ದಸರಾ ದೇಣಿಗೆಗೆಂದು ಬಂದಿದ್ದ ತೃತೀಯಲಿಂಗಿಗಳು ಮಾಡಿದ್ದೇನು?: ನರ್ಸ್ ಮೇಲೆ ಹಲ್ಲೆ ನಡೆಸಿ ದರ ದರನೆ ಎಳೆದೊಯ್ದ ಘಟನೆ

ನೆಲ್ಲೂರು: ದಸರಾ ದೇಣಿಗೆ ಕೇಳಲು ಆಸ್ಪತ್ರೆಗೆ ಬಂದ ತೃತೀಯಲಿಂಗಿಗಳ ಗುಂಪು ನರ್ಸ್ ಮೇಲೆ ಹಲ್ಲೆ ನಡೆಸಿ ದರ ದರನೆ ಎಳೆದೊಯ್ದಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ಈ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಈ ಆಸ್ಪತ್ರೆ ಜಿಲ್ಲೆಯ ಕಂದುಕೂರು ಪ್ರದೇಶದಲ್ಲಿದೆ. ಆರು ಮಂದಿ ತೃತೀಯಲಿಂಗಿಗಳು ಕುಡಿದ ಮತ್ತಿನಲ್ಲಿ ಆಸ್ಪತ್ರೆಗೆ ನುಗ್ಗಿ ನರ್ಸ್ಗೆ ಏಕಾಏಕಿ ಥಳಿಸಲು ಪ್ರಾರಂಭಿಸಿದರು, ತಾವು ಕೇಳಿದಷ್ಟು ದೇಣಿಗೆ ಕೊಡದ ಕಾರಣ ಅವರು ಕೋಪಗೊಂಡಿದ್ದರು ಎಂದು ಹೇಳಲಾಗುತ್ತಿದೆ.ಆರೋಪಿಯು ನರ್ಸ್ನ ಕೂದಲನ್ನು ಹಿಡಿದು ಬಾಗಿಲ ಬಳಿ ಎಳೆದೊಯ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲಿದ್ದ ವ್ಯಕ್ತಿಯೊಬ್ಬ ಸಹಾಯಕ್ಕೆ ಬಂದು ಅವರನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ.
