ಬೆಂಗಳೂರು ಗ್ರಾಮಾಂತರಕ್ಕೂ ಡ್ರಗ್ಸ್ ಮಾಫಿಯಾ ವಿಸ್ತರಣೆ: ಜಿಗಣಿಯಲ್ಲಿ ನಾಲ್ವರು ಅಂತರಾಜ್ಯ ಪೆಡ್ಲರ್ಗಳ ಬಂಧನ!

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ಡ್ರಗ್ ಪೆಡ್ಡರ್ಗಳ ಹಾವಳಿ ಹೆಚ್ಚಾಗುತ್ತಿದ್ದು ಇದೀಗ ಬೆಂಗಳೂರು ನಗರದಿಂದಾಚೆಗೂ ಡ್ರಗ್ ಮಾಫಿಯಾ ವಿಸ್ತರಣೆಯಾಗಿದೆ. ಹಳ್ಳಿ ಹಳ್ಳಿಗೂ ಡ್ರಗ್ ಪೆಡ್ಡರ್ಗಳ ಜಾಲ ಚಾಚಿಕೊಂಡಿದ್ದು ಇದೀಗ ಜಿಗಣಿಯಲ್ಲಿ ಪೆಡ್ಡರ್ಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ
ಹೌದು. ನಾಲ್ವರು ಅಂತರಾಜ್ಯ ಡ್ರಗ್ ಪೆಡ್ಲರ್ಗಳನ್ನು ಬಂಧಿಸುವಲ್ಲಿ ಜಿಗಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಸ್ಸಾಂ ಮೂಲದ ಜಾಕೀರಹುಸೇನ್, ಬಿಸ್ವಜಿತ್ ದಾವ್, ಅಕ್ಷಯ್ ಹಾಗೂ ಶರ್ಪುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ ಪೊಲೀಸರು ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಡ್ರಗ್ಸ್ ಮಾಫಿಯಾ ರಾಜ್ಯದಲ್ಲಿ ಬೇರುಬಿಟ್ಟಿದ್ದು, ಪದೇ ಪದೇ ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಕೂಡಾ ಹೇಳುತ್ತಲೇ ಇದ್ದಾರೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನ ಬಾಣಸವಾಡಿ, ರಾಮಮೂರ್ತಿನಗರ ಸೇರಿದಂತೆ ಹಲವೆಡೆ ಡ್ರಗ್ಸ್ ಪೆಡ್ಲರ್ಗಳು ಎಗ್ಗಿಲ್ಲದೇ ತಮ್ಮ ಕೈಚಳಕ ತೋರುತ್ತಲೇ ಇದ್ದಾರೆ.
ಈ ನಡುವೆ ಬೆಂಗಳೂರು ಸಿಟಿಯಿಂದಾಚೆಗೂ ಡ್ರಗ್ಸ್ ಜಾಲ ವಿಸ್ತರಣೆಯಾಗುತ್ತಿರುವುದು ಆತಂಕ ಮೂಡಿಸಿದೆ