ಪ್ರಧಾನಿ ಮೋದಿ ರಾಜೀನಾಮೆ ಘೋಷಿಸಲು ನಾಗ್ಪುರಕ್ಕೆ ಭೇಟಿ– ಸಂಜಯ್ ರಾವತ್ ಆರೋಪ

ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಭಾನುವಾರ ಮಹತ್ವದ ಹೇಳಿಕೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್ಎಸ್ಎಸ್ ಕಚೇರಿಗೆ ತಮ್ಮ ರಾಜೀನಾಮೆ ಘೋಷಿಸಲು ತೆರಳಿದರೆಂದು ಆರೋಪಿಸಿದ್ದಾರೆ. “ಪ್ರಧಾನಿ ಮೋದಿ ತಮ್ಮ ರಾಜಕೀಯ ವೃತ್ತಿಗೆ ವಿದಾಯ ಹೇಳಲು ಹೆಜ್ಜೆ ಹಾಕಿದ್ದಾರೆ. ಆರ್ಎಸ್ಎಸ್ ಈಗ ನಾಯಕತ್ವ ಬದಲಾವಣೆಯತ್ತ ಗಮನ ಹರಿಸಿದೆ” ಎಂದು ಅವರು ಹೇಳಿದ್ದಾರೆ.
ಇದರೊಂದಿಗೆ, ಮುಂದಿನ ಪ್ರಧಾನಿ ಮಹಾರಾಷ್ಟ್ರದಿಂದಲೇ ಬರುತ್ತಾರೆ ಎಂಬ ತೀವ್ರ ಹೇಳಿಕೆಯನ್ನು ರಾವತ್ ನೀಡಿದ್ದು, ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. “ಭಾರತದ ಮುಂದಿನ ಪ್ರಧಾನಮಂತ್ರಿ ನಮ್ಮ ರಾಜ್ಯದವರಾಗುತ್ತಾರೆ, ಇದರಲ್ಲಿ ಅನುಮಾನವಿಲ್ಲ” ಎಂದು ಅವರು ಪೂರಕವಾಗಿ ಹೇಳಿದರು.
ಈ ಹೇಳಿಕೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ರಾಷ್ಟ್ರೀಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದು, ಬಿಜೆಪಿ ಮತ್ತು ಆರ್ಎಸ್ಎಸ್ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ರಾಜಕೀಯ ವೀಕ್ಷಕರ ಪ್ರಕಾರ, ರಾವತ್ ಅವರ ಈ ಹೇಳಿಕೆ ಮಹಾರಾಷ್ಟ್ರದ ರಾಜಕೀಯ ಬದಲಾವಣೆಯ ಸೂಚನೆ ಆಗಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.