Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಂಜಿಯೋಪ್ಲ್ಯಾಸ್ಟಿ ಯಾವಾಗ ಅಗತ್ಯ? ಹೃದಯ ರೋಗಗಳ ಪ್ರಾರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

Spread the love

Symptoms & Causes of Heart Failure - Cardiac Tips for healthy heart

ಬೆಂಗಳೂರು : ಪ್ರತಿ ವರ್ಷ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಹೃದಯ ಸಂಬಂಧಿ ಕಾಯಿಲೆಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೃದಯ ಸಂಬಂಧಿತ ಕಾಯಿಲೆಗಳು ಮಾರಕ ಮಾತ್ರವಲ್ಲ, ಜೀವನದ ಗುಣಮಟ್ಟದ ಮೇಲೂ ತೀವ್ರ ಪರಿಣಾಮ ಬೀರುತ್ತವೆ. ಆದರೆ ಅದರ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಆರಂಭಿಕ ಹಂತಗಳಲ್ಲಿ ರೋಗವನ್ನು ತಡೆಗಟ್ಟಲು ಹಲವು ಚಿಕಿತ್ಸಾ ಆಯ್ಕೆಗಳು ಲಭ್ಯವಿದೆ.

ಆಂಜಿಯೋಪ್ಲ್ಯಾಸ್ಟಿ ಅಂತಹ ಒಂದು ವಿಧಾನವಾಗಿದೆ. ಅಪಧಮನಿಗಳು ಕಿರಿದಾಗುವುದು ಅಥವಾ ನಿರ್ಬಂಧಿಸಲ್ಪಡುವುದು ಮತ್ತು ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಪರಿಧಮನಿ ಕಾಯಿಲೆಯ ಚಿಕಿತ್ಸೆಯಲ್ಲಿ ಇದನ್ನು ವಿಶೇಷವಾಗಿ ಬಳಸಲಾಗುತ್ತದೆ. ಇದು ಅಪಧಮನಿಯನ್ನು ತೆರೆಯಲು ಬಳಸುವ ಒಂದು ಸಣ್ಣ ಶಸ್ತ್ರಚಿಕಿತ್ಸೆಯಾಗಿದ್ದು, ಅದನ್ನು ತೆರೆದಿಡಲು ಸ್ಟೆಂಟ್ ಎಂಬ ಸಣ್ಣ ತಂತಿ ಜಾಲರಿಯ ಕೊಳವೆಯನ್ನು ಇರಿಸಲಾಗುತ್ತದೆ.

ಆಂಜಿಯೋಪ್ಲ್ಯಾಸ್ಟಿ ಯಾವಾಗ ಅಗತ್ಯ? :
ಅಪಧಮನಿಯಲ್ಲಿ ಅಡಚಣೆಯಿಂದಾಗಿ ರಕ್ತವು ಹೃದಯವನ್ನು ಸರಿಯಾಗಿ ತಲುಪಲು ಸಾಧ್ಯವಾಗದಿದ್ದಾಗ ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ. ಅದರ ಅಗತ್ಯವನ್ನು ಕಂಡುಹಿಡಿಯಲು, ಆಂಜಿಯೋಗ್ರಾಮ್, ಒತ್ತಡ ಪರೀಕ್ಷೆ ಮತ್ತು ಇಸಿಜಿಯಂತಹ ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತದೆ.

ಆಂಜಿಯೋಪ್ಲ್ಯಾಸ್ಟಿ ಅಗತ್ಯವಿದೆಯೇ ಎನ್ನುವುದನ್ನು ಹೀಗೆ ಗುರುತಿಸಿ:
ಎದೆ ನೋವು :
ಎದೆಯಲ್ಲಿ ಪದೇ ಪದೇ ಸುಡುವ ಅನುಭವ ಅಥವಾ ಒತ್ತಡ ಬಿದ್ದ ಹಾಗೆ ಆಗುತ್ತಿದ್ದರೆ ಅದು ಹೃದಯ ಅಪಧಮನಿಗಳಲ್ಲಿ ಅಡಚಣೆಯ ಸಂಕೇತವಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ. ಇಲ್ಲಿ ಬ್ಲಾಕೆಜ್ ತೆಗೆದುಹಾಕುವ ಮೂಲಕ, ಹೃದಯಕ್ಕೆ ರಕ್ತ ಪೂರೈಕೆ ಸುಧಾರಿಸುತ್ತದೆ.

ಕಾಲುಗಳಲ್ಲಿ ನೋವು :
ಹೃದಯ ಕಾಯಿಲೆಯ ಪರಿಣಾಮಗಳು ಕಾಲುಗಳನ್ನೂ ತಲುಪಬಹುದು. ನಡೆಯುವಾಗ ಅಥವಾ ಸೈಕ್ಲಿಂಗ್ ಮಾಡುವಾಗ ಸ್ನಾಯು ಸೆಳೆತ ಮತ್ತು ನೋವು ಉಂಟಾಗಬಹುದು. ಇದು ಬಾಹ್ಯ ಅಪಧಮನಿ ಕಾಯಿಲೆಯ (PAD) ಸಂಕೇತವಾಗಿದ್ದು, ಇದು ಹೃದಯ ಕಾಯಿಲೆಯ ಅಪಾಯವನ್ನು ಸೂಚಿಸುತ್ತದೆ.

ದೌರ್ಬಲ್ಯ ಮತ್ತು ಆಯಾಸ :
ಸದಾ ದಣಿಯುತ್ತಿದ್ದರೆ ವಿಶೇಷವಾಗಿ ಸ್ವಲ್ಪ ಶ್ರಮದ ನಂತರ ಅಥವಾ ಮೆಟ್ಟಿಲುಗಳನ್ನು ಹತ್ತಿದ ನಂತರ ವಿಪರೀತ ಸುಸ್ತಾಗುತ್ತಿದ್ದರೆ ಇದು ಹೃದ್ರೋಗದ ಲಕ್ಷಣವಾಗಿರಬಹುದು. ಹೀಗಾಗುವಾಗ ತಪಾಸಣೆಯ ನಂತರ ವೈದ್ಯರು ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಲು ಸಲಹೆ ನೀಡಬಹುದು.

ರಕ್ತದೊತ್ತಡದಲ್ಲಿನ ಏರಿಳಿತಗಳು :
ನಿರಂತರ ಅಧಿಕ ರಕ್ತದೊತ್ತಡವು ಹೃದಯದ ಅಪಧಮನಿಗಳನ್ನು ಗಟ್ಟಿಯಾಗಿ ಮತ್ತು ದಪ್ಪವಾಗಿಸುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಡಚಣೆಯನ್ನು ತೆಗೆದುಹಾಕಲು ವೈದ್ಯರು ಆಂಜಿಯೋಪ್ಲ್ಯಾಸ್ಟಿಯನ್ನು ಶಿಫಾರಸು ಮಾಡಬಹುದು.

ಒಸಡುಗಳಲ್ಲಿ ರಕ್ತಸ್ತ್ರಾವ :
ವಸಡಿನ ಕಾಯಿಲೆಗೂ ಹೃದಯ ಕಾಯಿಲೆಗೂ ಸಂಬಂಧವಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಒಸಡುಗಳು ಊದಿಕೊಂಡರೆ ಅಥವಾ ಪದೇ ಪದೇ ರಕ್ತಸ್ರಾವವಾಗುತ್ತಿದ್ದರೆ, ಹೃದಯದ ಆರೋಗ್ಯದ ಬಗ್ಗೆ ಎಚ್ಚರಿಕೆಯಾಗಿರಬಹುದು.

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ)


Spread the love
Share:

administrator

Leave a Reply

Your email address will not be published. Required fields are marked *