ಯೌಟ್ಯೂಬರ್ ವಿರುದ್ಧ ಕೋರ್ಟ್ ಸ್ವಯಂ ಕೇಸ್ ದಾಖಲಿಸಿದ್ದೇಕೆ?

ಚಂಡೀಗಢ :ನ್ಯಾಯಮೂರ್ತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಚಂಡೀಗಢ ಮೂಲದ ಯೂಟ್ಯೂಬರ್ ಹಾಗೂ ಪತ್ರಕರ್ತ ಅಜಯ್ ಶುಕ್ಲಾ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿರುವ ಸುಪ್ರೀಂಕೋರ್ಟ್, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದೆ.
ಸಿಜೆಐ ಬಿ.ಆರ್.ಗವಾಯಿ, ಎ.ಜಿ.ಮಸೀಹ್ ಹಾಗೂ ಎ.ಎಸ್.ಚಂದುರ್ಕರ್ ಅವರಿದ್ದ ಪೀಠವು ಈ ಬಗ್ಗೆ ದೂರು ದಾಖಲಿಸಿದ್ದು, ಜತೆಗೆ ವಿಡಿಯೋವನ್ನು ಅಳಿಸಿಹಾಕುವಂತೆಯೂ, ಮತ್ತೊಮ್ಮೆ ಅಂತಹ ವಿಡಿಯೋ ಹಾಕದಂತೆಯೂ ನಿರ್ಬಂಧ ಹೇರಿ ಆದೇಶ ನೀಡಿದೆ.
ಸಿಜೆಐ ಬಿ.ಆರ್.ಗವಾಯಿ, ಎ.ಜಿ.ಮಸೀಹ್ ಹಾಗೂ ಎ.ಎಸ್.ಚಂದುರ್ಕರ್ ಅವರಿದ್ದ ಪೀಠವು ಈ ಬಗ್ಗೆ ದೂರು ದಾಖಲಿಸಿದ್ದು, ಜತೆಗೆ ವಿಡಿಯೋವನ್ನು ಅಳಿಸಿಹಾಕುವಂತೆಯೂ, ಮತ್ತೊಮ್ಮೆ ಅಂತಹ ವಿಡಿಯೋ ಹಾಕದಂತೆಯೂ ನಿರ್ಬಂಧ ಹೇರಿ ಆದೇಶ ನೀಡಿದೆ.
ಜತೆಗೆ ವರಪ್ರದ ಮೀಡಿಯಾದ ಮುಖ್ಯ ಸಂಪಾದಕರಾದ ಶುಕ್ಲಾಗೆ ನೋಟಿಸ್ ನೀಡಿದೆ. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಪೀಠಕ್ಕೆ ಅಭಿನಂದನೆ ಸಲ್ಲಿಸಿದ ಹಿರಿಯ ವಕೀಲ ತುಷಾರ್ ಮೆಹ್ತಾ, ಇದೊಂದು ಗಂಭೀರ ಪ್ರಕರಣ ಎಂದಿದ್ದಾರೆ.