ಪಹಲ್ಗಾಮ್ ಉಗ್ರ ದಾಳಿ ಬಳಿಕ, ದಿಲ್ಲಿಯಲ್ಲಿ ಕೇಕ್ ಹಿಡಿದು ದಿಲ್ಲಿ ರಾಯಭಾರ ಕಚೇರಿಗೆ ಬಂದ ವ್ಯಕ್ತಿ

ಹೊಸದಿಲ್ಲಿ: ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ದಿಲ್ಲಿ ರಾಯಭಾರ ಕಚೇರಿ ಬಳಿ ವ್ಯಕ್ತಿಯೊಬ್ಬ ಕೇಕ್ ಹಿಡಿದು ಆಗಮಿಸಿದ್ದ ಎಂದು ವರದಿಯಾಗಿದ್ದು, ಈ ಸಂಬಂಧ ವೀಡಿಯೋ ಒಂದು ವೈರಲ್ ಆಗಿದೆ.
ದಾಳಿಗೆ ಪ್ರತ್ಯುತ್ತರ ನೀಡಲೆಂದು ಭಾರತವು ಬುಧವಾರ ಪಾಕ್ನಲ್ಲಿನ ತನ್ನ ರಾಯಭಾರಿಗಳನ್ನು ಕರೆಸಿಕೊಂಡಿದ್ದು, ಭಾರತದ
ಲ್ಲಿರುವ ಪಾಕ್ ರಾಯಭಾರಿಗಳನ್ನೂ ದೇಶಕ್ಕೆ ತೆರಳುವಂತೆ ಆದೇಶಿಸಿದ ಬೆನ್ನಲ್ಲೇ ಘಟನೆ ನಡೆದಿದೆ.
ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಕೇಕ್ ಇರಿಸುವಂತಹ ಬಾಕ್ಸ್ ಒಂದನ್ನೂ ಹಿಡಿದು ರಾಯಭಾರ ಕಚೇರಿಯತ್ತ ತೆರಳುತ್ತಿದ್ದಾನೆ. ಇದು ದಾಳಿಯ ಸಂಭ್ರಮಾಚರಣೆಯೇ ಎನ್ನುವಂತೆ ಮಾಧ್ಯಮಗಳು ಆತನನ್ನು ಪ್ರಶ್ನಿಸಿದ್ದು, ಆತ ಉತ್ತರ ನೀಡದೇ ಮುಂದೆ ಸಾಗಿದ್ದಾನೆ. ಇದು ಪಾಕ್ನದ್ದೇ ವ್ಯಂಗ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ