Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಂಡೀಪುರ ಅರಣ್ಯದಲ್ಲಿ ಆನೆಗಳಿಗೆ ತೊಂದರೆ ನೀಡಿದ ಯುವಕನಿಗೆ ₹25,000 ದಂಡ

Spread the love

ತಿರುವನಂತಪುರಂ: ಬಂಡೀಪುರದ ಅರಣ್ಯ ಒಳಗೆ ಅಕ್ರಮವಾಗಿ ಪ್ರವೇಶಿಸಿ, ಪ್ರಾಣಿಗಳಿಗಳನ್ನು ಪ್ರಚೋದಿಸಿ, ತೊಂದರೆ ನೀಡಿದ ಯುವಕನೊಬ್ಬನಿಗೆ ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ₹25 ಸಾವಿರ ದಂಡ ವಿಧಿಸಿ, ಲಿಖಿತ ಕ್ಷಮಾಪಣೆ ಪತ್ರ ಬರೆಯಿಸಿಕೊಂಡಿದ್ದಾರೆ.

ಏ.13ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹರಿದಾಡಿತ್ತು. ವಯನಾಡ್‌ನ ಸುಲ್ತಾನ್ ಬತ್ತೇರಿಯ ಅಬ್ದುಲ್ ಜಲೀಲ್, ಬಂಡೀಪುರದ ಒಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಣ್ಯದ ಒಳ ಪ್ರವೇಶಿಸಿ ಆನೆಗಳಿಗೆ ಪ್ರಚೋದನೆ ನೀಡಿದ್ದರು. ಈ ವೇಳೆ ಇತರೆ ಪ್ರಯಾಣಿಕರು, ಆಕ್ಷೇಪ ವ್ಯಕ್ತಪಡಿಸಿದರೂ ಕೂಡ ಅದೇ ವರ್ತನೆ ಮುಂದುವರಿಸಿದ್ದರು. ಜಲೀಲ್ ಕೃತ್ಯವನ್ನು ವಿಡಿಯೊ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಲಾಗಿತ್ತು.

ಈ ಕುರಿತು ಕೇರಳ ಮೂಲದ ವನ್ಯಜೀವಿ ಕಾರ್ಯಕರ್ತ ಸತೀಶ್ ಕುಮಾರ್ ಅವರು ಬಂಡೀಪುರ ಹುಲಿ ಸಂರಕ್ಷಣ ಅಧಿಕಾರಿಗಳಿಗೆ ದೂರು ನೀಡಿದ್ದರು. ವಿಡಿಯೊದಲ್ಲಿರುವ ವಾಹನದ ನೋಂದಣಿ ಸಂಖ್ಯೆ ಗುರುತಿಸಿ, ಅಧಿಕಾರಿಗಳು ಆರೋಪಿಯನ್ನು ಕರೆಸಿ ದಂಡ ವಿಧಿಸಿ, ಲಿಖಿತ ಕ್ಷಮಾಪಣೆ ಬರೆಸಿಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *