ಮಂಗಳೂರು: ಒಂದೇ ಕಡೆ 3 ಚಿರತೆ ಪ್ರತ್ಯಕ್ಷ; ಶಕ್ತಿನಗರ, ಕದ್ರಿ ಪರಿಸರದಲ್ಲಿ ನಾಗರಿಕರ ಆತಂಕ

ಮಂಗಳೂರು: ಒಂದೇ ಕಡೆ 3 ಚಿರತೆ ಪತ್ತೆಯಾಗಿದ್ದು, ಸಹಜವಾಗಿಯೇ ನಾಗರಿಕರು ಆತಂಕಗೊಂಡಿದ್ದಾರೆ.

ಕೆಲದಿನಗಳ ಹಿಂದೆ ಶಕ್ತಿನಗರ, ಕದ್ರಿ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಇದೀಗ ಮಂಗಳೂರು ಹಿಲ್ಸ್ ಭಾಗದಲ್ಲೂ ಕಾಣಿಸಿಕೊಂಡಿದೆ. ಸಂಜೆ ಹೊತ್ತಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಶಾಲಾ ಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದು, ಭೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.