Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಪಾಕಿಸ್ತಾನದಲ್ಲಿ ಉಗ್ರರೇ ಇಲ್ಲ” – ಶೆಹಬಾಜ್ ಷರೀಫ್ ವಾಗ್ದಾಳಿ

Spread the love

ಇಸ್ಲಾಮಾಬಾದ್ : ಭಾರತದ ಆಪರೇಶನ್ ಸಿಂಧೂರ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತುರ್ತು ಸಭೆ ನಡೆಸಿದ್ದಾರೆ. ಉಗ್ರರ ಕ್ಯಾಂಪ್ ಮೇಲೆ ಭಾರತ ನಡೆಸಿದ ದಾಳಿಯನ್ನು ಪಾಕಿಸ್ತಾನ ಯುದ್ಧ ಕೃತ್ಯ ಎಂದಿದೆ. ಇಷ್ಟೇ ಅಲ್ಲ ಭಾರತದ ಈ ದಾಳಿಗೆ ಪಾಕಿಸ್ತಾನ ತಕ್ಕ ಉತ್ತರ ನೀಡಲಿದೆ ಎಂದು ಪಾಕಿಸ್ತಾನ ಪ್ರಧಾನಿ ಹಬಾಜ್ ಷರೀಫ್‌ ಹೇಳಿದ್ದಾರೆ.
ವಿಶೇಷ ಅಂದರೆ ಈ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಹೇಳಿದ ಮಾತೊಂದು ಭಾರಿ ಚರ್ಚೆ ಹುಟ್ಟು ಹಾಕಿದೆ. ಪಾಕಿಸ್ತಾನದಲ್ಲಿ ಉಗ್ರರೇ ಇಲ್ಲ. ಭಾರತದ ಉಗ್ರರ ಕ್ಯಾಂಪ್ ಎಂದು ನಾಗರೀಕರ ಮೇಲೆ ದಾಳಿ ಮಾಡಿದೆ. ಅಮಾಯಕರ ಮೇಲೆ, ಅದು ಕೂಡ ಪಾಕಿಸ್ತಾನ ನೆಲದ ಮೇಲೆ ಭಾರತ ನಡೆಸಿದ ದಾಳಿಯನ್ನು ಯಾವತ್ತೂ ಸಹಿಸುವುದಿಲ್ಲ ಎಂದಿದ್ದಾರೆ.

ಉಗ್ರರು ಎಂದು ಊಹಿಸಿ ನಾಗರೀಕರ ಮೇಲೆ ದಾಳಿ ಎಂದ ಷರೀಫ್
ಮೇ 07ರಂದು ಭಾರತ ಭಾರತೀಯ ಸೇನೆ ಜಂಟಿಯಾಗಿ ಮಿಸೈಲ್ ದಾಳಿ ನಡೆಸಿದೆ. ವಾಯು ಸೇನೆ ಮೂಲಕ, ಡ್ರೋನ್ ಮೂಲಕ ನಡೆಸಿದ ಈ ದಾಳಿಯನ್ನು ಪಾಕಿಸ್ತಾನ ಬಲವಾಗಿ ಖಂಡಿಸುತ್ತಿದೆ. ಭಾರತದ ಸೇನೆ ಪಾಕಿಸ್ತಾನದ ಸೌರ್ವಭೌಮ ದೇಶದೊಳಗೆ ದಾಳಿ ನಡೆಸಿದೆ. ಅಜಾದ್ ಕಾಶ್ಮೀರ ಹಾಗೂ ಪಾಕಿಸ್ತಾನ ಕೆಲ ಪ್ರದೇಶಗಳ ಮೇಲೆ ಈ ದಾಳಿ ನಡೆದಿದೆ. ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ದಾಳಿ ಅನ್ನೋ ಹೆಸರಿನಲ್ಲಿ ಭಾರತ ಅಮಾಯಕ ನಾಗರೀಕರನ್ನು ಗುರಿಯಾಗಿಸಿ ದಾಳಿ ಮಾಡಿದೆ. ಉಗ್ರರ ಕ್ಯಾಂಪ್ ಎಂದು ಊಹಿಸಿಕೊಂಡು ಭಾರತ ನಡೆಸಿದ ದಾಳಿ ಇದಾಗಿದೆ. ಭಾರತದ ದಾಳಿಯಲ್ಲಿ ಅಮಾಯಕ ಪಾಕಿಸ್ತಾನದ ಪುರುಷ ಮಹಿಳ ಹಾಗೂ ಮಕ್ಕಳು ಮೃತಪಟ್ಟಿದ್ದಾರೆ. ಜೊತೆಗೆ ನಾಗರೀಕರ ಮನೆ, ಕಟ್ಟಡಗಳಿಗೆ ಹಾನಿಯಾಗಿದೆ. ಇದರ ಜೊತೆಗೆ ಒಂದು ಮಸೀದಿ ಮೇಲೆಯೂ ಭಾರತ ದಾಳಿ ಮಾಡಿದೆ. ಭಾರತದ ದಾಳಿಯಂದ ನೆರೆಯ ಗಲ್ಫ್ ರಾಷ್ಟ್ರದ ವಾಯು ಮಾರ್ಗ, ವಿಮಾನ ಸೇವೆ ಮೇಲೆ ಹೊಡೆತ ನೀಡಿದೆ. ಭಾರತದ ನೀಲುಮ್ ಜೆಲುಮ್ ಹೈಡ್ರೋಪವರ್ ಯೋಜನೆಯನ್ನು ಟಾರ್ಗೆಟ್ ಮಾಡಿದೆ. ಇದು ಅಂತಾರಾಷ್ಟ್ರೀಯ ನಿಯಮ ಬಾಹಿರವಾಗಿದೆ ಎಂದು ಷರೀಫ್ ಸಭೆಯಲ್ಲಿ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಉಗ್ರರೇ ಇಲ್ಲ ಎಂದ ಷರೀಫ್
ತುರ್ತು ಸಭೆಯಲ್ಲಿ ಭಾರತ ವಿರುದ್ಧ ಕೆಂಡಾಮಂಡಲವಾದ ಪ್ರಧಾನಿ ಷರೀಫ್, ಉಗ್ರರೇ ಇಲ್ಲದ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿದೆ ಎಂದಿದೆ. ಉಗ್ರರ ಕ್ಯಾಂಪ್ ಮೇಲೆ ಭಾರತ ದಾಳಿ ಮಾಡಿದೆ ಅನ್ನೋ ವಾದವನ್ನು ಪಾಕಿಸ್ತಾನ ತಳ್ಳಿ ಹಾಕಿದೆ. ಎಪ್ರಿಲ್ 22ರಂದು ನಡೆದ ಘಟನೆ ಕುರಿತು ತಟಸ್ಥರ ತನಿಖೆಗೆ ಪಾಕಿಸ್ತಾನ ಒತ್ತಾಯಿಸಿದೆ. ಆದರೆ ಭಾರತ ಇದ್ಯಾವುದನ್ನು ಪರಿಗಣಿಸದೆ ದಾಳಿ ಮಾಡಿದೆ. ಮೇ 6 ರಂದು ಅಂತಾರಾಷ್ಟ್ರೀಯ ಪತ್ರಕರ್ತರು ಭಾರತ ಹೇಳುವ ಉಗ್ರರ ಕ್ಯಾಂಪ್‌ಗಳಿಗೆ ಭೇಟಿ ನೀಡಿದ್ದಾರೆ.ಅಲ್ಲಿ ಯಾವುದೇ ಉಗ್ರರು ಇರಲಿಲ್ಲ, ಉಗ್ರವಾದವೂ ಇಲ್ಲ ಎಂದು ಷರೀಫ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಆರ್ಟಿಕಲ್ 51 ಪ್ರಕಾರ, ಪಾಕಿಸ್ತಾನ ಸ್ವಯಂ ರಕ್ಷಣೆಗಾಗಿ ಪ್ರತಿದಾಳಿ ಮಾಡುವ ಹಕ್ಕು ಹೊಂದಿದೆ. ಭಾರತ ನಡೆಸಿದ ಈ ದಾಳಿಯನ್ನು ಪಾಕಿಸ್ತಾನ ಸಹಿಸುವುದಿಲ್ಲ. ಇದಕ್ಕೆ ಉತ್ತರ ನೀಡುತ್ತೇವೆ. ತಕ್ಕ ಸಮಯದಲ್ಲಿ ಪಾಕಿಸ್ತಾನ ಉತ್ತರ ನೀಡಲಿದೆ. ಪಾಕಿಸ್ತಾನ ಸೇನೆ ಹಾಗೂ ಇತರ ಎಜೆನ್ಸಿ ಈ ದಾಳಿಗೆ ತಕ್ಕ ಪಾಠ ಕಲಿಸಲಿದೆ ಎಂದು ಷರೀಫ್ ಎಚ್ಚರಿಸಿದ್ದಾರೆ.

ಭಾರತದ ದಾಳಿಯಿಂದ ಪಾಕಿಸ್ತಾನ ಆಕ್ರೋಶಗೊಂಡಿದೆ. ಅಮಾಯಕರ ಮೇಲೆ ನಡೆಸಿದ ದಾಳಿಯನ್ನು ಇಡೀ ಪಾಕಿಸ್ತಾನ ಖಂಡಿಸಿದೆ. ಪಾಕ್ ನೆಲವನ್ನು ರಕ್ಷಿಸಲ ಪಾಕಿಸ್ತಾನ ಸೇನೆ ಸಜ್ಜಾಗಿದೆ. ಭಾರತಕ್ಕೆ ಅದೇ ಭಾಷೆಯಲ್ಲಿ ಉತ್ತರ ಕೊಡುತ್ತೇವೆ ಎಂದು ಷರೀಫ್ ಪುನರುಚ್ಚರಿಸಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *