Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

₹6 ಲಕ್ಷ ಹಣ ರಸ್ತೆಯಲ್ಲಿ ಬಿದ್ದಿದ್ದರೂ ಪ್ರಾಮಾಣಿಕತೆ ಮೆರೆದ ವ್ಯಕ್ತಿ: ಕೊಟ್ಟಾಯಂನಲ್ಲಿ ಹೃದಯಸ್ಪರ್ಶಿ ಘಟನೆ!

Spread the love

ಕೊಟ್ಟಾಯಂ :ರಸ್ತೆಯಲ್ಲಿ ಬರೋಬ್ಬರಿ 6 ಲಕ್ಷ ರೂ. ಹಣವನ್ನು ಬೀಳಿಸಿಕೊಂಡು ಹೋಗಿದ್ದ ಮಾಲೀಕನಿಗೆ ತಾನು ಕಳೆದುಕೊಂಡ ಹಣವನ್ನು ಸ್ಥಳೀಯ ವ್ಯಕ್ತಿಯೊಬ್ಬರು ಪ್ರಾಮಾಣಿಕವಾಗಿ ಹಿಂತಿರುಗಿಸಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ವರದಿಯಾಗಿದೆ. ವ್ಯಕ್ತಿಯ ಪ್ರಮಾಣಿಕತೆಗೆ ವ್ಯಾಪಕ ಮೆಚ್ಚುಗೆಗೆಳು ಹರಿದುಬಂದಿವೆ.

ವಕಥಾನಂನ ನಲುನ್ನಕಕಲ್‌ನ ಕುರಿಕಟ್ಟುಪರಂಬದ ಜಾನ್ ಚಾಕೊ ಅವರ ಪುತ್ರ ಬಿನೋಯ್ ಜಾನ್ (40) ಎಂಬುವರು, ಮೀನದಂ ಪ್ರದೇಶದ ರಸ್ತೆಯಲ್ಲಿ ಬಿದ್ದಿದ್ದ 6 ಲಕ್ಷ ರೂ. ಹಣವನ್ನು ಬಾಚಿಕೊಂಡು, ಅದನ್ನು ನೇರವಾಗಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಇದು ಒಂದು ನಿಮಿಷ ಪೊಲೀಸರನ್ನೇ ಅಚ್ಚರಿಗೊಳಿಸಿದೆ. ಹಣವನ್ನು ಕಳೆದುಕೊಂಡು ಪರದಾಡುತ್ತಿದ್ದ ಮಾಲೀಕನಿಗೆ ಖಾಕಿ ಪಡೆ ಕಡೆಗೂ 6 ಲಕ್ಷ ರೂ. ನಗದನ್ನು ಬಿನೋಯ್ ಅವರ ಸಹಾಯದಿಂದ ಹಿಂತಿರುಗಿಸಿದ್ದಾರೆ.

ತಾನೇ ಸಾಲದ ಸುಳಿಯಲ್ಲಿದ್ದರೂ ಒಂದು ರೂಪಾಯಿ ಹಣವನ್ನು ಪಡೆಯದೆ ಅಥವಾ ಕದ್ದು ಪರಾರಿಯಾಗದೆ, ನೇರವಾಗಿ ಪಂಪಾಡಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ ಬಿನೋಯ್ ಅವರ ಪ್ರಾಮಾಣಿಕತೆಗೆ ಪೊಲೀಸರು ಶ್ಲಾಘಿಸಿದ್ದಾರೆ. ಹಣದ ಮಾಲೀಕರಾದ ವಕಥಾನಂ ಮೂಲದ ರೆಜಿಮೋನ್, ಠಾಣೆಯಲ್ಲಿ ಪೊಲೀಸರು ಕೇಳಿದ ದಾಖಲೆಗಳನ್ನು ಹಾಜರುಪಡಿಸಿ, ಹಣ ತಮ್ಮದೇ ಎಂಬುದನ್ನು ದೃಢಪಡಿಸಿದ್ದಾರೆ. ಇದಾದ ಬಳಿಕವೇ ಖಾಕಿ ಹಣವನ್ನು ಹಿಂತಿರುಗಿಸಿದೆ. ಪಂಪಾಡಿ ಪೊಲೀಸ್ ಠಾಣೆ ಐಪಿ ಎಸ್‌ಎಚ್‌ಒ ರಿಚರ್ಡ್ ವರ್ಗೀಸ್, ಎಸ್‌ಐ ಉದಯಕುಮಾರ್ ಅವರು ಬಿನೋಯ್ ಜಾನ್ ಅವರ ಕೈಯಿಂದಲೇ ಹಣವನ್ನು ಮಾಲೀಕ ರೆಜಿಮೋನ್‌ಗೆ ಕೊಡಿಸಿದ್ದಾರೆ,


Spread the love
Share:

administrator

Leave a Reply

Your email address will not be published. Required fields are marked *