ಪ್ರತಾಪ್ ಸಿಂಹ-ಪ್ರಿಯಾಂಕ್ ಖರ್ಗೆ ವಾಕ್ಸಮರ ಮುಂದುವರಿಕೆ: “ನಿಮ್ಮಪ್ಪನ ಮೇಲೆ ಹೆಮ್ಮೆ ಇಲ್ಲವೆಂದರೆ ನಾನೇನು ಮಾಡಲಿ?”

ಬೆಂಗಳೂರು: ಪ್ರತಾಪ್ ಸಿಂಹ ಹಾಗೂ ಪ್ರಿಯಾಂಕ್ ಖರ್ಗೆ ವಾಕ್ಸಮರ ಇಂದೂ ಸಹ ಮುಂದುವರಿದಿದ್ದು, ಪ್ರತಾಪ್ ಸಿಂಹ ನೀಡಿದ್ದ ಎಸ್ಎಸ್ಎಲ್ಸಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಆರ್ಎಸ್ಎಸ್ನ ದತ್ತಾತ್ರೇಯ ಹೊಸಬಾಳೆ ಅವರು ಸಂವಿಧಾನ ಕುರಿತು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ನ ಬ್ಯಾನ್ ಮಾಡುವ ಕುರಿತು ಮಾತನಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರತಾಪ್ ಸಿಂಹ ಇಂದಿರಾ ಗಾಂಧಿ ಕೈನಲ್ಲೇ ಆಗಲಿಲ್ಲ ಇನ್ನು ನಿಮ್ಮ ಕೈನಲ್ಲಿ ಆಗುತ್ತಾ ಎಂದಿದ್ದರು.
ಇದಕ್ಕೆ ಪ್ರತಿಯಾಗಿ ಪ್ರಿಯಾಂಕ್ ಖರ್ಗೆ ಹೆಸರಿನಲ್ಲಿ ಸಿಂಹ ಎಂದು ಹಾಕಿಕೊಂಡರೆ ನರಿಗಳೆಲ್ಲ ಸಿಂಹ ಆಗಲ್ಲ ಎಂದಿದ್ದರು. ಪ್ರತಾಪ್ ಸಿಂಹ ಎಸ್ಎಸ್ಎಲ್ಸಿ, ಪಿಯುಸಿ ಓದಿದವರೆಲ್ಲ ಅಪ್ಪನ ದುಡ್ಡಲ್ಲಿ ಕಾರು ಖರೀದಿಸುವಷ್ಟ ನಾವು ಅದೃಷ್ಟವಂತರಲ್ಲ ಎಂದು ಕುಟುಕಿದ್ದರು.
ಈ ಟಾಂಗ್ಗೆ ಇದೀಗ ಪ್ರಿಯಾಂಕ್ ಖರ್ಗೆ ಕೌಂಟರ್ ಕೊಟ್ಟಿದ್ದು, ಪದೇ ಪದೇ ಖರ್ಗೆ ಅವರ ಮಗ ಅಂತಾರೆ ಹೌದು ನನಗೆ ಆ ಹೆಮ್ಮೆ ಇದೆ, ನಿಮಗೆ ನಿಮ್ಮಪ್ಪನ ಮೇಲೆ ಹೆಮ್ಮೆ ಇಲ್ಲ ಎಂದರೆ ನಾನೇನು ಮಾಡಲಿ? ಎಂದು ಪ್ರಶ್ನಿಸಿದ್ದಾರೆ.
ಬಳಿಕ ನಮ್ಮ ತಾತ ಮಿಲ್ ನಡೆಸಿ ನಮ್ಮ ತಂದೆಯನ್ನು ವಕೀಲರನ್ನಾಗಿ ಮಾಡಿದರು, ನಮ್ಮ ತಂದೆ ಕಷ್ಟಪಟ್ಟು ವಕಾಲತ್ತು ಮಾಡಿ ರಾಜಕೀಯ ಪ್ರವೇಶಿಸಿ ಬ್ಲಾಕ್ ಮಟ್ಟದಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ, ಅವರ ಕಷ್ಟದಿಂದ ನಮ್ಮ ಮನೆಯಲ್ಲಿ ಎಲ್ಲರೂ ಬೆಂಗಳೂರಿಗೆ ಬಂದು ಓದಿ ಡಬಲ್ ಡಿಗ್ರಿ ತೆಗೆದುಕೊಂಡಿದ್ದೇವೆ ಎಂದು ಎಸ್ಎಸ್ಎಲ್ಸಿ ಹೇಳಿಕೆಯನ್ನು ಟೀಕಿಸಿದ್ದಾರೆ.
ಅಲ್ಲದೇ ನಾನು ಮೂರು ಬಾರಿ ಆಯ್ಕೆಯಾಗಿ ಬಂದಿದ್ದು, ನನ್ನ ತಂದೆ ಹಾಗೂ ಜನರ ಬೆಂಬಲವಿದೆ ಎಂದ ಪ್ರಿಯಾಂಕ್ ಖರ್ಗೆ ನಿಮ್ಮ ತಂದೆ ಕಷ್ಟಪಡಲಿಲ್ಲ ಎಂದರೆ ಅದು ನನ್ನ ತಪ್ಪಾ? ಎಂದು ಪ್ರಶ್ನಿಸಿದರು. ಬಳಿಕ ನಿಮ್ಮ ತಂದೆ ಕಷ್ಟಪಟ್ಟು ಪತ್ರಿಕೋದ್ಯಮ ಓದಿಸಿದರು. ಅವರಿಗೆ ಆಕಾಂಕ್ಷೆ ಇಲ್ಲ ಎಂದರೆ ನಾನೇನು ಮಾಡಲಿ ಎಂದು ಖರ್ಗೆ ಹೇಳಿದರು.
