Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೈಹಿಕ ಸಂಬಂಧಕ್ಕೆ ನಿರಾಕರಣೆ: 65 ವರ್ಷದ ವೃದ್ಧೆಯ ಹತ್ಯೆ, ಆರೋಪಿ ಬಂಧನ

Spread the love

Security forces arrest Maoist who fled from gunbattle in Jharkhand 2 days  ago – ThePrint – ANIFeed

ಕೌಶಾಂಬಿ: ದೈಹಿಕ ಸಂಬಂಧಕ್ಕೆ ನಿರಾಕರಿಸಿದ ತನಗಿಂತ ಸುಮಾರು ಹತ್ತು ವರ್ಷ ದೊಡ್ಡವಳಾಗಿದ್ದ ವೃದ್ಧ ಮಹಿಳೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಸರೈ ಅಕಿಲ್‌ನ ಬಾರೈ ಗ್ರಾಮದಲ್ಲಿ ನಡೆದಿದೆ.

ಸನ್ವರಿ ದೇವಿ (65) ಮೃತ ಮಹಿಳೆ. ದಿನೇಶ್ ಕುಮಾರ್ ಸೇನ್ (55) ಕೊಲೆ ಆರೋಪಿ. ಆತನನ್ನು ಕೌಶಂಬಿ ಜಿಲ್ಲೆಯ ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ಮತ್ತು ಸರೈ ಅಕಿಲ್ ಪೊಲೀಸರ ತಂಡವು ಬಂಧಿಸಿದೆ.

ಕಳೆದ ಮೇ 25 ರಂದು ಸಂಜೆ ಸರೈ ಅಕಿಲ್‌ನ ಬಾರೈ ಗ್ರಾಮದ ಮನೆಯೊಂದರಲ್ಲಿ 65 ವರ್ಷದ ಮಹಿಳೆ ಸನ್ವರಿ ದೇವಿ ಶವ ಕತ್ತು ಹಿಸುಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೌಶಂಬಿ ಜಿಲ್ಲೆಯ ವಿಶೇಷ ಕಾರ್ಯಾಚರಣೆ ಮತ್ತು ಸರೈ ಅಕಿಲ್ ಪೊಲೀಸರ ತಂಡವು ಹಾಲು ವ್ಯಾಪಾರಿ ದಿನೇಶ್ ಕುಮಾರ್ ಸೇನ್ ಎಂಬಾತನನ್ನು ಬಂಧಿಸಿದೆ. ಆರೋಪಿ ದಿನೇಶ್ ಮತ್ತು ಮಹಿಳೆ ಸನ್ವರಿ ದೇವಿ ನಡುವೆ ಸಂಬಂಧವಿತ್ತು ಎನ್ನಲಾಗಿದೆ. ಆಕೆ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಲು ನಿರಾಕರಿಸಿದ್ದರಿಂದ ಕೋಪಗೊಂಡು ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಮೂಲತಃ ಪ್ರಯಾಗ್‌ರಾಜ್‌ನ ಗಂಜಾ ಗ್ರಾಮದವರಾದ ಸನ್ವರಿ ದೇವಿ ಬಾರೈ ಗ್ರಾಮದ ಕೃಷ್ಣ ಕುಮಾರ್ ಸಿಂಗ್ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ. ಮದುವೆಯಾದ ಸುಮಾರು ಮೂರು ವರ್ಷಗಳ ಅನಂತರ ಕೃಷ್ಣ ಕುಮಾರ್ ಆಕೆಯನ್ನು ತೊರೆದಿದ್ದರು. ಬಳಿಕ ಸನ್ವರಿ ತಮ್ಮ ಅತ್ತೆಯ ಪೂರ್ವಜರ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು ಮತ್ತು ಕೃಷಿಯ ಮೂಲಕ ಜೀವನ ಸಾಗಿಸುತ್ತಿದ್ದರು.

ಮೇ 25ರಂದು ಸಂಜೆ ನೆರೆಹೊರೆಯವರು ಆಕೆಯ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಒಳಗೆ ಪ್ರವೇಶಿಸಿದಾಗ ಆಕೆ ಹಾಸಿಗೆಯ ಮೇಲೆ ಮೃತಪಟ್ಟಿರುವುದು ಕಂಡುಬಂದಿತು.

ಮಾಹಿತಿ ತಿಳಿದ ತಕ್ಷಣ ಸಿಒ (ಚೈಲ್) ಸತ್ಯೇಂದ್ರ ತಿವಾರಿ ನೇತೃತ್ವದ ಸರೈ ಅಕಿಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮರಣೋತ್ತರ ವರದಿಯಲ್ಲಿ ಆಕೆಯನ್ನು ಕತ್ತು ಹಿಸುಕಿ ಕೊಂದಿರುವುದು ದೃಢಪಟ್ಟಿದೆ.

ಮೃತರ ಸಹೋದರ ಸುದೀಪ್ ಕುಮಾರ್ ಸಿಂಗ್ ಅವರ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು. ಕೊಲೆ ಪ್ರಕರಣವನ್ನು ಭೇದಿಸಲು ಎಸ್‌ಒಜಿ ಉಸ್ತುವಾರಿ ಪ್ರಭುನಾಥ್ ಸಿಂಗ್ ಮತ್ತು ಸರೈ ಅಕಿಲ್ ಎಸ್‌ಎಚ್‌ಒ ಸುನಿಲ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಎಸ್‌ಪಿ ಕೌಶಂಬಿ ರಾಜೇಶ್ ಕುಮಾರ್ ಎರಡು ತಂಡಗಳನ್ನು ರಚಿಸಿದರು.

ಕೊಲೆಗೆ ಸಂಬಂಧಿಸಿ ದಿನೇಶ್ ಕುಮಾರ್ ಸೇನ್ ಅಲಿಯಾಸ್ ಗುಡ್ಡು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಬರೈ ಗ್ರಾಮದ ನಿವಾಸಿ ಮತ್ತು ವೃತ್ತಿಯಲ್ಲಿ ಹಾಲು ವ್ಯಾಪಾರಿ ಎಂದು ಮಂಗಳವಾರ ಎಎಸ್ಪಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ದಿನೇಶ್ ಮೃತರ ಮನೆಗೆ ಹಾಲು ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸುತ್ತಿದ್ದ. ಕಳೆದ ಎರಡು ವರ್ಷಗಳಿಂದ ಇವರ ನಡುವೆ ಸಂಬಂಧವಿತ್ತು. ಈ ನಡುವೆ ಆರೋಪಿಗೆ ಗಂಟಲಿನಲ್ಲಿ ಕೆಲವು ಸಮಸ್ಯೆಗಳು ಉಂಟಾಗಲು ಪ್ರಾರಂಭವಾಯಿತು. ಮೇ 23ರಂದು ರಾತ್ರಿ ಮಹಿಳೆ ಆತ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ ಎಂಬ ಅನುಮಾನದಿಂದ ಆತನೊಂದಿಗೆ ದೈಹಿಕ ಸಂಬಂಧ ಹೊಂದಲು ನಿರಾಕರಿಸಿದಳು. ಇದರಿಂದ ಕೋಪಗೊಂಡ ಆರೋಪಿ ಆಕೆಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ತನಿಖೆ ವೇಳೆ ತಿಳಿದುಬಂದಿದೆ.

ಕೊಲೆ ಮಾಡಿದ ಬಳಿಕ ಆರೋಪಿ ದಿನೇಶ್ ಕುಮಾರ್ ಸೇನ್ ಮಹಿಳೆಯ ಫೋನ್‌ ಅನ್ನು ತೆಗೆದುಕೊಂಡು ಹೋಗಿ ಮನೆಯ ಸಮೀಪದ ಚರಂಡಿಗೆ ಎಸೆದಿದ್ದಾನೆ. ಇದನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಆರೋಪಿಯ ಸುಳಿವು ಸಿಕ್ಕಿದೆ. ಎಂದು ಎಸ್‌ಒಜಿ ಉಸ್ತುವಾರಿ ಪ್ರಭುನಾಥ್ ಸಿಂಗ್ ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *