ಸುಪ್ರೀಂ ಕೋರ್ಟ್ನಲ್ಲಿ ಮಮತಾ ದೀದಿ ಗುಡುಗು!

ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಆಡಳಿತದಲ್ಲಿರುವ ರಾಜ್ಯದ ಮುಖ್ಯಮಂತ್ರಿಯೊಬ್ಬರು ಸ್ವತಃ ವಕೀಲರಾಗಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ ಘಟನೆ ನಿನ್ನೆ ನಡೆದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿ, “ಇದು ಚುನಾವಣಾ ಆಯೋಗವಲ್ಲ, ಇದು ವಾಟ್ಸಾಪ್ ಆಯೋಗ” ಎಂದು ವಾದಿಸಿದರು. ಸುಮಾರು 5.8 ಮಿಲಿಯನ್ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ, ಜೀವಂತವಾಗಿರುವ ಜನರನ್ನು ಸತ್ತವರೆಂದು ಗುರುತಿಸಲಾಗಿದೆ ಮತ್ತು ಕೇವಲ ಬಂಗಾಳವನ್ನು ಮಾತ್ರ ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ ಎಂಬ ಮಮತಾ ದೀದಿಯವರ ವಾದಗಳು ಎಷ್ಟು ಪ್ರಬಲವಾಗಿದ್ದವೆಂದರೆ, ಸುಪ್ರೀಂ ಕೋರ್ಟ್ ತಕ್ಷಣವೇ ಯಾವುದೇ ತೀರ್ಪು ನೀಡಲು ಸಾಧ್ಯವಾಗದೆ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
