ಪಡುಬಿದ್ರಿಯಲ್ಲಿ ನಡುಹಗಲು ಕಳ್ಳತನ: ರೆಸಾರ್ಟ್ ಕೆಲಸಗಾರ್ತಿಯಿಂದ ಕರಿಮಣಿ ಸರ ಕಸಿತ

ಪಡುಬಿದ್ರಿ: ಹೆಜಮಾಡಿಯ ಅಮಾವಾಸ್ಯೆಕರಿ ಎಂಬಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ಕೆಲಸ ಮಾಡಿಕೊಂಡಿದ್ದ ತುಳಸಿ (52) ಎಂಬ ಮಹಿಳೆಯ ಕರಿಮಣಿ ಸರವನ್ನು ಮಧ್ಯಾಹ್ನದ ವೇಳೆ ಕಸಿದು ಈರ್ವರು ಯುವಕರು ಪರಾರಿಯಾಗಿದ್ದಾರೆ.
ತುಳಸಿ ಅವರು ಕಸ ಎಸೆಯಲು ಗೇಟ್ನ ಹೊರಗಡೆ ಬಂದಾಗ ಬೈಕಲ್ಲಿ ಬಂದಿದ್ದ ಇಬ್ಬರು ಖದೀಮರು ಅಲ್ಲೇ ಹೊಂಚು ಹಾಕುತ್ತಿದ್ದರು. ಒಬ್ಟಾತ ಹೆಲ್ಮೆಟ್ ಧರಿಸಿದ್ದರೆ ಹಿಂದೆ ಕುಳಿತಿದ್ದವ ಮಾಸ್ಕ್ ಧರಿಸಿದ್ದ. ಸರವನ್ನು ಸೆಳೆದ ರಭಸದಲ್ಲಿ ಮಹಿಳೆ ಆಯತಪ್ಪಿ ಬಿದ್ದಿದ್ದು ಎದ್ದು ನೋಡುವ ವೇಳೆ ಬೈಕ್ ಸಹಿತ ಕಳ್ಳರು ಬಹಳಷ್ಟು ದೂರ ಕ್ರಮಿಸಿಯಾಗಿತ್ತು. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.