ಚಾಮರಾಜನಗರ: ‘ಬುರ್ಖಾ ಧರಿಸಿದ್ರೆ ಸತ್ತ ಮೇಲೆ ಶವಕ್ಕೆ ಏನೂ ಆಗೋಲ್ಲ..’ ಶಾಲೆಯಲ್ಲಿ ಮಕ್ಕಳಿಗೆ ಬ್ರೈನ್ವಾಶ್?

ಚಾಮರಾಜನಗರದ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಬ್ರೈನ್ವಾಶ್ ಮಾಡಲಾಗುತ್ತಿದೆಯಾ? ಏನೂ ಅರಿಯದ ಎಳೆವಯಸ್ಸಿನ ಮಕ್ಕಳ ಮೆದುಳಿನಲ್ಲಿ ಧಾರ್ಮಿಕ ಆಸ್ಥೆ, ಅಸಹಿಷ್ಣುತೆ, ಮತ್ತು ಮೌಢ್ಯ ತುಂಬಲಾಗುತ್ತಿದೆಯಾ? ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಘಟನೆಯ ಕುರಿತು ಪೋಷಕರು ಹಾಗೂ ಸಮಾಜದ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಹಿತಕಾರಿ ಮತ್ತು ಜ್ಞಾನಪ್ರದ ಶಿಕ್ಷಣ ನೀಡಲು ಬದಲು, ಮತೀಯ ಭಾವನೆಗಳನ್ನು ಕೂರಿಸುವಂತಹ ಕಾರ್ಯ ನಡೆಯುತ್ತಿರುವುದೇ? ಎಂಬ ಪ್ರಶ್ನೆ ಎದುರಾಗಿದೆ. ವಿಡಿಯೋದಲ್ಲಿ ಯಾವುದೇ ಸ್ಪಷ್ಟವಾದ ದೃಢನೆ ಸಿಕ್ಕಿಲ್ಲದಿದ್ದರೂ, ಈ ಕುರಿತು ಶಿಕ್ಷಣ ಇಲಾಖೆ ಮತ್ತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಸ್ಥಳೀಯ ಪೋಷಕರು ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಶಾಲೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ. “ಶಿಕ್ಷಣ ಎನ್ನುವುದು ಮಕ್ಕಳ ಭವಿಷ್ಯ ಕಟ್ಟುವ ಪರಿಕಲ್ಪನೆ. ಆದರೆ, ಅದೇ ಶಾಲೆಗಳಲ್ಲಿ ಮತೀಯ ಭಾವನೆಗಳು ಮತ್ತು ಧಾರ್ಮಿಕ ಪ್ರಭಾವ ಬೀರುವಂತಹ ಕಾರ್ಯಗಳು ನಡೆಯುತ್ತಿದ್ದರೆ, ಅದು ನಮ್ಮ ಮಕ್ಕಳ ಭವಿಷ್ಯಕ್ಕೆ ಅಪಾಯ ತಂದೊಡ್ಡುತ್ತದೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶಾಲಾ ಆಡಳಿತ ಮಂಡಳಿಯ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ. ಈ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.