ತ್ರಿಶೂರ್ನಲ್ಲಿ ಮಸಾಲೆದೋಸೆಯಿಂದ ಆಹಾರ ವಿಷಬಾಧೆ: 3 ವರ್ಷದ ಬಾಲಕಿ ಮೃತ್ಯು

ತ್ರಿಶೂರ್ : ಮಸಾಲೆದೋಸೆ ತಿಂದು ಮೂರು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಈ ಘಟನೆ ಕೇರಳದ ತ್ರಿಷಿರ್ನಲ್ಲಿ ನಡೆದಿದೆ.
ತ್ರಿಶೂರ್ನ ವೆಂಡೂರಿನ ಅಳಗಪ್ಪ ಮೈದಾನದ ಕಲ್ಲೂಕರನ್ ಹೆನ್ರಿ ಅವರ ಪುತ್ರಿ ಒಲಿವಿಯಾ ಮೃತ ಬಾಲಕಿ. ಪ್ರಯಾಣದ ಸಮಯದಲ್ಲಿ ಮಗು ಮಸಾಲೆ ದೋಸೆ ತಿಂದಿತ್ತು.
ಅದರಿಂದ ಆಹಾರ ವಿಷಪ್ರಾಶನವಾಗಿದೆ ಎಂದು ಶಂಕಿಸಲಾಗಿದೆ. ಘಟನೆಯ ಕುರಿತು ಪುದುಕ್ಕಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಡೆದಿದಿದ್ದೇನು?:
ಕಳೆದ ಶನಿವಾರ, ವಿದೇಶದಲ್ಲಿದ್ದ ಹೆನ್ರಿಯನ್ನು ಸ್ವಾಗತಿಸಲು ಕುಟುಂಬವು ನೆಡುಂಬಸ್ಸೆರಿ ವಿಮಾನ ನಿಲ್ದಾಣಕ್ಕೆ ಬಂದಿತು. ಮನೆಗೆ ಹೋಗುವಾಗ, ಅಂಗಮಾಲಿ ಬಳಿಯ ಕರಯಂಪರಂನಲ್ಲಿರುವ ಹೋಟೆಲ್ನಲ್ಲಿ ಮಸಾಲೆ ದೋಸೆ ತಿಂದರು. ಮನೆಗೆ ಬಂದಾಗ ಎಲ್ಲರೂ ದೈಹಿಕವಾಗಿ ಅಸ್ವಸ್ಥರಾಗಿದ್ದರು.
ಹೆನ್ರಿ, ಅವರ ಪತ್ನಿ ಮತ್ತು ಒಲಿವಿಯಾ ತಕ್ಷಣವೇ ತಮ್ಮ ಮನೆಯ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಒಲಿವಿಯಾ ಅವರ ಆರೋಗ್ಯ ಹದಗೆಟ್ಟ ನಂತರ, ಅವರನ್ನು ಮೊದಲು ಕೊಡಕರದ ಖಾಸಗಿ ಆಸ್ಪತ್ರೆಗೆ ಮತ್ತು ನಂತರ ಪುತ್ತುಕ್ಕಾಡ್ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಕುರಿತಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.