ಚಿತ್ರದುರ್ಗ: ಚಳ್ಳಕೆರೆಯಲ್ಲಿ ನವವಿವಾಹಿತೆ ಬಾವಿಯಲ್ಲಿ ಶವವಾಗಿ ಪತ್ತೆ; ಪ್ರೇಮ ವಿವಾಹವಾದ ಕೆಲವೇ ದಿನಗಳಲ್ಲಿ ದುರಂತ!

ಚಿತ್ರದುರ್ಗ: ನವವಿವಾಹಿತೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ಮಹಾದೇವಪುರದಲ್ಲಿ (Mahadevapura) ನಡೆದಿದೆ.

ಕಾರಿಪಾಲಯ್ಯನಹಟ್ಟಿ ಮೂಲದ ಸುಮಲತಾ (21) ಮೃತ ನವವಿವಾಹಿತೆ. ಘಟನೆ ಸಂಬಂಧ ಗುಂಡಯ್ಯನಹಟ್ಟಿ ಗಜೇಂದ್ರ ಮತ್ತಿತರರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ.
ಆ.13ಕ್ಕೆ ಸುಮಲತಾ ಮನೆಬಿಟ್ಟು ಗಜೇಂದ್ರ ಜೊತೆ ತೆರಳಿದ್ದಳು. ಅಲ್ಲದೇ ಸುಮಲತಾ, ಗಜೇಂದ್ರ ಪ್ರೇಮ ವಿವಾಹ (Love Marriage) ಆಗಿದ್ದರು. ಭಾನುವಾರ ಸಂಜೆ ಮಹಾದೇವಪುರ ಬಾವಿಯಲ್ಲಿ ಸುಮಲತಾ ಶವ ಪತ್ತೆಯಾಗಿದೆ. ನಾಯಕನಹಟ್ಟಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ