Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಗ್ಗುಂಡಿ ಕೆರೆ ಪುನಶ್ಚೇತನ: ಸ್ಯಾಫ್ರನ್ ಫ್ರಂಟ್ ಅಭಿಯಾನಕ್ಕೆ ಸಿಕ್ಕಿತು ಬಿಗ್ ಸಕ್ಸಸ್!

Spread the love

ಬಗ್ಗುಂಡಿ ಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಸ್ಯಾಫ್ರನ್ ಫ್ರಂಟ್ ನಡೆಸುತ್ತಿರುವ ಹೋರಾಟವು ಈಗ ಮತ್ತೊಂದು ಮಹತ್ವದ ಹಂತಕ್ಕೆ ತಲುಪಿದೆ. ಮಂಗಳೂರು ತಾಲೂಕಿನ ಬೈಕಂಪಾಡಿ ಮತ್ತು ಕುಳಾಯಿ ನಡುವಿನ ಈ ಐತಿಹಾಸಿಕ ಕೆರೆಯ ಪುನಶ್ಚೇತನಕ್ಕಾಗಿ ಸಂಘಟನೆಯು ಈಗಾಗಲೇ ಅರಣ್ಯ ಇಲಾಖೆ, ಜಿಲ್ಲಾಡಳಿತ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಪತ್ರ ಬರೆದು ಒತ್ತಾಯಿಸಿತ್ತು. ಮಳೆಗಾಲದಲ್ಲಿ ಬಗ್ಗುಂಡಿಯಿಂದ ಹರಿದು ಬರುವ ಹೆಚ್ಚುವರಿ ನೀರು ಬೈಕಂಪಾಡಿ ಮತ್ತು ಕುಳಾಯಿ ಮಧ್ಯದ ದಾರಿಯ ಮೂಲಕ ಸಮುದ್ರ ಸೇರಬೇಕಾಗಿದ್ದರೂ, ದಾರಿಯ ಮಧ್ಯೆ ಕೆಲವು ಕಾರ್ಖಾನೆಗಳು ಅಕ್ರಮವಾಗಿ ತಡೆಗೋಡೆಗಳನ್ನು ನಿರ್ಮಿಸಿ ನೀರಿನ ನೈಸರ್ಗಿಕ ಹರಿವಿಗೆ ಅಡ್ಡಿಪಡಿಸಿವೆ. ಈ ಅಕ್ರಮ ಗೋಡೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಘಟನೆಯು ನಡೆಸಿದ ನಿರಂತರ ಹೋರಾಟದ ಫಲವಾಗಿ, ಪ್ರಸ್ತುತ ಹೂಳು ತುಂಬಿದ್ದ ಸೇತುವೆಯ ಕೆಳಭಾಗವನ್ನು ಜಿಲ್ಲಾಡಳಿತ ಮತ್ತು ಸ್ಥಳೀಯ ಇಲಾಖೆಗಳ ಸಹಕಾರದೊಂದಿಗೆ ಸ್ವಚ್ಛಗೊಳಿಸಲಾಗುತ್ತಿದೆ.

ಈ ಸ್ವಚ್ಛತಾ ಕಾರ್ಯವು ಸ್ಯಾಫ್ರನ್ ಫ್ರಂಟ್ ನಡೆಸಿದ ಹೋರಾಟದ ನೇರ ಪರಿಣಾಮವಾಗಿದ್ದು, ಇದನ್ನು ಸಂಘಟನೆಯ ಅಭಿಯಾನಕ್ಕೆ ಸಂದ ಎರಡನೇ ಜಯ ಎಂದು ಪರಿಗಣಿಸಲಾಗಿದೆ. ಇದಕ್ಕೂ ಮೊದಲು, ಸ್ಯಾಫ್ರನ್ ಫ್ರಂಟ್ ಸಲ್ಲಿಸಿದ ಮನವಿಗೆ ಸ್ಪಂದಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೆರೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು, ಇದು ಅಭಿಯಾನದ ಮೊದಲ ಜಯವಾಗಿತ್ತು. ಕೆರೆ ಸಂರಕ್ಷಣೆ ಮತ್ತು ಕೃಷಿ ಭೂಮಿಯನ್ನು ಉಳಿಸುವ ಬಗ್ಗೆ ಸಾರ್ವಜನಿಕರು ಬೃಹತ್ ಜನಜಾಗೃತಿ ಅಭಿಯಾನದಲ್ಲಿ ಧ್ವನಿ ಎತ್ತಿದ್ದು, ರಾಜೇಶ್ ಪವಿತ್ರನ್ ಅವರ ನೇತೃತ್ವದಲ್ಲಿ ಈ ಹೋರಾಟವು ಈಗ ಹೊಸ ಚೈತನ್ಯ ಪಡೆದುಕೊಂಡಿದೆ. ಕೃಷಿಕರ ಜೀವನಾಡಿಯಾಗಿರುವ ಬಗ್ಗುಂಡಿ ಕೆರೆಯನ್ನು ಸಂಪೂರ್ಣವಾಗಿ ಹೂಳೆತ್ತಿ, ಇಡೀ ಪ್ರದೇಶವನ್ನು ಹಸಿರೀಕರಣಗೊಳಿಸುವವರೆಗೆ ಸ್ಯಾಫ್ರನ್ ಫ್ರಂಟ್ ತನ್ನ ಹೋರಾಟವನ್ನು ಮುಂದುವರಿಸಲಿದೆ.


Spread the love
Share:

administrator

Leave a Reply

Your email address will not be published. Required fields are marked *