ಬೇಲಿಯೇ ಹೊಲ ಮೇಯ್ದ ಕಥೆ: ಬ್ಯಾಂಕ್ ಸಿಬ್ಬಂದಿಯಿಂದಲೇ ಲಾಕರ್ ಕಳ್ಳತನ!

ಬೆಂಗಳೂರು : ಮನೆಯಲ್ಲಿ ಕಳ್ಳತನ ಆಗುತ್ತೆ ಅಂತಾ ಗ್ರಾಹಕರು ಸುರಕ್ಷಿತವೆಂದು ಬ್ಯಾಂಕ್ ಲಾಕರ್ ಬಳಸಿದ್ರು. ಆದರೆ ಇದೇ ಬ್ಯಾಂಕ್ನ ಸಿಬ್ಬಂದಿಯೇ ಲಾಕರ್ ಕೀ ಬಳಸಿ ಚಿನ್ನ ಕದ್ದಿದ್ದಾರೆ ಎನ್ನುವುದು ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಹೌದು! ಬೆಂಗಳೂರು ಬಸವೇಶ್ವರ ನಗರದ ಖಾಸಗಿ ಬ್ಯಾಂಕ್ವೊಂದರಲ್ಲಿ ನಡೆದ ಈ ಚಿನ್ನದ ಕಳ್ಳತನ ನಿಜಕ್ಕೂ ಬೇಲಿಯೇ ಹೊಲ ಮೆಯ್ದ ಕಥೆ ಅಂತಲೇ ಹೇಳಬೇಕು.
ಬ್ಯಾಂಕ್ನ ಮಹಿಳಾ ಸಿಬ್ಬಂದಿ ಐಶ್ವರ್ಯ ಮತ್ತು ಆಕೆಯ ಗೆಳೆಯ ಹರ್ಷಿತ್, ಲಾಕರ್ನ ಮಾಸ್ಟರ್ ಕೀ ಬಳಸಿ ಗ್ರಾಹಕರಿಗೆ ಗೊತ್ತಾಗದಂತೆ 170 ಗ್ರಾಂ ಚಿನ್ನಾಭರಣ ಕದ್ದಿದ್ದಾರೆ. ಇದರ ಮೌಲ್ಯ ಸುಮಾರು ₹16 ಲಕ್ಷ.! ಈ ಚಿನ್ನ ಮಾರಾಟ ಮಾಡಿ ಇಬ್ಬರೂ ತಮ್ಮ ಸಾಲ ತೀರಿಸಿದ್ದರೆಂಬ ಮಾಹಿತಿಯೂ ಸಿಕ್ಕಿದೆ.
ಮಾರ್ಚ್ 20ರಂದು ಗ್ರಾಹಕರೊಬ್ಬರು ತಮ್ಮ ಲಾಕರ್ ತೆರೆಯುತ್ತಿದ್ದಾಗ ಚಿನ್ನಾಭರಣ ಮಾಯವಾಗಿದೆ ಎಂಬುದು ಬೆಳಕಿಗೆ ಬಂದಿದೆ. ತಕ್ಷಣವೇ ಪೋಲಿಸರಿಗೆ ದೂರು ನೀಡಲಾಗಿದ್ದು, ತನಿಖೆ ಆರಂಭವಾಗಿದೆ. ಲಾಕರ್ ರೂಮ್ಗೆ ಪ್ರವೇಶ ಹೊಂದಿದ್ದ ಐಶ್ವರ್ಯ ಸೇರಿದಂತೆ ಕೆಲವೇ ಕೆಲ ಸಿಬ್ಬಂದಿಗೆ ಮಾತ್ರ ಆಕ್ಸೆಸ್ ಇತ್ತು. ಈ ಮೂಲದಲ್ಲಿ ತನಿಖೆ ಮಾಡಿದಾಗ ಬ್ಯಾಂಕ್ ಸಿಬ್ಬಂದಿ ಸ್ನೇಹಿತನ ಕಳ್ಳಾಟ ಬಯಲಾಗಿದೆ. ಸದ್ಯ ಬ್ಯಾಂಕ್ ಸಿಬ್ಬಂದಿ ಐಶ್ವರ್ಯ, ಹರ್ಷಿತ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದು, ಆರೋಪಿಗಳಿಂದ 16 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.