Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹವಾಮಾನ ವೈಪರೀತ್ಯದಿಂದ ವೈರಲ್ ಜ್ವರ ಹೆಚ್ಚಳ; ಆಸ್ಪತ್ರೆಗಳತ್ತ ಜನತೆ

Spread the love

ವಿಜಯಪುರ: ಗಣೇಶ ಹಬ್ಬದ ನಿಮಿತ್ತ ಅನೇಕರು ಡಿಜೆ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕು ಖುಷಿ ಪಡುತ್ತಿದ್ದರೆ ಕೆಲವರು ವೈರಲ್‌ ಜ್ವರದಿಂದ ಹೈರಾಣಾಗಿ ಹಾಸಿಗೆ ಹಿಡಿದಿದ್ದಾರೆ. ಸರಕಾರಿ, ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.

ಜಿಲ್ಲೆಯಲ್ಲಿನಿರಂತರ ಮಳೆಯಿಂದ ಹವಾಮಾನ ವೈಪರೀತ್ಯ ಉಂಟಾಗಿದೆ. ಅನೇಕ ದಿನಗಳಿಂದ ತಂಪುಗಾಳಿ, ಬಿಸಿಗಾಳಿ ಬೀಸುತ್ತಿದೆ. ಇಂದು ಮಳೆ ಸುರಿಯದೇ ಬಿಸಿಲು ಹೆಚ್ಚಾಗಿದೆ ಎನ್ನುವಷ್ಟರಲ್ಲೇ ಮಳೆ ಸುರಿಯುತ್ತದೆ. ಮರು ದಿನ ಮಳೆ ಬರುವ ಸಾಧ್ಯತೆ ಇದೆ ಎಂದುಕೊಂಡರೆ ಮಳೆ ಮಾಯವಾಗಿರುತ್ತದೆ. ಹವಾಮಾನದಲ್ಲಿನ ಈ ಬದಲಾವಣೆಗಳಿಗೆ ಹೊಂದಿಕೊಳ್ಳಲಾಗದೆ ಜನತೆ ಪರದಾಡುತ್ತಿದ್ದಾರೆ. ಇದರಿಂದ ಜ್ವರ, ಕೆಮ್ಮು, ತಲೆ ನೋವು, ಕಫ ಸೇರಿದಂತೆ ನಾನಾ ರೀತಿಯ ಕಾಯಿಲೆಗಳಿಂದ ಜನ ಬಳಲುವಂತಾಗಿದೆ.


ಒಪಿಡಿ ಅಧಿಕ

ಕೆಮ್ಮು, ನೆಗಡಿ, ಜ್ವರವಲ್ಲದೇ ಅನೇಕರಲ್ಲಿ ವೈರಾಣು ಜ್ವರ ಕಂಡು ಬಂದಿದೆ. ಇದರಿಂದ ಜನರು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸಂಖ್ಯೆ ಹೆಚ್ಚಾಗಿದೆ. ಒಪಿಡಿಯಲ್ಲಿ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದೆ. ನಗರದ ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ನಿತ್ಯ 200 ಮಕ್ಕಳು ಸೇರಿದಂತೆ 1500 ಜನ ಚಿಕಿತ್ಸೆಗೆ ಬರುತ್ತಿದ್ದಾರೆ. ಸಾಮಾನ್ಯ ದಿನಗಳಿಗಿಂತ ಶೇ.10ರಷ್ಟು ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ ಎನ್ನುತ್ತಾರೆ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು

ಮಕ್ಕಳೇ ಅಧಿಕ:

ವೈರಲ್‌ ಫೀವರ್‌ನಿಂದ ಬಳಲುತ್ತಿರುವವರಲ್ಲಿಮಕ್ಕಳೇ ಅಧಿಕವಾಗಿದ್ದಾರೆ. ನಗರದಲ್ಲಿರುವ ಆಸ್ಪತ್ರೆಗಳ ಮುಂದೆ ಬೆಳಗ್ಗೆಯಿಂದ ರಾತ್ರಿಯವರೆಗೂ ಮಕ್ಕಳ ಪಾಲಕರು ಸರತಿಯಲ್ಲಿನಿಂತಿರುವ ದೃಶ್ಯ ಕಂಡು ಬರುತ್ತಿವೆ. ವೈರಲ್‌ ಫೀವರ್‌ನಿಂದ ಮಕ್ಕಳು ನರಳುವುದನ್ನು ಕಂಡ ತಂದೆ ತಾಯಿಗಳು ಮರುಗುತ್ತಿದ್ದಾರೆ.

ಪಾಳಿಗೆ ಪರದಾಟ:

ಗ್ರಾಮೀಣ ಪ್ರದೇಶಗಳಿಂದ ಮಕ್ಕಳೊಂದಿಗೆ ನಗರಕ್ಕೆ ಆಗಮಿಸುವ ಪಾಲಕರು ಖಾಸಗಿ ಆಸ್ಪತ್ರೆಗಳಲ್ಲಿ ಪಾಳಿ ಹಚ್ಚಲು ಪರದಾಡುವಂತಾಗಿದೆ. ನಗರದ ಜನ ಸಮಯಕ್ಕೆ ಸರಿಯಾಗಿ ಆಗಮಿಸಿ ಪಾಳಿ ಹಚ್ಚಿದರೆ ದೂರದ ಹಳ್ಳಿಗಳಿಂದ ಆಗಮಿಸುವವರಿಗೆ ಪಾಳಿ ಸಿಗುವುದೇ ದುಸ್ತರವಾಗಿದೆ.

ನಿದ್ದೆ ಮಾಯ

ತೀವ್ರ ಜ್ವರ, ನೆಗಡಿಯಿಂದ ಬಳಲುತ್ತಿರುವ ಮಕ್ಕಳು ಉಸಿರಾಟ ಸರಾಗವಾಗಿ ಆಗದೆ ಸಂಕಟ ಅನುಭವಿಸುತ್ತಿದ್ದಾರೆ. ಜಿಲ್ಲಾದ್ಯಂತ ಜ್ವರ ಬಾಧೆ ಹೆಚ್ಚಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ನೆಗಡಿ, ಜ್ವರ ಬಂದ ಮಕ್ಕಳ ಆರೋಗ್ಯ ಸುಧಾರಿಸಲು ಸಾಕಷ್ಟು ಸಮಯ ಬೇಕಾಗುವುದರಿಂದ, ಈ ಸಮಯದಲ್ಲಿ ಪಾಲಕರು ನಿದ್ದೆಗೆಟ್ಟು ಮಕ್ಕಳನ್ನು ಜೋಪಾನ ಮಾಡುವಂತಾಗಿದೆ.


ತಣ್ಣೀರು ಪಟ್ಟಿಯೇ ಗತಿ

ಗ್ರಾಮೀಣ ಪ್ರದೇಶದಲ್ಲಿ ರಾತ್ರೋರಾತ್ರಿ ಮಕ್ಕಳಿಗೆ ಜ್ವರ ಕಾಣಿಸಿಕೊಂಡಾಗ ಪಾಲಕರಿಗೆ ದಿಕ್ಕು ದೋಚದಂತಾಗುತ್ತಿದೆ. ಸಕಾಲಕ್ಕೆ ವೈದ್ಯರ ಸೇವೆ ಸಿಗದ ಕಾರಣ ಬಡ ಮಕ್ಕಳಿಗೆ ತಣ್ಣೀರು ಪಟ್ಟಿಯೇ ಗತಿಯಾಗುತ್ತಿದೆ. ರಾತ್ರಿಯೆಲ್ಲನಿದ್ದೆಗೆಟ್ಟು ಬೆಳಗ್ಗೆ ಚಿಕಿತ್ಸೆಗೆಂದು ನಗರ, ಪಟ್ಟಣದ ಆಸ್ಪತ್ರೆಗಳಿಗೆ ತೆರಳುವ ಅನಿವಾರ್ಯತೆ ಇದೆ.

ಇರಲಿ ಎಚ್ಚರಿಕೆ

-ಮಕ್ಕಳಿಗೆ ಕಾಯಿಸಿ ಆರಿಸಿದ ನೀರು ಕುಡಿಸಬೇಕು.
-ಆದಷ್ಟು ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು.
-ಜ್ವರ ಬಂದಲ್ಲಿ ವೈದ್ಯರ ಸಲಹೆ ಪಡೆಯಬೇಕು.
-ವೈದ್ಯರ ಸಲಹೆ ಇಲ್ಲದೇ ಮೆಡಿಕಲ್‌ ಶಾಪ್‌ಗಳಲ್ಲಿ ಮೆಡಿಸಿನ್‌ ತೆಗೆದುಕೊಳ್ಳಬಾರದು.
-ಮನೆಯಲ್ಲಿ ಸ್ವಚ್ಛತೆ ಕಾಪಾಡಬೇಕು.
-ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
-ಸೊಳ್ಳೆ ಪರದೆಗಳನ್ನು ಬಳಸಬೇಕು

ವಾತಾವರಣ ಬದಲಾವಣೆಯಿಂದಾಗಿ ಹೆಚ್ಚಾಗಿ ಮಕ್ಕಳು, ವೃದ್ಧರು ವೈರಲ್‌ ಫೀವರ್‌ನಿಂದ ಬಳಲುತ್ತಿದ್ದಾರೆ. ನಿತ್ಯ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ. ಆರೋಗ್ಯ ಸಮಸ್ಯೆ ಕಂಡು ಬಂದ ಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದಿದ್ದಾರೆ ಡಾ.ಶಿವಾನಂದ ಮಾಸ್ತಿಹೊಳಿ, ಜಿಲ್ಲಾಶಸ್ತ್ರಚಿಕಿತ್ಸಕ.


Spread the love
Share:

administrator

Leave a Reply

Your email address will not be published. Required fields are marked *