದೆಹಲಿ:ಕಳೆದ ಕೆಲವು ದಿನಗಳಿಂದ ಸರ್ಕಾರಿ ಕಂಪನಿ ಎನ್‌ಎಲ್‌ಸಿ ಇಂಡಿಯಾ (NLC India) ಆಫ್ರಿಕಾದ ಮಾಲಿಯಲ್ಲಿರುವ ಲೀಥಿಯಂ (Lithium) ಬ್ಲಾಕ್‌ನಲ್ಲಿ ಪಾಲುದಾರಿಕೆ ಪಡೆದುಕೊಳ್ಳಲು ರಷ್ಯಾ (Russia) ಕಂಪನಿಯೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ. ಈ ಒಪ್ಪಂದ ಯಶಸ್ವಿಯಾದ್ರೆ

ದೇಶ - ವಿದೇಶ

1 ರೂ. ಹೆಚ್ಚಾಗಿ ಪಡೆದದ್ದಕ್ಕೆ ಕೆಎಸ್‌ಆರ್‌ಟಿಸಿ ಕಟ್ಟಬೇಕಾಯಿತು 30,000 ದಂಡ

ಮೈಸೂರು:ನಾವು ಬಸ್‌ನಲ್ಲಿ (Bus) ಪ್ರಯಾಣ ಮಾಡುವಾಗ ಕಂಡಕ್ಟರ್‌ಗಳು ಚಿಲ್ಲರೆ (Change) ಇಲ್ಲ ಎಂದರೆ ಆಮೇಲೆ ಕೊಡುತ್ತೇವೆ ಎಂದು ಹೇಳುತ್ತಾರೆ. ಅವರಿಂದ ವಾಪಾಸ್‌ ಚಿಲ್ಲರೆ ಪಡೆಯಲು ಕೆಲವು ಬಾರಿ ಹರಸಾಹಸ ಮಾಡಬೇಕಾಗಿ ಬರುತ್ತದೆ. ಕೆಲವೊಮ್ಮೆ ಚಿಲ್ಲರೆ

ದೇಶ - ವಿದೇಶ

ಟ್ಯಾಕ್ಸ್ ವಂಚಿಸುವವರನ್ನು ಜಾಲಾಡಲು ಸಿದ್ದವಾದ ಐಟಿ ಇಲಾಖೆ

ನವದೆಹಲಿ:ಆದಾಯ ತೆರಿಗೆಯಲ್ಲಿ (Income Tax) ಲಭ್ಯ ಇರುವ ವಿವಿಧ ಡಿಡಕ್ಷನ್, ಎಕ್ಸೆಂಪ್ಷನ್ ಇತ್ಯಾದಿ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡು ತೆರಿಗೆ ವಂಚಿಸಲಾಗುತ್ತಿರುವ ಪ್ರಕರಣಗಳನ್ನು ಐಟಿ ಇಲಾಖೆ ಜಾಲಾಡುತ್ತಿದೆ. ವೃತ್ತಿಪರ ಮಧ್ಯವರ್ತಿಗಳೊಂದಿಗೆ ಶಾಮೀಲಾಗಿ ಟ್ಯಾಕ್ಸ್ ಬೆನಿಫಿಟ್​ಗಳ ದುರ್ಬಳಕೆ

ದೇಶ - ವಿದೇಶ

ಬಾಲ್ ಹುಡುಕಲು ಹೋದ ಬಾಲಕನಿಗೆ ಆಸ್ಥಿಪಂಜರ ಪತ್ತೆ- ರಹಸ್ಯ ಬಯಲು

ನಾಂಪಲ್ಲಿ:ಸ್ಥಳೀಯ ನಿವಾಸಿಯೊಬ್ಬರು ಕ್ರಿಕೆಟ್ ಬಾಲ್ ತರಲು ಬೀಗ ಹಾಕಿದ ಮನೆಗೆ ಪ್ರವೇಶಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಡುಗೆ ಮನೆಯಲ್ಲಿ ಪಾತ್ರೆಗಳ ನಡುವೆ ಮುಖ ಕೆಳಗೆ ಹಾಕಿ ಬಿದ್ದಿದ್ದ ಸ್ಥಿತಿಯಲ್ಲಿ ಅಮೀರ್ ದೇಹ