Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಐಪಿಎಸ್ ಡಿ.ರೂಪಾ ವಿರುದ್ಧ ಡಿಐಜಿಪಿ ವರ್ತಿಕಾ ಕಟಿಯಾರ್ ದೂರು – ಅನಧಿಕೃತ ಪ್ರವೇಶ ಮತ್ತು ದಾಖಲೆಗಳ ಲೋಪದೋಷ?

Spread the love

ರಾಜ್ಯ ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ (ISD) ಐಜಿಪಿ ಡಿ.ರೂಪಾ ವಿರುದ್ಧ ಡಿಐಜಿಪಿ ವರ್ತಿಕಾ ಕಟಿಯಾರ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿರುವ ವಿಷಯ ಬೆಳಕಿಗೆ ಬಂದಿದೆ.

ಅನಧಿಕೃತ ಪ್ರವೇಶ ಮತ್ತು ದಾಖಲೆಗಳೊಂದಿಗೆ ಆಟ

ವರದಿಯ ಪ್ರಕಾರ, ಡಿ.ರೂಪಾ ಅವರ ಆದೇಶದ ಮೇರೆಗೆ, ಇಬ್ಬರು ಕೆಳ ಹಂತದ ಸಿಬ್ಬಂದಿ ಡಿಐಜಿಪಿ ಕಚೇರಿ ಕೊಠಡಿಗೆ ಅನಧಿಕೃತ ಪ್ರವೇಶ ಮಾಡಿ, ಕೆಲವು ಕಡತಗಳನ್ನು ಅಲ್ಲಿಗೆ ಇರಿಸಿ, ಅದರ ಫೋಟೋ ತೆಗೆದು ವಾಟ್ಸಾಪ್ ಮೂಲಕ ರೂಪಾ ಅವರಿಗೆ ಕಳುಹಿಸಿದ್ದಾರೆ.

ಹೆಡ್ ಕಾನ್‌ಸ್ಟೇಬಲ್ ಟಿ.ಎಸ್. ಮಂಜುನಾಥ್ ಮತ್ತು ಹೋಂ ಗಾರ್ಡ್ ಮಲ್ಲಿಕಾರ್ಜುನ್ (ಐಜಿಪಿ ಕಚೇರಿ ಸೆಂಟ್ರಿ) 2024ರ ಸೆಪ್ಟೆಂಬರ್ 6ರಂದು, ಡಿ.ರೂಪಾ ಅವರ ಸೂಚನೆಯಂತೆ, ಕಂಟ್ರೋಲ್ ರೂಮ್‌ನಿಂದ ಕಚೇರಿ ಕೀಲಿಯನ್ನು ಪಡೆದು, ಡಿಐಜಿಪಿ ಕಚೇರಿ ಬಾಗಿಲು ತೆರೆಯುತ್ತಾರೆ. ನಂತರ, ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಕೆಲ ಕಡತಗಳನ್ನು ಅಲ್ಲಿಗೆ ಇರಿಸಿ, ಫೋಟೋ ತೆಗೆದು, ರೂಪಾ ಅವರಿಗೆ ವಾಟ್ಸಾಪ್‌ನಲ್ಲಿ ಕಳುಹಿಸಿದರೆಂಬ ಆರೋಪ ಇದೆ.

ಇದರ ಮುನ್ನ, ಡಿಐಜಿಪಿ ಅವರ ಆಪ್ತ ಸಹಾಯಕ ಎಚ್. ಕಿರಣ್ ಕುಮಾರ್, ಮಂಜುನಾಥ್‌ಗೆ “ಬಾಗಿಲು ತೆರೆಯಬಾರದು” ಎಂದು ತಿಳಿಸಿದ್ದರೂ, ಆದೇಶವನ್ನು ಕಡೆಗಣಿಸಿ, ಕೊಠಡಿಗೆ ಪ್ರವೇಶಿಸಲಾಗಿದೆ. ಈ ಕುರಿತು ವಿಚಾರಣೆಯ ವೇಳೆ, ಮಂಜುನಾಥ್ ಮತ್ತು ಮಲ್ಲಿಕಾರ್ಜುನ್, ರೂಪಾ ಅವರ ಆದೇಶದಂತೆ ಅವರು ಈ ಕಾರ್ಯವನ್ನು ನಡೆಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ನೀತಿ-ನಿಯಮ ಉಲ್ಲಂಘನೆಯ ಆರೋಪ

ಡಿಐಜಿಪಿ ವರ್ತಿಕಾ ಕಟಿಯಾರ್, ತಮ್ಮ ಕಚೇರಿಯಲ್ಲಿ ಗೌಪ್ಯ ದಾಖಲೆಗಳು ಇರುವುದು ಮತ್ತು ಅನುಮತಿ ಇಲ್ಲದೆ ಕೊಠಡಿ ಪ್ರವೇಶಿಸುವುದು ಕಾನೂನು ಬಾಹಿರ ಕೃತ್ಯವಾಗಿದೆ ಎಂದು ದೂರಿದ್ದಾರೆ. ಇದನ್ನು ಉದ್ದೇಶಪೂರ್ವಕ ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆ ಇದೆ. ಅಹಿತಕರ ಘಟನೆಗಳಿಗೆ ರೂಪಾ ಹೊಣೆಗಾರ’

ಈ ಘಟನೆ ಬೆಳಕಿಗೆ ಬಂದ ಬಳಿಕ, ಈ ಹಿಂದೆ ಇಂತಹ ಅನೇಕ ಘಟನೆಗಳು ನಡೆದಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಮುಂದೆಯೂ ಈ ರೀತಿಯ ಕೃತ್ಯಗಳು ನಡೆಯಬಹುದಾದ ಕಾರಣ, ಯಾವುದೇ ಅಹಿತಕರ ಘಟನೆ ಸಂಭವಿಸಿದರೆ, ಅದಕ್ಕೆ ಡಿ.ರೂಪಾ ನೇರ ಹೊಣೆಗಾರರಾಗಬೇಕೆಂದು ವರ್ತಿಕಾ ಕಟಿಯಾರ್ ತಮ್ಮ ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.

ಹಿಂದಿನ ಬೆದರಿಕೆಯ ವಿವರ

ಇದೇ ಮೊದಲಲ್ಲ, ಡಿ.ರೂಪಾ ಅವರ ವಿರುದ್ಧ ಡಿಐಜಿಪಿ ಆರೋಪ ಹೊರಿಸಿರುವುದು. ದೂರಿನ ಪ್ರಕಾರ, ಡಿ.ರೂಪಾ ಅವರು ಇದಕ್ಕೂ ಮುನ್ನ, “ನಿಮ್ಮ ವಾರ್ಷಿಕ ವರದಿ ಹಾಳು ಮಾಡುತ್ತೇನೆ” ಮತ್ತು “ನಾನು ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ನಂತರ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿದ್ದರು. ಕಾನೂನು ಕ್ರಮಕ್ಕೆ ಆಗ್ರಹ

ಇಂತಹ ಪ್ರಭಾವ ಬಳಸಿ, ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಹ ಅವರ ಇಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಒತ್ತಾಯಿಸಲಾಗಿದೆ. ಈ ಕಾರಣದಿಂದ, ಡಿ.ರೂಪಾ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ, ಡಿಐಜಿಪಿ ವರ್ತಿಕಾ ಕಟಿಯಾರ್ ಮನವಿ ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *