ಕುಂದಾಪುರದಲ್ಲಿ ಬಜಾಜ್ ಸ್ಕೂಟಿ ಕಳವು: ಪೋಲಿಸ್ ಠಾಣೆಗೆ ದೂರ

ಕುಂದಾಪುರ: ತಲ್ಲೂರು ಗ್ರಾಮದ ಎಸ್ಎಸ್ ಕಾಂಪ್ಲೆಕ್ಸ್ ಬಳಿ ನಿಲ್ಲಿಸಿದ್ದ ಕೋಟೆಬಾಗಿಲಿನ ರಮೇಶ್ ಅವರ ಬಜಾಜ್ ಸ್ಕೂಟಿ ಕಳವಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಮೇಶ್ ಅವರು ಮೇ 17ರ ಸಂಜೆ 5 ಗಂಟೆಗೆ ಸ್ಕೂಟಿ ನಿಲ್ಲಿಸಿ ಡ್ರೈವಿಂಗ್ ಕೆಲಸಕ್ಕೆ ತೆರಳಿದ್ದರು.
ಮೇ 19ಕ್ಕೆ ಬೆಳಗ್ಗೆ 8.30ರ ಸುಮಾರಿಗೆ ಬಂದು ನೋಡಿದಾಗ ಅಲ್ಲಿರಲಿಲ್ಲ. ಕಳವಾದ ಸ್ಕೂಟಿಯ ಮೌಲ್ಯ 10 ಸಾವಿರ ರೂ. ಅಂದಾಜಿಸಲಾಗಿದೆ.