Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

72 ಸಾವಿರ ರೂ.ಗಳೊಂದಿಗೆ ಅಂಚೆ ಪಾಲಕ ನಾಪತ್ತೆ – ಬಂಟ್ವಾಳದಲ್ಲಿ ಸಂಚಲನ

Spread the love

ಬಂಟ್ವಾಳ : ಸಹಾಯಕ ಅಂಚೆ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಅಂಚೆ ಚೀಟಿಯಲ್ಲಿದ್ದ 72 ಸಾವಿರ ರೂ.ಗಳೊಂದಿಗೆ ನಾಪತ್ತೆಯಾದ ಘಟನೆ ಸಜಿಪಪಡು ಗ್ರಾಮದಲ್ಲಿ ನಡೆದಿದೆ.

ಸಜಿಪಪಡು ಗ್ರಾಮದಲ್ಲಿ ಸಹಾಯಕ ಅಂಚೆ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿಯ ರಾಯಬಾಗ ತಾಲೂಕಿನ ಅರಿಬೆಂಚಿ ನಿವಾಸಿ ಬಾಳಪ್ಪ ತೇಗ್ಯಾಲ್ (28) ಎಂಬವರು ಸಜಿಪನಡು ಗ್ರಾಮಾಂತರ ಅಂಚೆ ಕಚೇರಿಯ ಅಂಚೆಚೀಟಿಯಲ್ಲಿದ್ದ 72 ಸಾವಿರ ರೂ.ಗಳೊಂದಿಗೆ ನಾಪತ್ತೆಯಾಗಿದ್ದಾರೆ.

ಬಾಳಪ್ಪ ಕಳೆದ ವರ್ಷದಿಂದ ಸಜಿಪಪದವಿನಲ್ಲಿ ಸಹಾಯಕ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಫೆ.19ರಂದು ಸಜಿಪನಡು ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಅಸ್ಮಿನಾ ಬಾನು ಅಂಚೆ ಚೀಲವನ್ನು ಹಸ್ತಾಂತರಿಸಿ ಪಾಣೆ ಮಂಗಳೂರು ಅಂಚೆ ಕಚೇರಿಗೆ ತಲುಪಿಸುವಂತೆ ಸೂಚಿಸಿದ್ದರು. ಆದಾಗ್ಯೂ, ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡುಬAದಿದೆ.

ನAತರ ಸಜಿಪಮೂಡ ಗ್ರಾಮದ ಕಂದೂರಿನಲ್ಲಿರುವ ಇವರ ಬಾಡಿಗೆ ಮನೆಗೆ ಅಧಿಕಾರಿಗಳು ಭೇಟಿ ನೀಡಿದಾಗ ಅಲ್ಲಿ ಅಂಚೆಚೀಟಿ ಪತ್ತೆಯಾಗಿದ್ದು, ಹಣ ನಾಪತ್ತೆಯಾಗಿತ್ತು. ಅವರ ಕುಟುಂಬ ಸದಸ್ಯರನ್ನೂ ಸಂಪರ್ಕಿಸಿದಾಗ ಅವರು ಮನೆಗೆ ಹಿಂತಿರುಗಿಲ್ಲ ಎಂದು ತಿಳಿಸಿದರು. ಅಸ್ಮಿನಾ ಬಾನು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *