ಪದ್ಮನಾಭಸ್ವಾಮಿ ದೇವಸ್ಥಾನದಿಂದ ಕಳೆದುಹೋದ ಚಿನ್ನ ಪತ್ತೆ: ಮಣ್ಣಿನಲ್ಲಿ ದೊರೆತ 100 ಗ್ರಾಂ ಚಿನ್ನ

ತಿರುವನಂತಪುರಂ : ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ಭದ್ರತಾ ಕೊಠಡಿಯಿಂದ 100 ಗ್ರಾಂ ಗೂ ಹೆಚ್ಚು ಚಿನ್ನ ಕಳವು ಆಗಿರುವ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿತ್ತು.
ಇದೀಗ ದೇವಸ್ಥಾನದಿಂದ ಕಾಣೆಯಾದ ಚಿನ್ನ ಇಂದು (11) ಸಂಜೆ ಪತ್ತೆಯಾಗಿದೆ.

ಪೊಲೀಸರು ತಪಾಸಣೆ ನಡೆಸಿದಾಗ ಕಾಣೆಯಾದ 13 ಪೌಂಡ್ಗೂ ಹೆಚ್ಚಿನ ಚಿನ್ನ ಪತ್ತೆಯಾಗಿದೆ ಎಂದು ಹೇಳಲಾಗಿದೆ. ದೇವಸ್ಥಾನದ ಬಾಗಿಲಿಗೆ ಚಿನ್ನ ಲೇಪಿಸಲು ಬಳಸಲಾಗುತ್ತಿದ್ದ ಚಿನ್ನದ ತಂತಿ ನಿನ್ನೆ ಕಾಣೆಯಾಗಿದೆ.
2 ದಿನಗಳ ಹಿಂದೆ ಕೊನೆಯ ಬಾರಿಗೆ ಚಿನ್ನದ ಲೇಪನ ಕೆಲಸವನ್ನು ಮಾಡಲಾಗಿತ್ತು. ನಂತರ ಉಳಿದ ಚಿನ್ನವನ್ನು ಲಾಕರ್ನಲ್ಲಿ ಭದ್ರಪಡಿಸಲಾಗಿತ್ತು. ಆದರೆ ಕೆಲಸಕ್ಕಾಗಿ ಮತ್ತೆ ಚಿನ್ನವನ್ನು ಲಾಕರ್ನಿಂದ ಹೊರತೆಗೆದಾಗ, ಸುಮಾರು 100 ಗ್ರಾಂಗೂ ಹೆಚ್ಚಿನ ಚಿನ್ನ ಕಾಣೆಯಾಗಿರುವುದು ಕಂಡುಬಂದಿದೆ. ಬಳಿಕ ದೇವಾಲಯದ ಅಧಿಕಾರಿಗಳು ದೂರು ದಾಖಲಿಸಿದ್ದರು.
ದೇವಾಲಯದಲ್ಲಿ ಚಿನ್ನದ ಲೇಪನ ಕೆಲಸಕ್ಕಾಗಿ ಇರಿಸಲಾಗಿದ್ದ ಸುಮಾರು 100 ಗ್ರಾಂ ಗೂ ಹೆಚ್ಚು ಚಿನ್ನ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಚಿನ್ನ ಕದ್ದವರ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗಿತ್ತು.
ಚಿನ್ನವನ್ನು ಹುಡುಕಲು ಇಂದು ಬೆಳಗ್ಗೆಯಿಂದ ದೇವಾಲಯದ ಆವರಣದಲ್ಲಿ ಪೊಲೀಸ್ ತಂಡ ವಿಶೇಷ ಶೋಧ ನಡೆಸಿದ್ದು, ಆ ಹುಡುಕಾಟದ ಸಮಯದಲ್ಲಿ ಕಳೆದುಹೋದ ಚಿನ್ನವು ದೇವಾಲಯದ ಆವರಣದ ಮಣ್ಣಿನಲ್ಲಿ ಕಂಡುಬಂದಿದೆ.