ಏರ್ ಇಂಡಿಯಾ ದುರಂತ: ಅಣ್ಣ ಬದುಕಿ ತಮ್ಮ ಸತ್ತ ಭಾರಿ ವಿಪರ್ಯಾಸ

ಅಹ್ಮದಾಬಾದ್: ಏರ್ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 242 ಮಂದಿ ಪೈಕಿ ಓರ್ವ ಪ್ರಯಾಣಿಕನನ್ನು ಬಿಟ್ಟು ಉಳಿದೆಲ್ಲರೂ ಸಾವನ್ನಪ್ಪಿದ್ದರು.
ಜೂನ್ 12ರಂದು ಅಹ್ಮದಾಬಾದ್ನಲ್ಲಿ ಸಂಭವಿಸಿದ್ದ ಏರ್ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 242 ಮಂದಿ ಪೈಕಿ ಓರ್ವ ಪ್ರಯಾಣಿಕನನ್ನು ಬಿಟ್ಟು ಉಳಿದೆಲ್ಲರೂ ಸಾವನ್ನಪ್ಪಿದ್ದರು.

ವಿಶ್ವಾಸ್ಕುಮಾರ್ ರಮೇಶ್ ಎಂಬಾತ ಮಾತ್ರ ಅಚ್ಚರಿಯೆಂಬ ರೀತಿಯಲ್ಲಿ ಜೀವಂತವಾಗಿದ್ದರು. ಹೀಗೆ ಘೋರ ದುರಂತದಲ್ಲಿ ಬದುಕುಳಿದಿದ್ದ ವಿಶ್ವಾಸ್ಕುಮಾರ್ ರಮೇಶ್ ಚಿಕಿತ್ಸೆ ಪಡೆದು ತುಸು ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬಿಡುಗಡೆಯಾದ ಬೆನ್ನಲ್ಲೇ ವಿಶ್ವಾಸ್ಕುಮಾರ್ ರಮೇಶ್ ತನ್ನ ಸಹೋದರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ವಿಪರ್ಯಾಸವೆಂದರೆ ವಿಶ್ವಾಸ್ಕುಮಾರ್ ಸಹೋದರ ಅದೇ ಏರ್ಇಂಡಿಯಾ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಇತ್ತ ಅಣ್ಣ ಬದುಕುಳಿದರೆ ತಮ್ಮ ಉಳಿದ ಪ್ರಯಾಣಿಕರ ಜೊತೆ ಸಾವನ್ನಪ್ಪಿದ್ದರು.
ಡಿಎನ್ಎ ಪ್ರಕ್ರಿಯೆಯೆಲ್ಲ ಮುಗಿದು ಇಂದು ( ಜೂನ್ 18 ) ಅಂತ್ಯಕ್ರಿಯೆ ನಡೆದಿದ್ದು, ಇನ್ನೂ ಗಾಯದ ನೋವಿನಲ್ಲಿರುವ ವಿಶ್ವಾಸ್ಕುಮಾರ್ ತಮ್ಮನ ಶವಯಾತ್ರೆಯಲ್ಲಿ ಹೆಗಲು ಕೊಟ್ಟು ಕಣ್ಣೀರು ಹಾಕುತ್ತಾ ವಿದಾಯ ಹೇಳಿದ್ದಾರೆ.