ವಿಧಾನಸೌಧ ವಾಟ್ಸಾಪ್ ಹ್ಯಾಕ್: ಹಿರಿಯ ಸಹಾಯಕಿಗೆ ₹45 ಸಾವಿರ ಸೈಬರ್ ವಂಚನೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೈಬರ್ ವಂಚನೆಗಳು ನಡೆಯುತ್ತಿವೆ. ಯಾವುದೋ ಒಂದು ಲಿಂಕ್ ಕಳುಹಿಸಿ ಅಥವಾ ಹೆದರಿಸಿ ಬೆದರಿಸಿ ಕೋಟ್ಯಂತರ ರೂ ಸುಲಿಗೆ ಮಾಡಲಾಗುತ್ತಿದೆ. ಇದೀಗ ಅಂತಹದೊಂದು ಸೈಬರ್ ವಂಚನೆ ನಡೆದಿದ್ದು, ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿ 45 ಸಾವಿರ ರೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋನುಕುಮಾರ್ ಎಂಬುವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಹೇಮಲತಾ ಎಂಬುವವರು ಸೈಬರ್ ವಂಚನೆಯಿಂದ 45 ಸಾವಿರ ರೂ. ಕಳೆದುಕೊಂಡ ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿ ಅಧಿಕಾರಿ. ಆ. 6ರಂದು ಅಧೀನ ಕಾರ್ಯದರ್ಶಿಗಳ ವಾಟ್ಸ್ಆ್ಯಪ್ನಿಂದ 45 ಸಾವಿರ ರೂ ಅವಶ್ಯಕತೆ ಇದೆ ಎಂದು ಸಂದೇಶ ಬಂದಿತ್ತು. ಕೂಡಲೇ ಹೇಮಲತಾ ಸಂದೇಶದಲ್ಲಿದ್ದ ನಂಬರ್ಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದರು. ಆದರೆ ಕರೆ ಮಾಡಿದಾಗ ಮೊಬೈಲ್ ನಂಬರ್ ಹ್ಯಾಕ್ ಆಗಿರುವುದು ತಿಳಿದುಬಂದಿದೆ.
