Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗ್ಯಾಂಗ್‌ಸ್ಟರ್ ನೀರಜ್ ಗೆ ಸಿಎಂ ಗಿಂತ ಝಡ್ ಪ್ಲಸ್ ಭದ್ರತೆ ಸರ್ಕಾರ ನೀಡಿದ್ಯಾಕೆ?

Spread the love

ದೆಹಲಿ :ಆನಾರೋಗ್ಯ ಪೀಡಿತ ಪತ್ನಿಯನ್ನು ನೋಡಲು ಗ್ಯಾಂಗ್​ಸ್ಟಾರ್​ ಒಬ್ಬನಿಗೆ ದೆಹಲಿಯಲ್ಲಿ ಭಾರೀ ಭದ್ರತೆಯೊಂದಿಗೆ ಆಸ್ಪತ್ರೆಗೆ ಕರೆತರಲಾಗಿದೆ. ಇತನಿಗೆ ಕೊಟ್ಟ ಭದ್ರತೆ ನೋಡಿದರೆ ಸಿಎಂ ಸೇರಿದಂತೆ ಪ್ರಭಾವಿ ವ್ಯಕ್ತಿಗಳಿಗೆ ನೀಡಬಹುದಾದ ಝಡ್​​ ಪ್ಲಸ್​ ಸೆಕ್ಯೂರಿಟಿಯಂತೆ ಇದೆ.

ಇದೀಗ ಇತನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗಿದೆ.

ಯಾರೀ ಗ್ಯಾಂಗ್‌ಸ್ಟರ್ ನೀರಜ್ ಬವಾನಾ..?

ನೀರಜ್ ಸೆಹ್ರಾವತ್ ಅಲಿಯಾಸ್ ನೀರಜ್ ಬವಾನ ಸುಮಾರು 18 ವರ್ಷಗಳ ಹಿಂದೆ ಅಪರಾಧ ಜಗತ್ತಿಗೆ(ಅಂಡರ್​ ವಲ್ಡ್​​) ಪ್ರವೇಶಿಸಿದರು. ಗ್ಯಾಂಗ್‌ಸ್ಟರ್ ನೀರಜ್ ಬವಾನ ಅವರ ಹೆಸರು ದೆಹಲಿ NCR ನಲ್ಲಿ ಭಯೋತ್ಪಾದಕರಿಗಿಂತ ಕಡಿಮೆಯಿಲ್ಲ. ನೀರಜ್ ದೆಹಲಿಯ ಬವಾನ ಗ್ರಾಮದ ನಿವಾಸಿ. ಅವರು ತಮ್ಮ ಉಪನಾಮದ ಬದಲಿಗೆ ತಮ್ಮ ಗ್ರಾಮದ ಹೆಸರನ್ನು ಬಳಸುತ್ತಾರೆ. ಅಪರಾಧ ಜಗತ್ತಿನಲ್ಲಿ ಅವರು ಈ ಹೆಸರಿನಿಂದ ಪರಿಚಿತರು. ದೆಹಲಿ ಮತ್ತು ಇತರ ರಾಜ್ಯಗಳಲ್ಲಿ ನೀರಜ್ ವಿರುದ್ಧ ಕೊಲೆ, ದರೋಡೆ ಮತ್ತು ಕೊಲೆ ಬೆದರಿಕೆಗಳಂತಹ ಅನೇಕ ಗಂಭೀರ ಪ್ರಕರಣಗಳು ದಾಖಲಾಗಿವೆ. ನೀರಜ್ ಬವಾನ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ತಿಹಾರ್‌ಗೆ ಹೋದ ನಂತರವೂ ನೀರಜ್ ಸುಧಾರಿಸಲಿಲ್ಲ, ಜೈಲಿನಿಂದ ತನ್ನ ಗ್ಯಾಂಗ್ ಅನ್ನು ನಡೆಸುತ್ತಿದ್ದಾರೆ ಎಂದು ನಂಬಲಾಗಿದೆ.

ನೀರಜ್ ಅವರ ಪತ್ನಿಗೆ ಮೆದುಳಿನಲ್ಲಿ ನರಗಳ ಅಡಚಣೆ ಇದೆ. ಇದೇ ಕಾರಣಕ್ಕಾಗಿ ಅವರು ತಮ್ಮ ಪತ್ನಿಯನ್ನು ನೋಡಿಕೊಳ್ಳಲು ಮಧ್ಯಂತರ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು, ಇದನ್ನು ನ್ಯಾಯಾಲಯ ಅಂಗೀಕರಿಸಿತು. ಜುಲೈ 1 ರಂದು ಭದ್ರತೆಯೊಂದಿಗೆ ನೀರಜ್ ಬವಾನ ಅವರನ್ನು ಒಂದು ದಿನದ ಕಸ್ಟಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆ ಇತನಿಗೆ ಭಾರೀ ಭದ್ರತೆಯ ನಡುವೆ ಆಸ್ಪತ್ರೆಗೆ ಕರೆತರಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *