ಬೆಂಗಳೂರು: ಸ್ನೇಹಿತನಿಗೆ ಕುಡಿಸಿ ₹12 ಲಕ್ಷ ಚಿನ್ನ ದರೋಡೆ, 4 ಮಂದಿ ಅರೆಸ್ಟ್!

ಬೆಂಗಳೂರು: ಸ್ನೇಹಿತನಿಗೆ ಕಂಠಪೂರ್ತಿ ಮದ್ಯ ಕುಡಿಸಿದ ಸ್ನೇಹಿತರೇ ಗ್ಯಾಂಗ್ವೊಂದಕ್ಕೆ ಸುಪಾರಿ ನೀಡಿ ಆತನ ಚಿನ್ನಾಭರಣ ದರೋಡೆ ಮಾಡಿಸಿರುವ ಘಟನೆ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಉದ್ಯಮಿ ಚಂದನ್ ದರೋಡೆಗೊಳಗಾದವರು. ಈ ಸಂಬಂಧ ಚಂದನ್ ನೀಡಿದ ದೂರಿನ ಮೇರೆಗೆ ಆತನ ಸ್ನೇಹಿತರಾದ ಚಂದನ್, ಪವನ್, ಅಚಲ್, ಪ್ರೇಮ್ ಶೆಟ್ಟಿಯನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ 40 ಗ್ರಾಂ ಚಿನ್ನದ ಸರ, 20 ಗ್ರಾಂ ಕೈ ಕಡಗ ವನ್ನು ಹಾಗೂ 9 ಗ್ರಾಂ ಉಂಗುರ ವಶಕ್ಕೆ ಪಡೆಯ ಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಡೆದುದ್ದೇನು?: ದೂರು ದಾರ ಚಂದನ್ ಮತ್ತು ಆರೋಪಿ ಗಳಾದ ಪವನ್, ಅಚಲ್ ನಾಲ್ಕು ವರ್ಷಗಳಿಂದ ಸ್ನೇಹಿತರಾಗಿದ್ದು, ಏ.30 ರಂದು ಮೂವರು ಚಿಕ್ಕಜಾಲದ ನೆಕ್ಟ್ ಚಾಪ್ಟರ್ ಪಬ್ಗ ಹೋಗಿದ್ದರು. ಈ ವೇಳೆ ಚಂದನ್ಗೆ ಪವನ್ ಮತ್ತು ಅಚಲ್ ಕಂಠಪೂರ್ತಿ ಕುಡಿಸಿ ದ್ದರು. ನಂತರ ಪವನ್ ಹಾಗೂ ಅಚಲ್, ಚಂದನ್ನನ್ನು ಕಾರಿನತ್ತ ಕರೆದೊಯ್ದಿದ್ದಾರೆ. ಈ ವೇಳೆ ಅಚಲ್ ಜೆ.ಪಿ ನಗರದ ಪ್ರೇಮ್ ಶೆಟ್ಟಿ ಹಾಗೂ ಆತನ ಗ್ಯಾಂಗ್ಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಅದರಂತೆ ತಡರಾತ್ರಿ 1.30ರ ಸುಮಾರಿಗೆ ಬೈಕ್ನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು ಚಂದನ್ಗೆ ಹಿಗ್ಗಾಮುಗ್ಗಾ ಥಳಿಸಿ ಆತನ ಬಳಿಯಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಮೂವರು ಆರೋಪಿಗಳ ವಶ: ಮತ್ತೂಂದೆಡೆ ಘಟನೆ ನಡೆದು 10 ದಿನಗಳ ಬಳಿಕ ದೂರು ನೀಡಿದ ಚಂದನ್, ತನ್ನ ಸ್ನೇಹಿತರ ವಿರುದ್ಧವೇ ಆರೋಪಿಸಿದ್ದ. ಹೀಗಾಗಿ ಪವನ್ ಮತ್ತು ಅಚಲ್ನ ಸಿಡಿಆರ್ ಸಂಗ್ರಹಿಸಿದ ಪೊಲೀ ಸರಿಗೆ, ಘಟನೆಗೂ ಮುನ್ನ ಕೆಲ ವ್ಯಕ್ತಿಗಳಿಗೆ ಹಲವು ಬಾರಿ ಕರೆ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ರಾಬರಿ ರಹಸ್ಯ ಬಯಲಾಗಿದೆ. ಅಲ್ಲದೆ, ಚಂದನ್, ಅಚಲ್ ಮತ್ತು ಪವನ್, ಪ್ರೇಮ್ ಶೆಟ್ಟಿ ಎಂಬಾತನ ಮೂಲಕ ರಾಬರಿ ಮಾಡಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸುಲಿಗೆಗೆ ಕಾರಣವೇನು?:
ಶ್ರೀಮಂತನಾಗಿರುವ ಚಂದನ್, ಯಾವಾಗಲು ಮೈ ತುಂಬಾ ಚಿನ್ನಾಭರಣ ಹಾಕಿಕೊಂಡೇ ಓಡಾ ಡುತ್ತಿದ್ದ. ಓಡಾಡಲು ಐಷಾರಾಮಿ ಕಾರನ್ನೇ ಬಳಸುತ್ತಿದ್ದ. ಈ ಎಲ್ಲಾ ವಿಚಾರವನ್ನು ಅಚಲ್, ಪವನ್ ತಿಳಿದಿದ್ದರು. ಅಚಲ್ ಜೆ.ಪಿ. ನಗರದಲ್ಲಿ ಕೆಫೆಯೊಂದನ್ನು ನಡೆಸುತ್ತಿದ್ದ. ಇತ್ತೀಚೆಗೆ ಕೆಫೆ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಸಾಲ ಹೆಚ್ಚಾಗಿದ್ದರಿಂದ ಸ್ನೇಹಿತ ಚಂದನ್ ಮೇಲೆ ಕಣ್ಣು ಬಿದ್ದಿತ್ತು. ಆತನ ಚಿನ್ನಾಭರಣವನ್ನು ದರೋಡೆಗೆ ಸಂಚು ರೂಪಿಸಿದ್ದ. ಅದಕ್ಕೆ ಪವನ್ ಸಹಕಾರ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದರು.