ಸಂಬಂಧ ಉಳಿಸಲು ಬಂದವರೇ ಕೊಲೆಗೆ ಬಲಿ: ಮಂಗಳೂರಿನಲ್ಲಿ ಕತ್ತಿಯಿಂದ ದಾಳಿ, ಒಬ್ಬರು ಸಾವು

ಮಂಗಳೂರು: ಗಂಡ ಹೆಂಡತಿಯ ನಡುವೆ ಜಗಳವಾಗಿದ್ದು, ನ್ಯಾಯ ಪಂಚಾಯಿತಿ ಮಾಡಕು ಬಂದಿದ್ದ ಸಂಬಂಧಿಕನನ್ನೇ ಪತಿ ಚಾಕುವಿನಿಂದ ಇರಿದು ಕೊಂದ ಘಟನೆ ಮಂಗಳೂರಿನ ಹೊರವಲಯದ ವಳಚ್ಚಿಲ್ ಎಂಬಲ್ಲಿ ನಡೆದಿದೆ.ವಾಮಂಜೂರಿನ ಸುಲೇಮಾನ್ (50) ಕೊಲೆಯಾದ ದುರ್ದೈವಿ.
ಈ ಸುಲೇಮಾನ್ ಅವರ ಸಂಬಂಧಿ ವಳಚ್ಚಿಲ್ ನಿವಾಸಿ ಮುಸ್ತಾಫಾ (30) ಈ ಕೊಲೆ ಮಾಡಿರುವ ಆರೋಪಿ.
ಸದ್ಯ ಪೊಲೀಸರು ಈಗಾಗಲೇ ಈತನನ್ನು ಬಂಧಿಸಿದ್ದಾರೆ .ಈಗ ಕೊಲೆಯಾಗಿರುವ ಸುಲೈಮಾನ್, ತನ್ನ ಸಂಬಂಧಿ ಮುಸ್ತಫಾನ ಮದುವೆ ನೆರವೇರಿಸಿದ್ದರು ಎನ್ನಲಾಗಿದೆ. ಆದ್ರೆ ಈ ದಂಪತಿ ನಡುವೆ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.
ಹೀಗಾಗಿ ಮಾತುಕತೆ ಮೂಲಕ ಗಲಾಟೆ ಬಗೆಹರಿಸಲು ಸುಲೈಮಾನ್ ರಿಯಾಬ್ & ಸಿಯಾಬ್ ಎಂಬ ಇಬ್ಬರು ಪುತ್ರರೊಂದಿದೆ ಬಂದಿದ್ದು, ಈ ವೇಳೆ ಮುಸ್ತಫಾ ಸುಲೆಮಾನ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಈ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ವೇಳೆ ಆರೋಪಿಯ ದಾಳಿ ತಡೆಯಲು ಮುಂದಾದ ಮುಸ್ತಾಫಾ ಪುತ್ರ ಶಿಯಾಬ್ ಎದೆ ಭಾಗಕ್ಕೆ ಮತ್ತು ರಿಯಾಬ್ ಬಲ ತೋಳಿಗೆ ಚೂರಿಯಿಂದ ಹಲ್ಲೆ ಮಾಡಿದ್ದು ಗಾಯಗೊಂಡಿದ್ದಾರೆ.ಹೀಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.