ನಿರ್ದೇಶಕನಿಗೆ ಅವಾಚ್ಯ ಶಬ್ದ ಬಳಕೆ: ಶ್ರೀನಗರ ಕಿಟ್ಟಿ ವಿರುದ್ಧ ನೆಟ್ಟಿಗರ ಆಕ್ರೋಶ!

ಬೆಂಗಳೂರು:ಸಿನಿಮಾ ನಟರು ಸಮಾಜಕ್ಕೆ ರೋಲ್ ಮಾಡೆಲ್ ಗಳಂತೆ. ಅವರ ನಡೆ ನುಡಿಯನ್ನು ಅವರ ಅಭಿಮಾನಿಗಳು ಅನುಕರಣೆ ಮಾಡ್ತಾರೆ. ಹೀಗಾಗಿ ನಟರು ಏನೇ ಮಾತನಾಡಿದರೂ ಸ್ವಲ್ಪ ಎಚ್ಚರಿಕೆಯಿಂದ ಮಾಡ್ಬೇಕುಕು ಆದ್ರೆ ವೇದಿಕೆ ಮೇಲೆ ನಿರ್ದೇಶಕನಿಗೆ ನಟ ಶ್ರೀನಗರ ಕಿಟ್ಟಿ ಬೋ*ಮಗ ಎಂದಿರುವ ವಿಡಿಯೋ ವೈರಲ್ ಆಗಿದೆ.

ಜುಲೈ 8ರಂದು ಶ್ರೀನಗರ ಕಿಟ್ಟಿ ಹುಟ್ಟುಹಬ್ಬವನ್ನು ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅವರ ಬರ್ತಡೇ ವಿಶೇಷವಾಗಿ ವೇಷಗಳು ಎಂಬ ಚಿತ್ರದ ಫಸ್ಟ್ ಝಲಕ್ ರಿಲೀಸ್ ಮಾಡಲಾಗಿದೆ. ಅಂದಹಾಗೇ ಸಿನಿಮಾವನ್ನು ‘ಗ್ರೀನ್ ಟ್ರೀ ಸ್ಟುಡಿಯೋಸ್’ ಮೂಲಕ ಕಿಶನ್ ರಾವ್ ದಳವಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಕಿಶನ್ ಅವ್ರೇ ನಿರ್ಮಾಣ ಮಾಡುತ್ತಿದ್ದಾರೆ. ತನ್ನ ಜೊತೆ ಕೆಲಸ ಮಾಡಿದ ಹುಡ್ಗನಿಗೆ ಶ್ರೀನಗರ ಕಿಟ್ಟಿ ರಫ್ ಆಗಿ ಮಾತನಾಡಿದ್ದು, ಟೀಕೆಗೆ ಕಾರಣವಾಗಿದೆ.
ಟೀಸರ್ ಬಿಡುಗಡೆ ವೇದಿಕೆಯಲ್ಲಿ ಕಿಶನ್ ಅವರನ್ನು ಏಕವಚನದಲ್ಲಿಯೇ ಪರಿಚಯ ಮಾಡಿಕೊಡುತ್ತಾ, ಕೊಬೆ ಬೋ*ಮಗ ಎಂದಿದ್ದಾರೆ. ಆ ವಿಡಿಯೋ ನೋಡಿ ನೆಟ್ಟಿಗರು ಎಷ್ಟಾದ್ರೂ ರವಿಬೆಳಗೆರೆ ಅಳಿಯ ಅಲ್ವಾ ಎಂದು ಕಮೆಂಟ್ ಮಾಡಿದ್ದಾರೆ. ಕಿಶನ್ ತನಗೆ ಆತ್ಮೀಯರಾದ್ರೂ ರವಿಬೆಳಗೆರೆ ಆ ರೀತಿ ಮಾತನಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ರವಿ ಬೆಳಗೆರೆ ಅಳಿಯನನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ.