Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕಾಸರಗೋಡು: ವಿದ್ಯುತ್ ಕಂಬ ಏರಿದ್ದ ಲೈನ್‌ಮನ್ ದಾರುಣ ಸಾ*ವು; ಕಂಬದಲ್ಲೇ ಸಿಲುಕಿದ ಮೃತದೇಹ!

Spread the love

ಕಾಸರಗೋಡು : ಕೆಲಸ ನಿರ್ವಹಿಸುತ್ತಿದ್ದ ವಿದ್ಯುತ್ ಶಾಕ್ ತಗುಲಿ ಕೆ.ಎಸ್.ಇ.ಬಿ ಲೈನ್ಮಾನ್ ಮೃತಪಟ್ಟ ದಾರುಣ ಘಟನೆ ನೀಲೇಶ್ವರ ಮಡಿಕೈನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಪುಲ್ಲೂರು ಮಧುರಂಬಾಡಿ ನಿವಾಸಿ ಭರತನ್ (52) ಎಂದು ಗುರುತಿಸಲಾಗಿದೆ. ಇವರು ಕೆ.ಎಸ್.ಇ.ಬಿ ಮಾವುಂಗಾಲ್ ಸೆಕ್ಷನ್ ನ ಉದ್ಯೋಗಿಯಾಗಿದ್ದರು.
ಮಡಿಕೈ ಕಣಿಚ್ಚಿರ ಪಾಲಂ (ಸೇತುವೆ) ಸಮೀಪದ ತಿರುವಿನಲ್ಲಿ ಈ ಅವಘಡ ಸಂಭವಿಸಿದೆ.
ಕಣಿಚ್ಚಿರ ಭಾಗದಲ್ಲಿ ವಿದ್ಯುತ್ ಲೈನ್ ನಲ್ಲಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲು ಭರತನ್ ಕಂಬ ಏರಿದ್ದಾಗ ಅನಿರೀಕ್ಷಿತವಾಗಿ ವಿದ್ಯುತ್‌ ಸ್ಪರ್ಶಕ್ಕೆ ಒಳಗಾಗಿದ್ದರೆನ್ನಲಾಗಿದೆ. ಸೊಂಟಕ್ಕೆ ಸುರಕ್ಷತ ಬೆಲ್ಟ್ ಧರಿಸಿದ್ದರಿಂದ, ಶಾಕ್ ತಗುಲಿದ ಬಳಿಕ ಅವರ ಮೃತದೇಹ ಕಂಬದಲ್ಲೇ ಸಿಲುಕಿಕೊಂಡಿತ್ತು. ನಂತರ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಕೆಳಗಿಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *