ಸೈಬರ್ ಕ್ರೈಮ್ ತಡೆಗೆ ಕರ್ನಾಟಕ ಪೊಲೀಸ್ ಸಜ್ಜು: 1930 ಸಹಾಯವಾಣಿಗೆ ವೆಬ್ಬಾಟ್ ಬೆಂಬಲ

ಬೆಂಗಳೂರು : ಸದ್ಯ ದೇಶದಲ್ಲಿ ಸೈಬರ್ ಕ್ರೈಮ್ ನಿಂದ ಲಕ್ಷಾಂತರ ಜನ ಅದೆಷ್ಟೋ ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ. ಇದನ್ನು ತಡೆಯಲು ಸೈಬರ್ ಅಪರಾಧ ಸಹಾಯವಾಣಿಯನ್ನು ಮಾಡಿದರೂ ಕೂಡ ಹೊಸ ವಂಚನೆಗಳು ಮಾತ್ರ ನಡೆಯುತ್ತಲೇ ಇದೆ. ಇದೀಗ ಇದರ ಬೆನ್ನಲ್ಲೇ ಸಹಾಯವಾಣಿ ಜೊತೆಗೆ ವೆಬ್ ಬಾಟ್ ಉನ್ನತೀಕರಿಸಲಾಗಿದೆ.
ಈ ಬಗ್ಗೆ ರಾಜ್ಯಪೊಲೀಸ್ ಮಹಾ ನಿರ್ದೇಶಕ ಮತ್ತು ಪೊಲೀಸ್ ಮಹಾ ನೀರಿಕ್ಷಕರಾದ ಅಲೋಕ್ ಕುಮಾರ್ ತಿಳಿಸಿದ್ದು, ರಾಜ್ಯದಲ್ಲಿ 1930 ಸಹಾಯವಾಣಿಯಲ್ಲಿ ಸ್ವೀಕರಿಸಿದ ಕರೆಗಳು ಸಂಖ್ಯೆ 2022 ರಲ್ಲಿ 1.30 ಲಕ್ಷ ಇದ್ದು, ಅದೇ 2024ರ ಹೊತ್ತಿಗೆ 8.26 ಲಕ್ಷ ಆದವೂ, ಮತ್ತು 2025ರ ಮೊದಲ ಮೂರು ತಿಂಗಳಲ್ಲೇ 4.34 ಲಕ್ಷ ಕರೆಗಳು ಬಂದಿದೆ ಎಂದರು.
ರಾಜ್ಯದಲ್ಲಿ ದಿನನಿತ್ಯ ಜನರು ವಂಚನೆಗೆ ಒಳಗಾಗುತ್ತಿರುವ ಹಿನ್ನಲೆ ಕೂಡಲೇ ದೂರು ದಾಖಲಿಸಲು ಅನುಕೂಲವಾಗುವಂತೆ ಸೈಬರ್ ಸಹಾಯವಾಣಿ ವೆಬ್ ಬಾಟ್ ಅನ್ನು ಉನ್ನತೀಕರಿಸಲಾಗಿದೆ. ಕರ್ನಾಟಕ ರಾಜ್ಯದ ತುರ್ತು ಸ್ಪಂದನಾ ವ್ಯವಸ್ಥೆಯ ಸಾರ್ವಜನಿಕ ಸುರಕ್ಷತಾ ಪ್ರತ್ಯುತ್ತರ ಕೇಂದ್ರವನ್ನು ಸಂಪರ್ಕ ಸಾರಿಗೆ ಮತ್ತು ಆಧುನೀಕರಣ ಕಚೇರಿಯಲ್ಲಿ ಸ್ಥಾಪಿಸಲಾಗಿದೆ.
ಸದರಿ 1930 ಸಹಾಯವಾಣಿ ಕೇಂದ್ರದಲ್ಲಿ ಆನ್ಲೈನ್ ಹಣಕಾಸು ವಂಚನೆ ಅಪರಾಧಗಳಿಗೆ ಸಂಬಂಧಿಸಿದ ದೂರುಗಳನ್ನು ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟ್ಲ್ (ಎನ್ಸಿಆರ್ಪಿ) ಮೂಲಕ ದಾಖಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವೆಬ್ಬಾಟ್ ಉನ್ನತೀಕರಣದೊಂದಿಗೆ 1930ಗೆ ಹೊಸ ದೂರು ದಾಖಲಿಸುವವರಿಗೆ ‘ಸಕಾಲಧಿ’ದಲ್ಲಿಆದ್ಯತೆ ನೀಡಲಾಗಿದೆ. ವಾಯ್ಸ್ ಗೈಡೆಡ್ ವೆಬ್ಬಾಟ್ ಜಾರಿ ಮಾಡಿದ್ದು, ಅವಧಿನ್ನು ಎನ್ಸಿಆರ್ಪಿಯಲ್ಲಿ ಅಳವಡಿಸಲಾಗಿದೆ. ಇದರಿಂದ ದೂರುದಾರರು ವೆಬ್ಬಾಟ್ ಮೂಲಕ ಮಾಹಿತಿ ಸಲ್ಲಿಸಲು ಇಚ್ಛಿಸಿದಲ್ಲಿಎಸ್ಎಂಎಸ್ ಮೂಲಕ ವೆಬ್ಬಾಟ್ ಲಿಂಕ್ ಕಳುಹಿಸಲಾಗುವುದು.
1930 ಸಹಾಯವಾಣಿಯಲ್ಲಿಈ ಹಿಂದಿನ ದೂರವಾಣಿ ಮೂಲಸೌಕರ್ಯ ಬದಲಾಯಿಸಿ ಎಸ್ಐಪಿ ಸಂಪರ್ಕ ಉನ್ನತೀಕರಿಸಲಾಗಿದ್ದು, ಇದರಿಂದ ಹೆಚ್ಚುತ್ತಿರುವ ದೂರುಗಳ ಕರೆ ಪ್ರಮಾಣ ನಿರ್ವಹಣೆಗೆ ಸಹಕಾರಿಯಾಗಲಿದೆ.
ವೆಬ್ಬಾಟ್ನಲ್ಲಿ1930ಗೆ ಕರೆ ಮಾಡಿದವರಿಗೆ ಭಾಷಾ ಆಯ್ಕೆ ವ್ಯವಸ್ಥೆ ಪರಿಚಯಿಸಲಾಗಿದೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿವಂಚನೆ ಸಂಬಂಧ ಸಂಪೂರ್ಣ ವಿವರ ನೀಡಬಹುದು. 1930ಗೆ ಕರೆ ಮಾಡಿದಾಗ ಬ್ಯುಸಿ ಬಂದರೆ ಐವಿಆರ್ ಮುಖಾಂತರ ಕರೆ ಮಾಡಿದವರಿಗೆ ಸರತಿ ಕರೆಗಳ ಕುರಿತ ಮಾಹಿತಿ ರವಾನೆಯಾಗಲಿದೆ.