ಅಂಗವೈಕಲ್ಯ ತಡೆಗೋಡೆಯಾಗಲಿಲ್ಲ – ಪಾರ್ವತಿ ಗೋಪಕುಮಾರ್ ಕೊಚ್ಚಿಯ ಸಹಾಯಕ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ

ತಿರುವನಂತಪುರಂ:12ರ ವಯಸ್ಸಿನಲ್ಲೇ ಅಂಗವೈಕಲ್ಯಕ್ಕೆ ತುತ್ತಾದರೂ, ಛಲಬಿಡದ ಕೇರಳದ ಯುವತಿಯೊಬ್ಬರು ಸತತ ಪ್ರಯತ್ನದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ, ಕೊಚ್ಚಿಯ ಸಹಾಯಕ ಜಿಲ್ಲಾಧಿಕಾರಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.
ಅಪಘಾತದಿಂದ ಬಲಗೈ ಕಳೆದುಕೊಂಡಿದ್ದ ಆಳಪ್ಪುಳದ ಪಾರ್ವತಿ ಗೋಪಕುಮಾರ್, ಎಡಗೈಯಲ್ಲೇ ಬರೆಯುವ ಕೌಶಲ್ಯ ಸಿದ್ಧಿಸಿಕೊಂಡು ಶಿಕ್ಷಣ ಮುಂದುವರಿಸಿದರು.
ಬೆಂಗಳೂರಿನಲ್ಲಿ ಕಾನೂನು ಶಿಕ್ಷಣ ಪಡೆದ ನಂತರ ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ ಅವರು, 2023-24ರ ತಮ್ಮ 2ನೇ ಪ್ರಯತ್ನದಲ್ಲಿ 282ನೇ ರ್ಯಾಂಕ್ನೊಂದಿಗೆ ಉತ್ತೀರ್ಣರಾದರು. ಕೇರಳ ಕೇಡರ್ ಪಡೆದಿರುವ ಪಾರ್ವತಿ ತಮ್ಮ ನೆರೆಯ ಜಿಲ್ಲೆಯಲ್ಲೇ ನೇಮಕಾತಿ ಪಡೆದಿರುವುದು ವಿಶೇಷ.