ಅಂತರ್ಜಾತಿ ಪ್ರೇಮ ವಿವಾಹಕ್ಕೆ ಬಲಿಯಾದ ಯುವಕ – ಅಕ್ಕನ ಗಂಡನನ್ನೇ ಕೊಂದ ಮೂವರು ಸಹೋದರರು ಬಂಧನ!

ನಮ್ಮ ದೇಶ ಎಷ್ಟೇ ಆಧುನಿಕತೆ ಮುಂದುವರಿದಿದ್ದರೂ, ಅಂತರ್ಜಾತಿ ಪ್ರೇಮ ವಿವಾಹಕ್ಕೆ ಮಾತ್ರ ಮನ್ನಣೆ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯೊಬ್ಬಳು ಅಂತರ್ಜಾತಿ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದು, ಆಕೆ ಸಹೋದರಿಂದಲೇ ತನ್ನ ಜೀವನದಲ್ಲಿ ಘೋರ ಘಟನೆ ಕಂಡಿದ್ದಾಳೆ.
ಹೌದು, ರಾಜಸ್ಥಾನದ ಜೈಪುರದ ಯುವತಿಯೊಬ್ಬಳು ಗೊವಿಂದ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಗೋವಿಂದ್ ಬೇರೆ ಜಾತಿಯ ಯುವಕನಾದ ಹಿನ್ನೆಲೆ ಆಕೆಯ ಸಹೋದರರಿಗೆ(ಹುಡುಗಿ ಕೊಟ್ಟಿಲ್ಲ) ಮದುವೆಯಾಗಿಲ್ಲ. ಇದರಿಂದ ಕೂಪಿತರಾದ ಮೂವರು ಸಹೋದರರು ಇದೇ ಜೂ.21ರಂದು ಗೋವಿಂದ್ನನ್ನು ಕೊಲೆ ಮಾಡಿದ್ದಾರೆ.

ಅಂತರ್ಜಾತಿ ವಿವಾಹಕ್ಕೆ ಕೊಲೆ
ಸಹೋದರಿಯೂ ಅಂತರ್ಜಾತಿ ಪ್ರೇಮ ವಿವಾಹದಿಂದಾಗಿ ಈ ಮೂವರು ಸಹೋದರರಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಸಮಾಜದಲ್ಲಿ ಮಾನಹಾನಿಯಾಗುವ ಭಯದಿಂದ ಗೋವಿಂದ್ನನ್ನು ಕಲ್ಲಿನಿಂದ ತಲೆಗೆ ಹಾಗೂ ಮುಖಕ್ಕೆ ಹೊಡೆದು ಕೊಂದು, ಯಾರಿಗೂ ತಿಳಿಯಬಾರದೆಂದು ಶವವನ್ನು ಪೊದೆಯಲ್ಲಿ ಹಾಕಿ ಪರಾರಿಯಾಗದ್ದಾರೆ.
ಇನ್ನು ಶವ ಪತ್ತೆಯಾದ ಬಳಿಕ ಮೃತದೇಹವನ್ನು ಗೋವಿಂದ್ನದ್ದೇ ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಾಕಷ್ಟು ಪ್ರಯತ್ನದ ನಂತರ ಆರೋಪಿಗಳಾದ ಓಂ ಪ್ರಕಾಶ್ ಸೈನಿ, ಅಜಯ್ ಸೈನಿ ಮತ್ತು ರಂಜೀತ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ತನಿಖೆ ನಡೆಸುತ್ತಿದ್ದಾರೆ.(ಏ