Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿನ್ನದ ಉಂಗುರ ಕಿತ್ತುಕೊಳ್ಳಲು ಕೈ ಬೆರಳನ್ನೇ ಕಟ್ ಮಾಡಿದ ಕಾರ್ಮಿಕರು, ಮಾಲೀಕನ ಕ್ರೂರ ಹತ್ಯೆ

Spread the love

ಹಾಸನ: ಚಿನ್ನಾಭರಣಕ್ಕಾಗಿ ಉದ್ಯೋಗ ಕೊಟ್ಟ ಮಾಲೀಕನನ್ನೇ ಬರ್ಬರವಾಗಿ ಕೊಂದಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ. ಅರಸೀಕೆರೆ  ನಗರದ ಸುಬ್ರಹ್ಮಣ್ಯ ನಗರ ಬಡಾವಣೆ ಯ ನಿವಾಸಿ ವಿಜಯ್ ಕುಮಾರ್(46) ಎನ್ನುವರನ್ನು ಕಾರ್ಮಿಕರು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಅರಸೀಕೆರೆ ಪಟ್ಟಣದ ಕೆಎಸ್ ಆರ್​ ಟಿಸಿ ಬಸ್ ಡಿಪೋ ಮುಂಭಾಗದಲ್ಲಿ ಕಾಂಟ್ರಕ್ಟರ್ ವಿಜಯ್ ಕುಮಾರ್ ನನ್ನು ಚಿನ್ನದ ಒಡವೆಗಳನ್ನು ದೋಚುವುದಕ್ಕಾಗಿ ಅವರ ಬಳಿ ಕೆಲಸ ಮಾಡುತ್ತಿದ್ದವರೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ವಿಜಯ್​ ಮೈಮೇಲಿದ್ದ ಬಂಗಾರದ ಚಿನ್ನ ಹಾಗೂ ಕೈನಲ್ಲಿದ್ದ ಉಂಗುರಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಅಚ್ಚರಿ ಅಂದ್ರೆ ಉಂಗುರು ತೆಗೆಯಲು ಬರಲಿಲ್ಲವೆಂದು ಕೈ ಬೆರಳನ್ನೇ ಕಟ್ ಮಾಡಿಕೊಂಡು ಕೊಂಡೊಯ್ದಿದ್ದಾರೆ.

ವಿಕ್ರಂನಿಗೆ ಮೊದಲಿನಿಂದಲೂ ವಿಜಯ್ ಕುಮಾರ್ ಮೈಮೇಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿತ್ತು. ಈ ಸಂಬಂಧ ಪತ್ನಿ ಹಾಗೂ ಮಕ್ಕಳನ್ನು ಊರಿನಲ್ಲಿ ಬಿಟ್ಟು ಮತ್ತೋರ್ವ ಸ್ನೇಹಿತನನ್ನು ಕರೆದುಕೊಂಡು ಬಂದಿದ್ದ. ಬಂದು ಒಂದು ವಾರದಲ್ಲಿ ನೆಪವೊಂದನ್ನು ಹೇಳಿ ವಿಜಯ್ ಕುಮಾರ್​ ನನ್ನು ಫೋನ್ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಹತ್ಯೆ ಮಾಡಿದ್ದಾರೆ. ಬಳಿಕ ವಿಜಯ್ ಮೈಮೇಲಿದ್ದ ಚಿನ್ನದ ಸರ, ಉಂಗುರ ಹಾಗೂ ಹಣ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅಲ್ಲದೇ ಒಂದು ಉಂಗುರ ತೆಗೆಯಲು ಬರದಿದ್ದಾಗ ಕೈ ಬೆರಳನ್ನೇ ಕಟ್ ಮಾಡಿಕೊಂಡು ಬಳಿಕ ಉಂಗುರ ತೆಗೆದುಕೊಂಡು ಹೋಗಿದ್ದಾರೆ.

ಅರಸೀಕೆರೆ ನಗರದ ಸುಬ್ರಹ್ಮಣ್ಯ ನಗರ ಬಡಾವಣೆ ಯ ನಿವಾಸಿ ವಿಜಯ್ ಕುಮಾರ್(46) ಶಿವಮೊಗ್ಗ ಬೆಂಗಳೂರು ರಸ್ತೆಯಲ್ಲಿ ಶ್ರೀನಿವಾಸ್ ಎಂಬುವವರಿಗೆ ಸೇರಿದ ಕಟ್ಟಡವೊಂದನ್ನ ನಿರ್ಮಾಣ ಮಾಡುತ್ತಿದರು. ವಿಕ್ರಂ ಎಂಬ ಬಿಹಾರ ಮೂಲದ ಕುಟುಂಬ ಎರಡು ತಿಂಗಳಿಂದ ನಿರ್ಮಾನ ಮಾಡಿಸುತ್ತಿದ್ದರು. ವಿಜಯ್ ಅವರ ಮನೆಯಲ್ಲೇ ವಾಸ ಮಾಡಿಕೊಂಡು ಕೆಲಸ ಮಾಡಿಕೊಂಡಿದ್ದರು. ವಾರದ ಹಿಂದೆ ಊರಿಗೆ ಹೋಗಿದ್ದ ವಿಕ್ರಂ ಪತ್ನಿ ಮಕ್ಕಳನ್ನು ಬಿಟ್ಟು ವಾಪಸ್ ಬರುವಾಗ ಸಚಿನ್ ಎಂಬ ಮತ್ತೋರ್ವ ನನ್ನು ಕರೆದುಕೊಂಡು ಬಂದಿದ್ದ. ವಾರದಿಂದ ಕೆಲಸ ಮಾಡಿಕೊಂಡಿದ್ಸವರು ರಾತ್ರಿ ಏಕಾಏಕಿ ಗುತ್ತಿಗೆದಾರ ವಿಜಯ್ ಅವರಿಗೆ ಕರೆ ಮಾಡಿದ್ದ ವಿಕ್ರಂ, ತನ್ನ ಮೇಲೆ ಸಚಿನ್ ಹಲ್ಲೆ ಮಾಡುತ್ತಿದ್ದಾನೆ ಬನ್ನಿ ಎಂದು ಹೇಳಿದ್ದಾನೆ.

ವಿಕ್ರಂ ಮಾತು ನಂಬಿಕೊಂಡು ವಿಜಯ್ ಕುಮಾರ್, ಏನಾಗಿದೆ ಎಂದು ನೋಡಿ ಬರುವುದಾಗಿ ಕಟ್ಟಡ ಮಾಲೀಕ ಶ್ರೀನಿವಾಸ್​ ಗೆ ಮಾಹಿತಿ ನೀಡಿ ತೆರಳಿದ್ದಾರೆ. ಅಲ್ಲದೇ ಏನಾಗಿದೆ ಎನ್ನುವುದನ್ನು ಹೋಗಿ ಫೋನ್ ಮಾಡಿ ಹೇಳುತ್ತೇನೆಂದು ವಿಜಯ್​ ವಿಕ್ರಂ ಹೇಳಿದ್ದ ಸ್ಥಳಕ್ಕೆ ಹೋಗಿದ್ದಾರೆ. ಆದರೆ ಎಷ್ಟೊತ್ತಾದರೂ ವಿಜಯ್ ಕುಮಾರ್ ಕಡೆಯಿಂದ ಫೋನ್ ಬಾರದಿದ್ದಾಗ ಆತಂಕಗೊಂಡ ಶ್ರೀನಿವಾಸ್, ಕುಡಲೇ ಮನೆ ಬಳಿ ಹಾಕಿಸಿದ್ದ ತಮ್ಮ ಸಿಸಿ ಕ್ಯಾಮೆರಾವನ್ ಪರಿಶೀಲಿಸಿದಾಗ ವಿಕ್ರಂ ಹಾಗು ಸಚಿನ್ ಇಬ್ಬರು ವಿಜಯ್ ಕುಮಾರ್ ಬೈಕ್ ಏರಿ ಹೊರಟಿರೋದು ಕಂಡಿದೆ. ಇದರಿಂದ ಆತಂಕಗೊಂಡ ಶ್ರೀನಿವಾಸ್​ ಸ್ಥಳಕ್ಕೆ ಹೋಗಿ ನೋಡಿದಾಗ ವಿಜಯ್ ಕುಮಾರ್​​ ನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಶ್ರೀನಿವಾಸ್ ಅರಸೀಕೆರೆ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರು ಜಗಳ ಮಾಡುವ ನಾಟಕ ಮಾಡಿದ ಬಿಹಾರ ಮೂಲದ ಕಾರ್ಮಿಕರು, ತಮ್ಮ ಮಾಲೀಕನ‌ ಮೇಲೆ ಅಟ್ಯಾಕ್ ಮಾಡಿದ್ದಾರೆ. ಅಲ್ಲದೇ ವಿಜಯ್ ಕುಮಾರ್ ಮೈ ಮೇಲೆ ಇದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಕ್ಕಾಗಿ ಹತ್ಯೆ ಮಾಡಿದ್ದಾರೆ. ಒಂದು ಬೆರಳಿನ ಉಂಗುರ ಬಿಚ್ಚಲಾಗದೆ ಬೆರಳನ್ನೇ ಕಟ್ ಮಾಡಿ ನಂತರ ಉಂಗುರ ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಕೊಲೆ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *