Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕ್ರೀಡೆಗಳು ದೇಶ - ವಿದೇಶ

ಐಪಿಎಲ್ ಟಿಕೆಟ್‌ಗಳ GST ದರದಲ್ಲಿ ಬೃಹತ್ ಏರಿಕೆ: ಅಭಿಮಾನಿಗಳ ಕವಲತ್ತು ಶುರು

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯನ್ನು ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯಿಂದಾಗಿ ಹಲವು ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬರಲಿದೆ. ಆದರೆ ಇತ್ತ ಇದೇ ಪರಿಷ್ಕರಣೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಟಿಕೆಟ್​ಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.

ಕರ್ನಾಟಕ

ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಈ ಸರ್ಕಾರಿ ಶಾಲೆಯ ಸ್ಥಿತಿಯೇ ಬೇರೆ

ಗದಗ: ಸರ್ಕಾರಿ ಶಾಲೆ (government school)ಅಂದರೆ ಸಾಕು ಮೂಗು ಮುರಿಯುವ ಜನರೇ ಜಾಸ್ತಿ. ಅದೆಷ್ಟೋ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೇ ಬೀಗ ಹಾಕುವ ಹಂತಕ್ಕೆ ತಲುಪಿವೆ. ಆದರೆ ಈ ಶಾಲೆಯಲ್ಲಿ ಭರಪೂರ ವಿದ್ಯಾರ್ಥಿಗಳ (students) ಸಂಖ್ಯೆ

ದೇಶ - ವಿದೇಶ

ರಷ್ಯಾದ ತೈಲ ಖರೀದಿ ಮುಂದುವರೆಸಿದರೆ ಹೆಚ್ಚು ಸುಂಕ ಹಾಕ್ತೀವಿ-ಟ್ರಂಪ್ ನಿಂದ ಎಚ್ಚರಿಕೆ

ವಾಷಿಂಗ್ಟನ್: ಒಂದೊಮ್ಮೆ ಭಾರತವು ರಷ್ಯಾದಿಂದ ತೈಲ ಆಮದು ಮುಂದುವರೆಸಿದರೆ ಮತ್ತಷ್ಟು ಸುಂಕ ಕಟ್ಟಬೇಕಾಗುತ್ತೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್  ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಚೀನಾದ ನಂತರ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರ ಎಂದು ಕರೆದಿದ್ದಾರೆ. ಅಮೆರಿಕ ಇನ್ನೂ ಹಂತ-2, ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದ ಟ್ರಂಪ್ ರಷ್ಯಾದೊಂದಿಗೆ ವ್ಯಾಪಾರ ಸಂಬಂಧವನ್ನು ಮುಂದುವರಿಸುವ ದೇಶಗಳ ವಿರುದ್ಧ ಅಮೆರಿಕ ಇನ್ನೂ ಹಂತ-2 ಮತ್ತು ಹಂತ-3 ಸುಂಕಗಳನ್ನು ವಿಧಿಸಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಚೀನಾದ ಮೇಲಿನ ಹೆಚ್ಚುವರಿ ಸುಂಕಗಳನ್ನು ಅಮೆರಿಕ ನವೆಂಬರ್ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರೂ, ಭಾರತವು ಭಾರೀ ಸುಂಕಗಳಿಂದ ಹಾನಿಗೊಳಗಾಗಿದೆ. ಈ ತಿಂಗಳ ಆರಂಭದಲ್ಲಿ ಶೇ. 25 ರಷ್ಟು ಸುಂಕವನ್ನು ವಿಧಿಸಲಾಯಿತು ಮತ್ತು ಆಗಸ್ಟ್ 27 ರಂದು ಹೆಚ್ಚುವರಿಯಾಗಿ ಶೇ. 25 ರಷ್ಟು ದ್ವಿತೀಯ ನಿರ್ಬಂಧ ಜಾರಿಗೆ ಬಂದಿದ್ದು, ಭಾರತೀಯ ಸರಕುಗಳ ಮೇಲಿನ ಒಟ್ಟು ಸುಂಕವು ಶೇ. 50 ಕ್ಕೆ ತಲುಪಿದೆ. ಆದರೆ ಅಮೆರಿಕ ಭಾರತದ ಮೇಲೆ ವಿಧಿಸಿರುವ ಸುಂಕಕ್ಕೆ ಪ್ರಧಾನಿ ನರೇಂದ್ರ ಮೋದಿ ತಲೆ ಕೆಡಿಸಿಕೊಂಡಿಲ್ಲ. ತಮ್ಮ ರೈತರ ಸುರಕ್ಷತೆಯೇ ತನಗೆ ಮುಖ್ಯ ಅವರನ್ನು ಉಳಿಸಿಕೊಳ್ಳಲು ಯಾವುದೇ ವೈಯಕ್ತಿಕ ನಷ್ಟಕ್ಕೂ ಸಿದ್ಧ ಎಂದು ಹೇಳಿದ್ದರು. ಅಮೆರಿಕ ಇಲ್ಲದಿದ್ದರೆ ಪ್ರಪಂಚದಲ್ಲಿರುವ ಎಲ್ಲಾ ದೇಶಗಳು ಸಾಯುತ್ತಿದ್ದವು, ತಾವು ತುಂಬಾ ಬಲಶಾಲಿಯಾಗಿದ್ದು, ನಮ್ಮದು ಬಹಳ ದೊಡ್ಡದಾದ ರಾಷ್ಟ್ರ. ನಾನು ಮೊದಲ ನಾಲ್ಕು ವರ್ಷಗಳಲ್ಲಿ  ನಿಜವಾಗಿಯೂ ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಹಸ ಮಾಡಿದ್ದೇನೆ. ನಂತರ ಬೈಡನ್​ ಆಡಳಿತದಲ್ಲಿ ಯುಎಸ್​ ಅವನತಿ ಹೊಂದಲು ಪ್ರಾರಂಭಿಸಿತು.

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಮೂಡುಬಿದಿರೆ: ಮಹಿಳೆಗೆ ಕರೆ ಮಾಡಿ ಅಶ್ಲೀಲ ಕಿರುಕುಳ -ಪೇದೆಯ ಬಂಧನ

ಮೂಡುಬಿದಿರೆ: ದೂರು ನೀಡಲು ಬಂದ ಮಹಿಳೆಗೆ ಪದೇ ಪದೇ ಕರೆ ಅಶ್ಲೀಲ ಕರೆಗಳು ಮತ್ತು ಸಂದೇಶಗಳ ಮೂಲಕ ಕಿರುಕುಳ ನೀಡಿದ ಆರೋಪದಡಿ ಮೂಡುಬಿದಿರೆ ಠಾಣೆಯ ಪೊಲೀಸ್ ಪೇದೆಯನ್ನು ಅದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪೇದೆ

ಕರ್ನಾಟಕ

ಬೆಂಗಳೂರು: ಶಾರ್ಟ್ ಸರ್ಕ್ಯೂಟ್‌ ನಿಂದ 1.5 ವರ್ಷದ ಮಗು ದಹನ

ಬೆಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ತಗುಲಿ ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅನು, ಪುಷ್ಕರ್ ಕುಮಾರ್ (25 ) ಹಾಗು ಜ್ಯೋತಿಕುಮಾರಿ (22)

ಅಪರಾಧ ದೇಶ - ವಿದೇಶ

ಬಾಂಬೆ ಹೈಕೋರ್ಟ್ ನೀಡಿದ ಎಸ್‌ಸಿ/ಎಸ್‌ಟಿ ನಿರೀಕ್ಷಣಾ ಜಾಮೀನು ರದ್ದು: ಜಾತಿ ನಿಂದನೆ ಪ್ರಕರಣದಲ್ಲಿ ಆದೇಶ

ನವದೆಹಲಿ: ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಜಾತಿ ನಿಂದನೆ (ಎಸ್​ಸಿ/ಎಸ್​ಟಿ ಕಾಯ್ದೆಯಡಿ) ಪ್ರಕರಣದ ಆರೋಪಿಗೆ ಬಾಂಬೆ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್

ಕರ್ನಾಟಕ

ಶಾಸಕ ವಿರೇಂದ್ರ ಪಪ್ಪಿಯ ಅಕೌಂಟ್‌ನಿಂದ ಮತ್ತೆ 55 ಕೋಟಿ ರೂಪಾಯಿ ಜಪ್ತಿ

ಚಿತ್ರದುರ್ಗ:ಅಕ್ರಮ ಬೆಟ್ಟಿಂಗ್, ಆನ್​ ಲೈನ್ ಗೇಮಿಂಗ್ ದಂಧೆ ಆರೋಪ ಮೇಲೆ ಇಡಿ ಅಧಿಕಾರಿಗಳು ಚಿತ್ರದುರ್ಗ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಅವರ ನಿವಾಸದ ಮೇಲೆ ದಾಳಿ ಮಾಡಿದ್ದು, ಸದ್ಯ ವಿರೇಂದ್ರ ಪಪ್ಪಿ ಅವರನ್ನು ಬಂಧಿಸಿ

ಕರ್ನಾಟಕ

ಗದಗ ಜಿಮ್ಸ್ ಆಸ್ಪತ್ರೆ: ನಿರ್ಲಕ್ಷ್ಯ ಕಾರಣ ಬಾಣಂತಿ ಮತ್ತು ನವಜಾತ ಶಿಶುಗಳಿಗೆ ಸಂಕಷ್ಟ

ಗದಗ: ಗದಗ ಜಿಮ್ಸ್ ಆಸ್ಪತ್ರೆ  ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಅದ್ವಾನವಾಗಿದೆ. ನಿರಂತರ ಮಳೆಯಿಂದಾಗಿ ಆಸ್ಪತ್ರೆಯ ಕಟ್ಟಡ ಸೋರುತ್ತಿದೆ. ಪರಿಣಾಮ ಬಾಣಂತಿಯರು, ನವಜಾತ ಶಿಶುಗಳಿಗೆ ಸಂಕಷ್ಟ ಎದುರಾಗಿದೆ. ಅಲ್ಲದೇ ಬಾಣಂತಿಯರಿಗೆ ಸಿಗಬೇಕಾಗಿರುವ ಕನಿಷ್ಟ ಬಿಸಿ ನೀರಿನ ವ್ಯವಸ್ಥೆಯೂ ಅಲ್ಲಿಲ್ಲ.

ಅಪರಾಧ ದೇಶ - ವಿದೇಶ

ಪನ್ನಾದಲ್ಲಿ ಬಾಲಕಿ ಮೇಲೆ ಮತ್ತೆ ಅತ್ಯಾಚಾರ: ಸಿಡಬ್ಲ್ಯೂಸಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಪನ್ನಾ: ಅತ್ಯಾಚಾರ ಸಂತ್ರಸ್ತೆಯ ಮೇಲೆ ಆರೋಪಿ ಮತ್ತೊಮ್ಮೆ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಪನ್ನಾದಲ್ಲಿ ನಡೆದಿದೆ. 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದ, ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ) ಅಧಿಕಾರಿಗಳು ಆಕೆಯನ್ನು ಮತ್ತೆ ಆರೋಪಿಯ ಮನೆಗೆ ಕಳುಹಿಸಿದ್ದಾರೆ, ಅಲ್ಲಿ ಆತ ಮತ್ತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಆಕೆಯನ್ನು ಆತನ ಮನೆಗೆ ಕಳುಹಿಸಿದ್ದೇಕೆ ಎನ್ನುವ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಛತ್ತರ್‌ಪುರ ಪೊಲೀಸರು ಸಿಡಬ್ಲ್ಯೂಸಿ ಅಧ್ಯಕ್ಷರು, ಸದಸ್ಯರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ 10 ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.ಪನ್ನಾ ಜಿಲ್ಲೆಯ ಹಳ್ಳಿಯೊಂದರ ನಿವಾಸಿಯಾಗಿದ್ದ ಅಪ್ರಾಪ್ತ ಬಾಲಕಿ ಶಾಲೆಗೆ ಹೊರಟ ನಂತರ ಕಾಣೆಯಾದಾಗ

ದೇಶ - ವಿದೇಶ

ಬೀಜಿಂಗ್‌ ಗೆ ರೈಲಿನಲ್ಲಿ ಆಗಮಿಸಿದ ಕಿಮ್ ಜೊಂಗ್ ಉನ್- ಇದರ ಒಳರಹಸ್ಯವೇನು?

ಬೀಜಿಂಗ್‌: ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್‌ ಜೊಂಗ್‌ ಉನ್‌ (Kim Jong-un), ಚೀನಾದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಮಂಗಳವಾರ ರಾಜಧಾನಿ ಬೀಜಿಂಗ್‌ಗೆ ಆಗಮಿಸಿದರು. ವಿಶೇಷವೆಂದರೆ ಕಿಮ್‌ ಹೀಗೆ ಆಗಮಿಸಿದ್ದು ವಿಶೇಷ ಬುಲೆಟ್‌ ಪ್ರೂಫ್‌