Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

33 ವರ್ಷದ ಪ್ರಿಯಕರನಿಗಾಗಿ ಗಂಡನನ್ನೇ ಕೊಂದ 56 ವರ್ಷದ ಅಜ್ಜಿ: 2 ತಿಂಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ

Spread the love

ಚಿಕ್ಕಮಗಳೂರು: 33 ವರ್ಷದ ಪ್ರಿಯತಮನಿಗಾಗಿ 56 ವರ್ಷದ ಅಜ್ಜಿ ಸಂಚು ರೂಪಿಸಿ ತನ್ನ ಗಂಡನ ಕೊಲೆ ಮಾಡಿಸಿದ್ದಾಳೆ. ಕೊಲೆಯಾದ 2 ತಿಂಗಳ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಅಜ್ಜಿ, ಆಕೆಯ ಪ್ರಿಯತಮ ಹಾಗೂ ಸಹಚರರನ್ನು ಬಂಧಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ.

60 ವರ್ಷದ ಸುಬ್ರಮಣ್ಯ ಮೃತರು. ಈತ ಟೈಲರ್ ಕೆಲಸ ಮಾಡುತ್ತಿದ್ದು, ಮೇ 31 ರಂದು ಕಾಣೆಯಾಗಿದ್ದರು. ಈ ಬಗ್ಗೆ ಪತ್ನಿ ಮೀನಾಕ್ಷಮ್ಮ ಜೂನ್ 2 ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತ್ನಿಯೇ ಆಕೆಯ ಪ್ರಿಯಕರನೊಂದಿಗೆ ಸೇರಿ ಪ್ಲಾನ್‌ ಮಾಡಿ ಕೊಲೆ ಮಾಡಿಸಿದ್ದಾಳೆ ಎಂದು ತಿಳಿದುಬಂದಿದೆ.

ಕಡೂರು ರೈಲ್ವೆ ನಿಲ್ದಾಣದ ಬಳಿಕ ಸಿಕ್ಕ ಮೃತದೇಹದ ತುಂಡು

ಮೇ 31 ರಂದು ಮೀನಾಕ್ಷಮ್ಮನ ಪ್ರಿಯಕರ ಪ್ರದೀಪ್ ಎಂಬಾತು ಸುಬ್ರಮಣ್ಯ ಅವರೊಂದಿಗೆ ಮಾತನಾಡುತ್ತಾ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಅವರಿಗೆ ಮದ್ಯಪಾನ ಮಾಡಿಸಿ ನಿರ್ಜನ ಪ್ರದೇಶದಲ್ಲಿ ಸ್ನೇಹಿತರೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ದೇಹವನ್ನು ಸುಡಲು ಪ್ರಯತ್ನಿಸಿದ್ದು, ಅದು ಸಾಧ್ಯವಾಗಲಿಲ್ಲ. ನಂತರ ದೇಹವನ್ನು ತುಂಡು ಮಾಡಿ ಅಲ್ಲೇ ಎಸೆದು ಬಂದಿದ್ದಾರೆ. ಬೀದಿ ನಾಯಿಯೊಂದು ಮೃತದೇಹದಿಂದ ಕಾಲಿನ ಭಾಗವನ್ನು ರೈಲ್ವೆ ಹಳಿಗೆ ಎಳೆದು ತಂದಿದೆ. ಆಗ ನಾಪತ್ತೆಯಾಗಿದ್ದ ವ್ಯಕ್ತಿಯೊಂದಿಗೆ ಹೋಲಿಕೆ ನಡೆಸಿದಾಗ ಮೃತದೇಹ ಸುಬ್ರಮಣ್ಯದು ಎಂದು ಖಚಿತವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಈ ಮಧ್ಯೆ ಪೊಲೀಸರು ಸುಬ್ರಮಣ್ಯ ಅವರ ಟೈಲರಿಂಗ್ ಅಂಗಡಿ ಬಳಿಯ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಮೇ 31 ರಂದು ಸುಬ್ರಮಣ್ಯ ಅವರು ಪ್ರದೀಪ್, ಸಿದ್ದೇಶ್ ಮತ್ತು ವಿಶ್ವಾಸ್ ಎಂಬುವವರೊಂದಿಗೆ ಕಾರಿನಲ್ಲಿ ಹೋಗುತ್ತಿರುವುದು ಕಂಡುಬಂದಿತ್ತು. ಪೊಲೀಸರು ಆ ಮೂವರನ್ನು ವಿಚಾರಣೆ ನಡೆಸಿದಾಗ, ಅವರು ಸುಬ್ರಮಣ್ಯರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡರು. ತನಿಖೆ ಮುಂದುವರೆದಂತೆ, ಪ್ರದೀಪ್ ಮತ್ತು ಮೀನಾಕ್ಷಮ್ಮ ನಡುವೆ ಸಂಬಂಧವಿರುವುದು ತಿಳಿದುಬಂದಿದೆ.
ಪತ್ನಿ ಸತ್ತಿರುವುದನ್ನು ಖಚಿತಪಡಿಸಿಕೊಂಡೇ ನಾಪತ್ತೆ ದೂರು ನೀಡಿದ್ದ ಪತ್ನಿ

ಪೊಲೀಸರು ಮೀನಾಕ್ಷಮ್ಮ ಮತ್ತು ಪ್ರದೀಪ್ ಅವರ ಫೋನ್‌ ಕಾಲ್ ವಿವರಗಳನ್ನು ಪರಿಶೀಲಿಸಿದರು. ಆಗ ಮೀನಾಕ್ಷಮ್ಮ ಒಂದು ನಿರ್ದಿಷ್ಟ ಸಂಖ್ಯೆಗೆ ಪದೇ ಪದೇ ಕರೆ ಮಾಡಿರುವುದು ಮತ್ತು ಮೆಸೇಜ್ ಮಾಡಿರುವುದು ಕಂಡುಬಂತು. ಆ ನಂಬರ್ ಪ್ರದೀಪ್ ತಾಯಿಯ ಹೆಸರಿನಲ್ಲಿತ್ತು. ಪ್ರದೀಪ್ ಆ ಸಿಮ್ ಕಾರ್ಡ್ ಬಳಸುತ್ತಿದ್ದ. ಈ ಮಾಹಿತಿ ಮೀನಾಕ್ಷಮ್ಮನನ್ನು ಬಂಧಿಸಲು ಪ್ರಮುಖ ಸಾಕ್ಷಿಯಾಯಿತು. ಮೀನಾಕ್ಷಮ್ಮ ಜೂನ್ 2 ರಂದು ಸುಬ್ರಮಣ್ಯ ಸತ್ತಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಪೊಲೀಸ್ ಠಾಣೆಗೆ ದೂರು ನೀಡಲು ಬಂದಳು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

“ಮೀನಾಕ್ಷಮ್ಮ ಮತ್ತು ಸುಬ್ರಮಣ್ಯ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ಮೊಮ್ಮಕ್ಕಳೂ ಇದ್ದಾರೆ. ನಾಲ್ಕು ವರ್ಷಗಳ ಹಿಂದೆ ಮೀನಾಕ್ಷಮ್ಮ ಟೈಲರಿಂಗ್ ಕೆಲಸ ಮಾಡುತ್ತಿದ್ದ ಪ್ರದೀಪ್‌ನೊಂದಿಗೆ ಸಂಪರ್ಕಕ್ಕೆ ಬಂದಳು. ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆಯಿತು. ಈ ವಿಷಯ ಸುಬ್ರಮಣ್ಯಗೆ ತಿಳಿದಾಗ, ಮೀನಾಕ್ಷಮ್ಮ ಆತನನ್ನು ಕೊಲ್ಲಲು ನಿರ್ಧರಿಸಿದಳು. ಆಕೆ ತನ್ನ ಪ್ರಿಯಕರ ಪ್ರದೀಪ್‌ಗೆ ತನ್ನ ಸ್ನೇಹಿತರ ಸಹಾಯದಿಂದ ಗಂಡನನ್ನು ಕೊಲೆ ಮಾಡಲು ಹೇಳಿದಳು” ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *