Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪೇರೆಂಟ್ಸ್ ಮೀಟಿಂಗ್‌ನ ನಂತರ ಮನನೊಂದು 17ನೇ ಮಹಡಿಯಿಂದ ಹಾರಿದ 9ನೇ ತರಗತಿ ವಿದ್ಯಾರ್ಥಿನಿ

Spread the love

ಹೈದರಾಬಾದ್ / ಕುಕಟ್ಪಲ್ಲಿ : ಪೇರೆಂಟ್ಸ್ ಮೀಟಿಂಗ್’ನಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯೊಬ್ಬಳು ಚೆನ್ನಾಗಿ ಓದುತ್ತಿಲ್ಲ ಎಂದು ಗದರಿಸಿದ್ದರಿಂದ 17 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುರುವಾರ ಮಧ್ಯರಾತ್ರಿ ಕೆಪಿಎಚ್ಬಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜೀರ ಟ್ರಿನಿಟಿ ಹೋಮ್ಸ್ನಲ್ಲಿ ಈ ಘಟನೆ ನಡೆದಿದೆ.

ಕೆಪಿಎಚ್ಬಿ ಸಿಐ ರಾಜಶೇಖರ್ ರೆಡ್ಡಿ ನೀಡಿದ ವಿವರಗಳ ಪ್ರಕಾರ. ಮಂಜೀರ ಟ್ರಿನಿಟಿಯ 17 ನೇ ಮಹಡಿಯ ಫ್ಲಾಟ್ ಸಂಖ್ಯೆ 1705 ರಲ್ಲಿ ವಾಸಿಸುವ ಅಕುಲಾ ಹರಿನಾರಾಯಣ ಮೂರ್ತಿ ಅವರ ಪುತ್ರಿ ಅಕುಲಾ ಲಾಸ್ಯ ಪ್ರಿಯಾ (13) ಅಡ್ಡಗುಟ್ಟ ಸೊಸೈಟಿಯ ನಾರಾಯಣ ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಗುರುವಾರ ಎಂದಿನಂತೆ ಶಾಲೆಗೆ ಹೋಗಿದ್ದಳು. ಅದೇ ಸಮಯದಲ್ಲಿ, ಶಾಲಾ ಆಡಳಿತ ಮಂಡಳಿಯು ಲಾಸ್ಯ ಪ್ರಿಯಾಳ ತಾಯಿಗೆ ಕರೆ ಮಾಡಿ, ಶಾಲೆಯಲ್ಲಿ ಪೋಷಕರ ಸಭೆ ಇದೆ ಎಂದು ಹೇಳಿದ್ದಾರೆ. ಪೋಷಕರ ಸಭೆಗೆ ಬಂದಿದ್ದ ಲಾಸ್ಯ ಪ್ರಿಯಾಳ ತಾಯಿಗೆ ಶಿಕ್ಷಕಿ ಲಾಸ್ಯ ಪ್ರಿಯಾ ಸ್ಟಡಿಯಲ್ಲಿ ಬಹಳ ಹಿಂದುಳಿದಿದ್ದಾಳೆ. ಅವಳು ಗಮನಹರಿಸುತ್ತಿಲ್ಲ. ಮನೆಯಲ್ಲಿ ಚೆನ್ನಾಗಿ ಓದಿಸಿ ಎಂದು ಹೇಳಿದ್ದಾರೆ.

ನಂತರ ಮನೆಯಲ್ಲಿ ಲಾಸ್ಯ ಪ್ರಿಯಾಳ ತಂದೆ ಅಕುಲ ಹರಿ ನಾರಾಯಣ ಮೂರ್ತಿ ಶಾಲೆಯಲ್ಲಿ ಏನಾಯಿತು ಎಂದು ತಾಯಿಗೆ ಕೇಳುತ್ತಾಳೆ. ತಾಯಿ ಶಾಲೆಯಲ್ಲಿ ನಡೆದಿದ್ದನ್ನ ಎಲ್ಲಾವನ್ನು ಹೇಳುತ್ತಾರೆ. ಊಟದ ನಂತರ, ಕುಟುಂಬ ಸದಸ್ಯರು ಲಾಸ್ಯಳಿಗೆ ಕಷ್ಟಪಟ್ಟು ಓದಲು ಹೇಳುತ್ತಾರೆ. ಈ ಎಲ್ಲಾ ಘಟನೆಯಿಂದ ಮನನೊಂದ ವಿದ್ಯಾರ್ಥಿನಿ ಸೂಸೈಡ್ ಮಾಡಿಕೊಂಡಿದ್ದಾಳೆ.

ಕುಟುಂಬ ಸದಸ್ಯರು ಹಾಲ್ನಲ್ಲಿ ಕುಳಿತಿದ್ದ ವೇಳೆಗೆ ರಾತ್ರಿ 10 ಗಂಟೆಗೆ, ಅಪಾರ್ಟ್ಮೆಂಟ್ ಅಧ್ಯಕ್ಷ ನರಸಿಂಹ ರಾವ್ ಹರಿ ನಾರಾಯಣ ಮೂರ್ತಿಯವರಿಗೆ ಕರೆ ಮಾಡಿದರು. ತಕ್ಷಣ ಮೊದಲ ಮಹಡಿಗೆ ಬರಲು ಹೇಳಿದರು. ಏಕೆ ಎಂದು ಕೇಳಿದಾಗ ಅವರು ಉತ್ತರಿಸಲಿಲ್ಲ. ಕೂಡಲೇ ಪೋಷಕರು ಮಗಳ ರೂಮ್ ನೋಡಿದ್ದಾರೆ. ಅಲ್ಲಿ ಅವಳು ಇರಲಿಲ್ಲ.
ತಕ್ಷಣ, ಹರಿ ನಾರಾಯಣ ಮೂರ್ತಿ ಮೊದಲ ಮಹಡಿಗೆ ಹೋಗಿ ಲಾಸ್ಯ ಪ್ರಿಯಾ ನೆಲದ ಮೇಲೆ ಬಿದ್ದಿರುವುದನ್ನು ನೋಡಿದರು. ಲಾಸ್ಯ ಅವರ ಎಡಗಾಲು ದೇಹದಿಂದ ಬೇರ್ಪಟ್ಟಿತ್ತು. 17 ನೇ ಮಹಡಿಯಿಂದ ಹಾರಿ ಲಾಸ್ಯ ಪ್ರಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು.. ಲಾಸ್ಯ ಕೆಳಗಡೆ ಚೂಪಾದ ವಸ್ತುವಿನ ಮೇಲೆ ಬಿದ್ದ ನಂತರ ಆಕೆಯ ಎಡಗಾಲು ದೇಹದಿಂದ ಬೇರ್ಪಟ್ಟಿತ್ತು. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಸ್ಥಳಕ್ಕೆ ತಲುಪಿದರು.


Spread the love
Share:

administrator

Leave a Reply

Your email address will not be published. Required fields are marked *