Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಿವನಿಗೆ ಹೃದಯವಿದ್ರಾವಕ ಪತ್ರ ಬರೆದು ಯುವಕ ಆತ್ಮಹತ್ಯೆ: ವೈರಲ್ ಆದ ವೈಫಲ್ಯದ ನೋವು!

Spread the love

ಹೈದರಾಬಾದ್:‌ ಯುವಕನೊಬ್ಬ ಶಿವನಿಗೆ ಹೃದಯವಿದ್ರಾವಕ ಪತ್ರವೊಂದನ್ನು ಬರೆದು ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಯುವಕನನ್ನು ರೋಹಿತ್ (25) ಎಂದು ಗುರುತಿಸಲಾಗಿದೆ. ಅತ್ಯಂತ ಭಾವನಾತ್ಮಕ ವಿಷಯವೆಂದರೆ ಶಿವನಿಗೆ ಬರೆದ ಪತ್ರದಲ್ಲಿ ರೋಹಿತ್, ‌ ತನ್ನ ಅದೃಷ್ಟ ಮತ್ತು ಜೀವನದಲ್ಲಿನ ವೈಫಲ್ಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾನೆ

ಎಂಎಸ್‌ಸಿ ಮುಗಿಸಿ ಬಿಎಡ್‌ ವ್ಯಾಸಂಗ ಮಾಡುತ್ತಿದ್ದ ರೋಹಿತ್‌, ವೈದ್ಯನಾಗಬೇಕೆಂಬ ಮಹತ್ತರ ಕನಸು ಕಂಡಿದ್ದ. ಆದರೆ ಈ ಕನಸನ್ನು ನನಸಾಗಿಸಲು ಆತನಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಆತ ಶಿವನಿಗೆ ಭಾವನಾತ್ಮಕ ಪತ್ರವೊಂದು ಬರೆದು ಉಸಿರು ಚೆಲ್ಲಿದ್ದಾನೆ. ಸದ್ಯ ಈ ಪತ್ರ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಪತ್ರದಲ್ಲೇನಿದೆ..?: “ಓ ಶಿವ, ನಿನ್ನ ಎಲ್ಲಾ ಬುದ್ಧಿವಂತಿಕೆಯಿಂದ, ನೀನು ನನ್ನ ಹಣೆಬರಹವನ್ನು ಹೀಗೆಯೇ ಬರೆದಿದ್ದೀಯಾ? ನಿನ್ನ ಸ್ವಂತ ಮಗನಿಗೂ ನೀನು ಇದನ್ನೇ ಬರೆಯುತ್ತಿದ್ದೀಯಾ? ನಾವು ನಿಮ್ಮ ಮಕ್ಕಳಲ್ಲವೇ ಎಂದು ಪ್ರಶ್ನಿಸಿದ್ದಾರೆ. ಬದುಕುವ ನೋವು ಸಾಯುವ ನೋವಿಗಿಂತ ಹೆಚ್ಚು. ನಾನು ಸಾಕಷ್ಟು ದಣಿದಿದ್ದೇನೆ. ಬಹುಶಃ ಇದು ನನ್ನ ಅದೃಷ್ಟವಾಗಿರಬಹುದು. ತಮ್ಮ ಜೀವನದಲ್ಲಿ ಕೆಲವು ಒಳ್ಳೆಯ ಹಾಗೂ ಹೃದಯವಂತರನ್ನು ಭೇಟಿಯಾಗಿದ್ದೇನೆ ಆದರೆ ಉಳಿದವರನ್ನು ಮರೆತುಬಿಡುವುದು ಉತ್ತಮ” ಎಂದು ಬರೆದಿದ್ದಾರೆ.

ಇದೀಗ ಆತನ ಕುಟುಂಬದ ಸದಸ್ಯರು, ರೋಹಿತ್ ಆಗಾಗ್ಗೆ ತನ್ನ ಜೀವನದ ಬಗ್ಗೆ ಅತೃಪ್ತಿ ಮತ್ತು ಅತೃಪ್ತನಾಗಿದ್ದ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಈ ಘಟನೆಯು ಮತ್ತೊಮ್ಮೆ ಯುವಕರಲ್ಲಿ ಮಾನಸಿಕ ಒತ್ತಡ ಮತ್ತು ಖಿನ್ನತೆಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.

ಸದ್ಯ ಸ್ಥಳೀಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *