Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೆದ್ದಾರಿ ಟೋಲ್‌ಗೆ ಲೈಫ್‌ಟೈಮ್ ಪಾಸ್ ನೀಡಲಿರುವ ಯೋಜನೆಗೆ ಸರ್ಕಾರ ಸಜ್ಜು! ಇನ್ನು ಕೇವಲ ₹30,000ಕ್ಕೆ 15 ವರ್ಷಗಳ ಟೋಲ್ ಮುಕ್ತ ಪ್ರಯಾಣವೇ ?

Spread the love

30 ಸಾವಿರ ರೂ. ಮುಂಗಡ ಪಾವತಿಯೊಂದಿಗೆ 15 ವರ್ಷಗಳವರೆಗೆ ‘ಲೈಫ್‌ಟೈಮ್‌ ಪಾಸ್‌’ ಖರೀದಿಸುವ ಆಯ್ಕೆಯೂ ಕೂಡ ಇರಲಿದೆ. ಈ ರೀತಿಯ ಟೋಲ್‌ ಪಾಸ್‌ಗಳಿಂದ ಲಕ್ಷಾಂತರ ವಾಹನ ಚಾಲಕರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಈ ಪ್ರಸ್ತಾಪವು ರಸ್ತೆ ಸಾರಿಗೆ ಸಚಿವಾಲಯದೊಂದಿಗೆ ಅಂತಿಮ ಹಂತದಲ್ಲಿದ್ದು, ಇದಕ್ಕೆ ಸಂಬಂಧಿಸಿದಂತೆ ಸಚಿವಾಲಯವು ಪ್ರತಿ ಕಿ.ಮೀ.ಗೆ ಟೋಲ್‌ ದರವನ್ನು ಕಡಿಮೆ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಸದ್ಯ ಮಾಸಿಕ ಪಾಸ್‌ ಎಷ್ಟಿದೆ?
ಪ್ರಸ್ತುತ ಇರುವ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಜತೆಗೆ ನೂತನ ಪಾಸ್‌ಗಳನ್ನು ಕೂಡ ಸೇರಿಸಲಾಗುವುದು. ಸದ್ಯ ಖಾಸಗಿ ಕಾರು ಚಾಲಕರು ಮಾಸಿಕ ಪಾಸ್‌ ಅನ್ನು 340 ರೂ.ಗೆ ಪಡೆಯಬಹುದಾಗಿದೆ. ಆದರೆ, ಕೇವಲ ಒಂದು ಟೋಲ್‌ ಪ್ಲಾಜಾಗೆ ಮಾತ್ರವೇ ಅನ್ವಯವಾಗಲಿದೆ. ಕಳೆದ 2023-24ನೇ ಸಾಲಿನಲ್ಲಿ ಟೋಲ್‌ಗಳ ಮೂಲಕ ಸಂಚರಿಸಿದ ಖಾಸಗಿ ವಾಹನಗಳಿಂದ 8 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆದಾಯ ಸಂಗ್ರಹವಾಗಿದೆ.

ಹೆದ್ದಾರಿ ಅಪಘಾತ ಹೆಚ್ಚಳ; ಸ್ಥಳ ಪರಿಶೀಲನೆ
ರಾಷ್ಟ್ರೀಯ ಹೆದ್ದಾರಿ 66ರ ಕಾಪು ತಾಲೂಕಿನ ಉಚ್ಚಿಲ ಪೇಟೆಯ ಹೆದ್ದಾರಿಯಲ್ಲಿ ನಿರಂತರ ಅಪಘಾತ ಮತ್ತು ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಸುರಕ್ಷತಾ ಕ್ರಮಗಳನ್ನು ಅಳವಡಿಸುವ ಬಗ್ಗೆ ಜಿಲ್ಲಾಧಿಕಾರಿ ಅವರು ಹೆಚ್ಚುವರಿ ಎಸ್‌.ಪಿ. ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸ್ಥಳ ಪರಿಶೀಲನೆ ನಡೆಸಿ ವರದಿ ಕೊಡುವಂತೆ ಆದೇಶಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಮಣಿಪಾಲ ಆರ್‌ಟಿಒ ಮತ್ತು ಮೆಸ್ಕಾಂ ಎಇಇ ಸಮಿತಿಯ ಸದಸ್ಯರಾಗಿದ್ದು, ಕಾಪು ತಹಸೀಲ್ದಾರ್‌ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

ಗುರುವಾರವೇ ಕಾರ್ಯಪ್ರವರ್ತವಾದ ಸಮಿತಿ ಕಾಪು ತಹಸೀಲ್ದಾರ್‌ ಕಚೇರಿಯಲ್ಲಿಸಮಿತಿ ಸಭೆ ಸೇರಿ ಸಮಾಲೋಚನೆ ನಡೆಸಿತು. ಸಭೆಯ ಬಳಿಕ ನಿರಂತರ ಅಪಘಾತ ಸಂಭವಿಸುತ್ತಿರುವ ಉಚ್ಚಿಲ ಪೇಟೆಯ ಹೆದ್ದಾರಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಾಯಿತು.

ತಹಸೀಲ್ದಾರ್‌ ಡಾ.ಪ್ರತಿಭಾ ಆರ್‌. ಮಾತನಾಡಿ,ಸಮಿತಿ ಕೂಲಂಕಷವಾಗಿ ಸ್ಥಳ ಪರಿಶೀಲನೆ ನಡೆಸಿದೆ. ನಿರಂತರ ಅಪಘಾತಗಳಿಗೆ ಕಾರಣಗಳನ್ನು ಪತ್ತೆ ಹಚ್ಚಿದೆ. ಮುಂದೆ ಈ ರೀತಿ ಆಗದಂತೆ ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಿ ಜಿಲ್ಲಾಧಿಕಾರಿಗೆ ಸಲ್ಲಿಸುತ್ತೇವೆ. ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ಹೆದ್ದಾರಿ ಸ್ಥಳದಲ್ಲಿಯೇ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಶೀಘ್ರವಾಗಿ ಕ್ರಮ ವಹಿಸಲು ತಿಳಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿಅವಘಡಗಳು ಗಣನೀಯವಾಗಿ ಕಡಿಮೆಯಾಗುವ ಭರವಸೆ ಇದೆ ಎಂದರು.

ಹೆಚ್ಚುವರಿ ಎಸ್‌.ಪಿ. ಸಿದ್ದಲಿಂಗಪ್ಪ ಮಾತನಾಡಿ, ಅಪಘಾತ ತಡೆಯುವ ನಿಟ್ಟಿನಲ್ಲಿಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು. ಪೊಲೀಸ್‌ ಇಲಾಖೆ ನಿರಂತರವಾಗಿ ರಸ್ತೆ ಸುರಕ್ಷತೆಗಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಇಂದಿನ ಸಭೆಯಲ್ಲಿಹಲವಾರು ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಶೀಘ್ರವಾಗಿ ಅವುಗಳನ್ನು ಅನುಷ್ಠಾನಕ್ಕೆ ತರಲು ಕ್ರಮವಹಿಸಲಾಗುವುದು ಎಂದರು.


Spread the love
Share:

administrator

Leave a Reply

Your email address will not be published. Required fields are marked *