ಬಕ್ರೀದ್ ಹಿನ್ನಲೆಯಲ್ಲಿ ಅನಧಿಕೃತ ಜಾನುವಾರು ಸಾಗಾಟ ತಡೆಗೆ ಜಿಲ್ಲಾಡಳಿತದ ಸಭೆ

ಮಂಗಳೂರು: ಬಕ್ರೀದ್ ಹಬ್ಬದ ಪ್ರಯುಕ್ತ ಅನುಮತಿಯಿಲ್ಲದ ಒಂಟೆ ಹಾಗೂ ಇತರ ಜಾನುವಾರುಗಳ ಸಾಗಾಟ ಮತ್ತು ಹತ್ಯೆ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಸಮಿತಿಯ ಸಭೆ ಜೂನ್ 2, 2025ರಂದು ನಡೆಯಿತು.
ಈ ಸಭೆಯ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಜಿಲ್ಲಾಧಿಕಾರಿ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಗಳೂರು ನಗರ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ), ಹಾಗೂ ಇತರೆ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದರು.