‘ಬೀಫ್ ಕೊಡಿಲ್ಲ ಅಂದ್ರೆ ಸತ್ತುಬಿಡ್ತೀನಿ!’ – ಯುವಕನ ಡ್ರಾಮಾ!

ಕಾಸರಗೋಡು: ಮಾರಕಾಯುಧಗಳೊಂದಿಗೆ ನೆರೆಮನೆಯ ತಾರಸಿಗೇರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ ಯುವಕನನ್ನು ಸ್ಥಳೀಯರು ಹಾಗು ಪೊಲೀಸರು ಜಂಟಿಯಾಗಿ ಸೆರೆ ಹಿಡಿದಿದ್ದಾರೆ.
ಕರಿಂದಳದ ಶ್ರೀಧರನ್ ನೆರೆಯ ಲಕ್ಷ್ಮೀ ಅವರ ಮನೆಯ ತಾರಸಿಗೇರಿ ಬೀಫ್ ಮತ್ತು ಪರೋಟ ನೀಡಿದರೆ ಮಾತ್ರವೇ ಕೆಳಗಿಳಿಯುವುದಾಗಿಯೂ, ಇಲ್ಲದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದ.
ಮಾಹಿತಿ ಲಭಿಸಿ ಸ್ಥಳಕ್ಕೆ ಧಾವಿಸಿದ ನೀಲೇಶ್ವರ ಪೊಲೀಸರು ಉಪಾಯದಿಂದ ಆತನನ್ನು ಸೆರೆ ಹಿಡಿದು ಎಚ್ಚರಿಕೆ ನೀಡಿದರು. ಮಾನಸಿಕ ಅಸ್ವಸ್ಥತೆ ಹೊಂದಿರುವ ಶ್ರೀಧರನ್ ಈ ಹಿಂದೆಯೂ ಹಲವು ಬಾರಿ ಇದೇ ರೀತಿಯ ಆತ್ಮಹತ್ಯೆ ಬೆದರಿಕೆ ನೀಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ.