Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

RSS ಮತ್ತು RAW ಸಂಸ್ಥೆಗಳ ಮೇಲೆ ನಿರ್ಬಂಧಕ್ಕೆ USCIRF ಆಗ್ರಹ

Spread the love

ಹೊಸದಿಲ್ಲಿ: ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಗತಿಗಳ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿರುವ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF), ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಭಾರತದ ಗುಪ್ತಚರ ವಿಭಾಗ ರಿಸರ್ಚ್‌ ಆಂಡ್ ಅನಾಲಿಸಿಸ್‌ ವಿಂಗ್ (RAW) ಸೇರಿದಂತೆ ಕೆಲವು ಸಂಸ್ಥೆಗಳ ವಿರುದ್ಧ ನಿರ್ಬಂಧಗಳನ್ನು ಹೇರಲು ಶಿಫಾರಸು ಮಾಡಿದೆ.
ತನ್ನ ಇತ್ತೀಚಿನ ವರದಿಯಲ್ಲಿ USCIRF, ಧಾರ್ಮಿಕ ಸ್ವಾತಂತ್ರ್ಯದ ತೀವ್ರ ಉಲ್ಲಂಘನೆಗಳಲ್ಲಿ ಭಾಗಿಯಾದ ಅಥವಾ ಅವನ್ನು ಬೆಂಬಲಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಅವರ ಆಸ್ತಿಗಳನ್ನು ಫ್ರೀಝ್ ಮಾಡುವುದು ಹಾಗೂ ಅಮೆರಿಕ ಪ್ರವೇಶವನ್ನು ನಿಷೇಧಿಸುವುದನ್ನು ಶಿಫಾರಸು ಮಾಡಿದೆ.

ಇದಲ್ಲದೆ, ಧಾರ್ಮಿಕ ಸ್ವಾತಂತ್ರ್ಯದ ಗಂಭೀರ ಉಲ್ಲಂಘನೆಗಳು ನಡೆಯುತ್ತಿರುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸಿ, ಅದನ್ನು “ವಿಶೇಷ ಕಾಳಜಿಯ ದೇಶ” (CPC) ಎಂದು ಘೋಷಿಸಬೇಕು ಎಂದು USCIRF ಹೇಳಿದೆ. ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಸುಧಾರಣೆಯಾದಾಗ ಮಾತ್ರ ಅಮೆರಿಕ ನೆರವು ಮತ್ತು ವ್ಯಾಪಾರ ನೀತಿಗಳನ್ನು ಮಾಡಬೇಕು ಎಂದು ಅದು ಶಿಫಾರಸು ಮಾಡಿದೆ.
2025ರಲ್ಲಿ ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿ ಹದಗೆಟ್ಟಿದೆ ಎಂದು ವರದಿ ಹೇಳಿದೆ. ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪೂಜಾ ಸ್ಥಳಗಳನ್ನು ಗುರಿಯಾಗಿಸಿ ಸರ್ಕಾರ ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಅದು ಆರೋಪಿಸಿದೆ.

ಹಲವಾರು ರಾಜ್ಯಗಳು ಮತಾಂತರ ವಿರೋಧಿ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸುತ್ತಿವೆ ಎಂದು ವರದಿ ಹೇಳಿದೆ. ಅಧಿಕಾರಿಗಳು ಜನರನ್ನು ದೊಡ್ಡ ಪ್ರಮಾಣದಲ್ಲಿ ಬಂಧಿಸಿ, ಕೆಲವರನ್ನು ಹೊರಹಾಕುತ್ತಿದ್ದಾರೆ ಎಂಬ ಆರೋಪವೂ ಇದೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ದಾಳಿಗಳೂ ನಡೆಯುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
3 ಪಹಲ್ಲಾಮ್ನಲ್ಲಿ 26 ನಾಗರಿಕರು ಸಾವನ್ನಪ್ಪಿದ ಭಯೋತ್ಪಾದಕ ದಾಳಿಯ ನಂತರ, ದೇಶದಲ್ಲಿ ಮುಸ್ಲಿಂ ವಿರೋಧಿ ಭಾವನೆಗಳು ತೀವ್ರಗೊಂಡಿವೆ ಎಂದು ವರದಿ ತಿಳಿಸಿದೆ. ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ನಡೆದ ಕೆಲವು ಘಟನೆಗಳನ್ನು ಉದಾಹರಣೆಯಾಗಿ ನೀಡಲಾಗಿದೆ.

ಉತ್ತರ ಪ್ರದೇಶದಲ್ಲಿ ಕಾಶ್ಮೀರ ದಾಳಿಗೆ ಸೇಡು ತೀರಿಸುವುದಾಗಿ ಹೇಳಿ ಒಬ್ಬ ವ್ಯಕ್ತಿ ಮುಸ್ಲಿಂ ರೆಸ್ಟೋರೆಂಟ್ ಕಾರ್ಮಿಕನನ್ನು ಗುಂಡಿಕ್ಕಿ ಕೊಂದ ಘಟನೆ ವರದಿ ಉಲ್ಲೇಖಿಸಿದೆ.
ಅದೇ ಘಟನೆ ನಂತರ, ಕೆಲ ಧಾರ್ಮಿಕ ಅಲ್ಪಸಂಖ್ಯಾತರನ್ನು “ಅಕ್ರಮ ವಲಸಿಗರು” ಎಂದು ಹೇಳಿ ದೇಶದಿಂದ ಹೊರಹಾಕಲಾಗಿದೆ ಎಂದು ವರದಿ ಹೇಳಿದೆ.
ಸುಮಾರು 40 ರೋಹಿಂಗ್ಯಾ ನಿರಾಶ್ರಿತರನ್ನು (ಅವರಲ್ಲಿ 15 ಮಂದಿ ಕ್ರಿಶ್ಚಿಯನ್ನರು) ಭಾರತೀಯ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿ ಹೇಳಿದೆ.
ಅವರನ್ನು ಮ್ಯಾನ್ಮಾ‌ರ್ ಹತ್ತಿರದ ಸಮುದ್ರಕ್ಕೆ ಕರೆದೊಯ್ಯಲಾಗಿದೆ. ಅಲ್ಲಿ ಜೀವ ರಕ್ಷಕ ಜಾಕೆಟ್ ಹಾಕಿಸಿ, ನೀರಿಗೆ ಇಳಿಸಿ ತೀರದ ಕಡೆ ಈಜಲು ಹೇಳಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಮುಸ್ಲಿಮರ ವಕ್ಸ್ ಆಸ್ತಿಗಳ ನಿರ್ವಹಣಾ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸುವ ವಕ್ಸ್ (ತಿದ್ದುಪಡಿ) ಮಸೂದೆಗೂ USCIRF ಆಕ್ಷೇಪ ವ್ಯಕ್ತಪಡಿಸಿದೆ.
ಮಹಾರಾಷ್ಟ್ರ, ಅಸ್ಸಾಂ, ಉತ್ತರಾಖಂಡ ಮತ್ತು ರಾಜಸ್ಥಾನ ಸರ್ಕಾರಗಳು ಕಠಿಣ ಮತಾಂತರ ವಿರೋಧಿ ಕಾನೂನುಗಳನ್ನು ತರಲು ಮುಂದಾಗಿರುವುದನ್ನೂ ವರದಿ ಉಲ್ಲೇಖಿಸಿದೆ. ಮಹಾರಾಷ್ಟ್ರ ರಾಜ್ಯವು ಡಿಸೆಂಬರ್ನಲ್ಲಿ ಧಾರ್ಮಿಕ ಮತಾಂತರಗಳನ್ನು ತಡೆಯಲು ಕಠಿಣ ಕಾನೂನು ತರಲು ಯೋಜನೆ ಘೋಷಿಸಿದ್ದು, ಛತ್ತೀಸ್ ಗಢ ರಾಜ್ಯವು ನಂಬಿಕೆ ಗುಣಪಡಿಸುವ ಸಭೆಗಳನ್ನು ಗುರಿಯಾಗಿಸುವ ಹೊಸ ಕಾನೂನು ಪ್ರಸ್ತಾಪಿಸಿದೆ. ಅಸ್ಸಾಂ ರಾಜ್ಯವು “ಲವ್ ಜಿಹಾದ್” ತಡೆಯಲು ಶಾಸನ ತರಲು ಮುಂದಾಗಿದೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರ, ಅಸ್ಸಾಂ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲಿ ಮತಾಂತರ ವಿರೋಧಿ ಕಾನೂನುಗಳನ್ನು ಕಠಿಣಗೊಳಿಸಲು ಕ್ರಮಗಳು ನಡೆಯುತ್ತಿವೆ ಎಂದು ವರದಿ ಹೇಳಿದೆ. ಮಹಾರಾಷ್ಟ್ರದಲ್ಲಿ ಹೊಸ ಕಾನೂನು ತರಲು ಯೋಜನೆಯಿದೆ. ಛತ್ತೀಸ್ತಡದಲ್ಲಿ ಪ್ರಾರ್ಥನೆ ಮಾಡಿದರೆ ರೋಗ ಗುಣವಾಗುತ್ತದೆ ಎಂದು ಹೇಳುವ ಪ್ರಾರ್ಥನಾ ಸಭೆಗಳನ್ನು ಗುರಿಯಾಗಿಸುವ ಹೊಸ ಕಾನೂನು ಪ್ರಸ್ತಾಪಿಸಲಾಗಿದೆ. ಅಸ್ಸಾಂನಲ್ಲಿ ಲವ್ ಜಿಹಾದ್ ತಡೆಯಲು ಕಾನೂನು ತರಲು ಮುಂದಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದಲ್ಲದೆ, 2020ರ ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಸೇರಿದಂತೆ ಹಲವರು ವಿಚಾರಣೆಯಿಲ್ಲದೆ ಐದನೇ ವರ್ಷವೂ ಜೈಲಿನಲ್ಲಿ ಇದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಅವರ ಪರವಾಗಿ ವಕಾಲತ್ತು ವಹಿಸುವವರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ಬಳಸುವ ಪ್ರಕ್ರಿಯೆ ಮುಂದುವರಿದಿದೆ ಎಂದು USCIRF ವರದಿ ಕಳವಳ ವ್ಯಕ್ತಪಡಿಸಿದೆ.


Spread the love
Share:

administrator

Leave a Reply

Your email address will not be published. Required fields are marked *