Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವೃದ್ಧನಿಗೆ ಡಿಜಿಟಲ್ ಅರೆಸ್ಟ್ ಭೀತಿ; 89.50 ಲಕ್ಷ ರೂಪಾಯಿ ಎಗರಿಸಿದ ಸೈಬರ್ ಕಿರಾತಕರು!

Spread the love

ಬೆಂಗಳೂರು: ನಗರದಲ್ಲಿ ಸೈಬರ್‌ ವಂಚಕರ (Cyber fraudster) ಆರ್ಭಟ ಇನ್ನೂ ಕಡಿಮೆ ಆಗಿಲ್ಲ. ಆಗಾಗ್ಗೆ ಜನರ ಮೇಲೆ ತಮ್ಮ ಪ್ರತಾಪ ತೋರಿಸುತ್ತಲೇ ಇರುತ್ತಾರೆ. ಇದರ ಭಾಗವಾಗಿ ಸಾಮಾನ್ಯ ಮುಗ್ದ ಜನರು ಲಕ್ಷಗಟ್ಟಲೆ ಹಣವನ್ನು ಕ್ಷಣ ಮಾತ್ರದಲ್ಲಿ ಕಳೆದುಕೊಳ್ಳುತ್ತಿದ್ದಾರೆ.

ಅದರಂತೆ ನಗರದ ವೃದ್ಧ ಈಗ 89 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಹೌದು, ಡಿಜಿಟಲ್‌ ಅರೆಸ್ಟ್‌ ಮೂಲಕ ವೃದ್ಧನಿಗೆ ದೊಡ್ಡ ಮಟ್ಟದ ಮೋಸ ಮಾಡಲಾಗಿದೆ. ಈ ಡಿಜಿಟಲ್‌ ಅರೆಸ್ಟ್‌ ಬಗ್ಗೆ ಮಾಧ್ಯಮಗಳು ಹಾಗೂ ಪೊಲೀಸರು ಆಗಾಗ್ಗೆ ಅರಿವು ಮೂಡಿಸುತ್ತಲೇ ಇದ್ದಾರೆ. ಆದರೂ ಸಹ ಕೆಲವು ಜನರು ಮಾತ್ರ ಇದರ ಬಗ್ಗೆ ಎಚ್ಚರಿಕೆ ವಹಿಸುತ್ತಿಲ್ಲ. ಈ ಕಾರಣಕ್ಕೆಗಿಯೇ ಹಣ ಕಳೆದುಕೊಂಡ ನಂತರ ಪೊಲೀಸರ ಬಳಿ ಮೊರೆ ಹೋಗುತ್ತಿದ್ದಾರೆ. ಸದ್ಯಕ್ಕೆ ಈ ವೃದ್ಧ ಬೆಂಗಳೂರು ಈಶಾನ್ಯ ವಿಭಾಗದ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ವಿವರ
ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ವ್ಯಕ್ತಿಗೆ ಫೋನ್‌ ಬಂದಿದೆ. ಅದು ಜನವರಿ 6 ರಂದು. ತಾನು ಏರ್‌ಟೆಲ್‌ ತಾಂತ್ರಿಕ ವಿಭಾಗದ ಸಿಬ್ಬಂದಿ ನಿತೀಶ್‌ಕುಮಾರ್‌ ಎಂದು ಹೇಳಿದ್ದಾನೆ. ಜೊತೆಗೆ ನಿಮ್ಮ ಆಧಾರ್‌ ಕಾರ್ಡ್‌ ಬಳಸಿ ಮುಂಬಯಿಯ ಕಂಪನಿಯೊಂದು ವೈಫೈ ಸಂಪರ್ಕ ಪಡೆದುಕೊಂಡಿದೆ. ಪರಿಣಾಮ ನೀವು ಮುಂಬಯಿಯ ಅಂಧೇರಿ ಠಾಣೆಯಲ್ಲಿ ತಕ್ಷಣ ದೂರು ನೀಡಿ ಎಂದು ಆತ ಹೇಳಿದ್ದಾನೆ.

ಇದಾದ ನಂತರ ಅವರ ಫೋನ್‌ಗೆ ವಾಟ್ಸಾಪ್‌ ಕರೆ ಬಂದಿದೆ. ಅದರಲ್ಲಿ ಪೊಲೀಸ್‌ ಅಧಿಕಾರಿಯಂತೆ ವರ್ತಿಸಿ ವೃದ್ಧ ವ್ಯಕ್ತಿಗೆ ಬೆದರಿಕೆ ಹಾಕಲಾಗಿದೆ. ನೀವು ಭಾರೀ ಹಣ ವ್ಯವಹಾರ ನಡೆಸಿದ್ದೀರಿ, ಇಡಿ ತನಿಖೆಗೆ ಆದೇಶ ನೀಡಿದೆ. ನೀವು ಈಗ ಮುಂಬೈಗೆ ಬರಬೇಕು, ಇಲ್ಲವಾದರೆ ಬಂಧನ ಮಾಡುತ್ತೇವೆ ಎಂದು ಎಚ್ಚರಿಸಿದ್ದಾನೆ.

ಇದಾದ ನಂತರ ಏನು ಮಾಡಬೇಕು ಎಂದು ತೋಚದ ವೃದ್ಧ ವ್ಯಕ್ತಿ , ನನಗೆ ಅ ಲ್ಲಿಗೆ ಬರಲು ಆಗುವುದಿಲ್ಲ ಎಂದಿದ್ದಾರೆ. ನಂತರ ಅವರ ಆಟ ಶುರು ಮಾಡಿಕೊಂಡಿದ್ದಾರೆ. ಬಳಿಕ ಡಿಜಿಟಲ್‌ ಅರೆಸ್ಟ್‌ ಮಾಡಿದ್ದಾರೆ. ಇಲ್ಲಿಂದ ವಂಚನೆ ಕೆಲಸ ಆರಂಭಿಸಿದ್ದಾರೆ. ನಿಮ್ಮ ಬ್ಯಾಂಕ್‌ ಪರಿಶೀಲನೆ ನಡೆಸಬೇಕು ಎಂದ ಅವರು, ಮೂರು ಬ್ಯಾಂಕ್‌ಗಳಿಂದ 89.50 ಲಕ್ಷ ರೂ.ಗಳನ್ನು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಿಮ್ಮಖಾತೆಯನ್ನು ವಂಚನೆ ಏನು ಅಗಿಲ್ಲ ಎಂದಾದರೆ ನಿಮ್ಮ ಹಣವನ್ನು ನಾವು ವಾಪಸ್‌ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇಷ್ಟು ಹಣ ನೀಡಿದರು ಸಹ ಸ್ಕ್ಯಾಮರ್‌ಗಳು ಮತ್ತೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಇದರಿಂದ ಅನುಮಾನಗೊಂಡ ವೃದ್ಧ ವ್ಯಕ್ತಿ 1930 ಗೆ ಕರೆ ಮಾಡಿ ದೂರು ದಾಖಲು ಮಾಡಿದ್ದಾರೆ. ನಂತರ ಈಶಾನ್ಯ ವಿಭಾಗದ ಪೊಲೀಸ್‌ ಠಾಣೆಗೆ ಹೋಗಿ ಲಿಖಿತ ದೂರನ್ನೂ ಸಹ ದಾಖಲು ಮಾಡಿದ್ದು, ಈಗ ತನಿಖೆ ಆರಂಭ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *