ಬಾಂಗ್ಲಾ ಕ್ರಿಕೆಟಿಗರಿಗೆ ಬಿಗ್ ಶಾಕ್: ಭಾರತೀಯ ಕಂಪನಿಗಳಿಂದ ಪ್ರಾಯೋಜಕತ್ವ ರದ್ದು; ಆರ್ಥಿಕ ಸಂಕಷ್ಟದ ಭೀತಿ

ಭಾರತ ಮತ್ತು ಬಾಂಗ್ಲಾದೇಶದ (India vs Bangladesh) ನಡುವೆ ಕೆಲವು ದಿನಗಳಿಂದ ರಾಜಕೀಯ (Politics) ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಸಂದರ್ಭದಲ್ಲಿ, ಬಾಂಗ್ಲಾದೇಶವು ಸರಣಿ ಆಘಾತಗಳನ್ನು ಎದುರಿಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಬಾಂಗ್ಲಾದೇಶ ತಂಡದ ಕ್ರಿಕೆಟಿಗರು (Cricketers) ಭಾರಿ ಆರ್ಥಿಕ ನಷ್ಟವನ್ನು ಅನುಭವಿಸಲಿದ್ದಾರೆ.

ಭಾರತ ಮೂಲದ ಕಂಪನಿ ಎಸ್ಜಿ (SG) ಬಾಂಗ್ಲಾದೇಶ ನಾಯಕ ಲಿಟನ್ ದಾಸ್ (Liton Das), ಯಾಸಿರ್ ಅಲಿ (Yasir Ali) ಮತ್ತು ಮೊಮಿನುಲ್ ಹಕ್ (Mominul Haque) ಅವರಂತಹ ಸ್ಟಾರ್ ಆಟಗಾರರಿಗೆ ಸ್ಪಾನ್ಸರ್ (Sponsor) ಮಾಡುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕಂಪನಿಯು ತನ್ನ ಸ್ಪಾನ್ಸರ್ ಅನ್ನು ಮುಂದುವರಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಬಾಂಗ್ಲಾದೇಶದೊಂದಿಗಿನ ಪಾಲುದಾರಿಕೆಗಳನ್ನು ಕೊನೆಗೊಳಿಸಲು ಎಸ್ಜಿ ಕಂಪನಿಯು ಸಿದ್ಧವಾಗಿದೆ ಎಂದು ವರದಿಯಾಗಿವೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ. ಈ ಬೆಳವಣಿಗೆಗಳ ಬಗ್ಗೆ ಬಾಂಗ್ಲಾದೇಶ ಕ್ರಿಕೆಟಿಗರು ಕಳವಳ ವ್ಯಕ್ತಪಡಿಸುತ್ತಿರುವುದು ಸ್ಪಷ್ಟವಾಗಿದೆ.
ಆರ್ಥಿಕ ಸಮಸ್ಯೆ?
ವರದಿಗಳ ಪ್ರಕಾರ, ಎಸ್ಜಿ ಅಂತಹ ನಿರ್ಧಾರ ತೆಗೆದುಕೊಂಡರೆ, ಇತರ ಸಂಸ್ಥೆಗಳು ಸಹ ಅದೇ ಮಾರ್ಗವನ್ನು ಅನುಸರಿಸಲು ಸಿದ್ಧವಾಗಿವೆ. ಎಸ್ಜಿ ಬಾಂಗ್ಲಾದೇಶ ಕ್ರಿಕೆಟಿಗರ ಪ್ರಾಯೋಜಕತ್ವವನ್ನು ಹಿಂತೆಗೆದುಕೊಂಡರೆ, ತಂಡವು ಹೊಸ ಸಂಸ್ಥೆಗಾಗಿ ಕಾಯಬೇಕಾಗುತ್ತದೆ. ಇದರಿಂದ ಬಾಂಗ್ಲಾದೇಶ ಆಟಗಾರರು ಆರ್ಥಿಕ ಸಮಸ್ಯೆ ಎದುರಿಸಬೇಕಾಬಹುದು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇದೇ ಸಮಯದಲ್ಲಿ, ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಬಾಂಗ್ಲಾದೇಶ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.20 ಕೋಟಿ ರೂ.ಗೆ ಖರೀದಿಸಿತ್ತು. ಇದಕ್ಕೆ ಭಾರತದಲ್ಲಿ ಟೀಕೆಗಳು ಕೇಳಿಬಂದಿವೆ. ಇದರೊಂದಿಗೆ, ಬಿಸಿಸಿಐ ಕೆಕೆಆರ್ ಫ್ರಾಂಚೈಸಿಗೆ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
ಬಿಸಿಸಿಐ ಆದೇಶ
ಬಿಸಿಸಿಐ ಆದೇಶದ ಮೇರೆಗೆ ಕೆಕೆಆರ್ ಫ್ರಾಂಚೈಸಿ ಮುಸ್ತಾಫಿಜುರ್ ಅವರನ್ನು ಬಿಡುಗಡೆ ಮಾಡಿತು. ಇದು ಎರಡು ಏಷ್ಯಾದ ದೇಶಗಳ ನಡುವೆ ರಾಜತಾಂತ್ರಿಕ ಜಗಳಕ್ಕೆ ಕಾರಣವಾಯಿತು. ಈ ವೇಗಿ ಬಿಡುಗಡೆಯಾದ ನಂತರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಆರಂಭದಲ್ಲಿ ಮುಸ್ತಾಫಿಜುರ್ ಅವರಿಗೆ ಐಪಿಎಲ್ನಲ್ಲಿ ಆಡಲು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಲು ನಿರಾಕರಿಸಿತು. ಭದ್ರತಾ ಕಾರಣಗಳನ್ನು ಉಲ್ಲೇಖಿಸಿ, ಫೆಬ್ರವರಿ 7 ರಿಂದ ಪ್ರಾರಂಭವಾಗುವ 2026 ರ ಟಿ 20 ವಿಶ್ವಕಪ್ನಲ್ಲಿ ಭಾರತದಿಂದ ಶ್ರೀಲಂಕಾಕ್ಕೆ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಐಸಿಸಿಯನ್ನು ಕೋರಿತು. ಆದಾಗ್ಯೂ, ಐಸಿಸಿ ಇದಕ್ಕೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಬಿಸಿಬಿಗೆ ಖಡಕ್ ಎಚ್ಚರಿಕೆ
ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ ಎಲ್ಲರು ಮೆಚ್ಚುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ದೇಶದ ಕ್ರಿಕೆಟ್ನ ಭವಿಷ್ಯ ಮತ್ತು ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವಂತೆ ಅವರು ಬಿಸಿಬಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಜಿ ನಾಯಕ ಸ್ಪಷ್ಟನೆ
ನಾನು ಈಗ ಬಿಸಿಬಿಯಲ್ಲಿ ಇಲ್ಲ. ನಾನು ಎಲ್ಲರಂತೆ ಮಾಧ್ಯಮಗಳ ಮೂಲಕ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ಆದರೆ ಈ ವಿವಾದಗಳನ್ನು ನೋಡುತ್ತಿರುವವರಿಗೆ ಹೆಚ್ಚು ತಿಳಿಯುತ್ತದೆ. ಅದಕ್ಕಾಗಿಯೇ ಆತುರದ ಕಾಮೆಂಟ್ಗಳನ್ನು ಮಾಡುವುದು ಸರಿಯಲ್ಲ. ಆದರೆ ಒಂದು ವಿಷಯ ಸ್ಪಷ್ಟವಾಗಿದೆ. ಬಾಂಗ್ಲಾದೇಶ ಕ್ರಿಕೆಟ್ನ ಭವಿಷ್ಯವು ಬೇರೆ ಯಾವುದಕ್ಕಿಂತ ಮುಖ್ಯವಾಗಿದೆ. ಮಾತುಕತೆಯ ಮೂಲಕ ಪರಿಹಾರಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಅಂತಹ ಸೂಕ್ಷ್ಮ ವಿಷಯಗಳನ್ನು ಮೊದಲು ಮಂಡಳಿಯೊಳಗೆ ಚರ್ಚಿಸಬೇಕು. ನಾವು ಸಾರ್ವಜನಿಕ ಕಾಮೆಂಟ್ಗಳನ್ನು ಮಾಡಿದರೆ, ಅವು ಸರಿಯೋ ತಪ್ಪೋ, ಹಿಂದೆ ಸರಿಯುವುದು ಕಷ್ಟವಾಗುತ್ತದೆ. ನಮ್ಮ ಹಣಕಾಸಿನ ಸಂಪನ್ಮೂಲಗಳಲ್ಲಿ 90 ರಿಂದ 95 ಪ್ರತಿಶತ ಐಸಿಸಿಯಿಂದ ಬರುತ್ತದೆ. ಆದ್ದರಿಂದ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ದೇಶದ ಕ್ರಿಕೆಟ್ನ ಹಿತದೃಷ್ಟಿಯಿಂದ ಇರಬೇಕು ಎಂದು ತಮೀಮ್ ಹೇಳಿದ್ದಾರೆ.
ತಿರುಗಿಬಿದ್ದ ಬಿಸಿಬಿ
ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರ ಹೇಳಿಕೆಯನ್ನು ಬಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ತೀವ್ರವಾಗಿ ಟೀಕಿಸಿದ್ದಾರೆ. ಬಿಸಿಬಿ ನಿರ್ದೇಶಕ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷ ಎಂ. ನಜ್ಮುಲ್ ಇಸ್ಲಾಂ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ತಮೀಮ್ ಅವರನ್ನು “ಭಾರತದ ದಲ್ಲಾಳಿ” ಎಂದು ಕರೆದರು